ಕನ್ನಡಪ್ರಭ ವಾರ್ತೆ ಮಂಡ್ಯ
ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ಚಂದಗಾಲು ವಿಜಯ್ಕುಮಾರ್ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮುಖಂಡರೆನಿಸಿದ್ದಾರೆ. ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ. ಪಕ್ಷ ವಹಿಸಿದ ಜವಾಬ್ದಾರಿಗಳನ್ನು ಆಯಾ ಕಾಲಘಟ್ಟದಲ್ಲಿ ಸಮರ್ಥವಾಗಿ ನಿಭಾಯಿಸುವಲ್ಲೂ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಕಾಂಗ್ರೆಸ್ ನಾಯಕರೆಲ್ಲರ ವಿಶ್ವಾಸ ಗಳಿಸಿಕೊಂಡು ಮುನ್ನಡೆಯುತ್ತಿದ್ದಾರೆ ಎಂದರು.
ಪಕ್ಷದ ಹಿರಿಯ ಮುಖಂಡರೆನಿಸಿಕೊಂಡಿರುವ ಅವರಿಗೆ ಪಕ್ಷದೊಳಗೆ ಜವಾಬ್ದಾರಿಯುತ ಸ್ಥಾನವನ್ನು ನೀಡುವುದರ ಜೊತೆಗೆ ನಿಗಮ-ಮಂಡಳಿಗಳಲ್ಲಿ ಅವರಿಗೆ ಸ್ಥಾನ-ಮಾನಗಳು ದೊರಕಿದರೆ ಪಕ್ಷಕ್ಕೆ ಇನ್ನಷ್ಟು ನಿಷ್ಠೆಯಿಂದ ದುಡಿಯಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಿಸಿದರು.ಮುಖಂಡ ಸೋಮಶೇಖರ್ ಕೆರಗೋಡು ಮಾತನಾಡಿ, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರಾಗಿರುವ ವಿಜಯಕುಮಾರ್ ಆರಂಭದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಪಕ್ಷ ನಿಷ್ಠೆಗೆ ಹೆಸರಾಗಿದ್ದಾರೆ. ಅವರಿಗೆ ಮತ್ತಷ್ಟು ಉನ್ನತ ರಾಜಕೀಯ ಸ್ಥಾನ-ಮಾನಗಳು ದೊರೆಯಲಿ ಎಂದು ಆಶಿಸಿದರು.
ಗಿಡನೆಟ್ಟು ನೀರುಣಿಸಿ ಕರವೇ ನಾರಾಯಣಗೌಡರ ಹುಟ್ಟುಹಬ್ಬ
ನಂತರ ಹರೀಶ್ಗೌಡ ಮಾತನಾಡಿ, ನಾರಾಯಣಗೌಡರು ಕನ್ನಡ ನಾಡು, ನುಡಿ, ಜಲದ ರಕ್ಷಣೆ ಹಾಗೂ ಕನ್ನಡಿಗರಿಗೆ ಅನ್ಯಾಯವಾದಲ್ಲಿ ನಿರಂತರ ದ್ವನಿ ಎತ್ತುತ್ತಿದ್ದಾರೆ. ಅಲ್ಲದೆ ಉದ್ಯೋಗ ಕ್ಷೇತ್ರದಲ್ಲಿ ಕನ್ನಡಿಗರಿಗೆ ಹಾಗೂ ಹೊರಭಾಷಿಗರಿಂದ ಕನ್ನಡಕ್ಕೆ ಧಕ್ಕೆಯಾಗುವುದನ್ನು ತಡೆಹಿಡಿದಿದ್ದಾರೆ ಎಂದರು.ಕಾವೇರಿ ನದಿ ನೀರು, ಬೆಳಗಾಗಿ ಗಡಿ ವಿವಿದ ಹಾಗೂ ಕನ್ನಡ ನಾಮಫಲಕಗಳ ಕಡ್ಡಾಯ ಅಳವಡಿಕೆ ಸೇರಿದಂಥೆ ಅನೇಕ ಮಹತ್ವದ ಹೋರಾಟಗಳು ಸೇರಿದಂತೆ ಚಳವಳಿಗಳಿಂದ ಕನ್ನಡದ ಮನೆ ಮಾತಾಗಿದ್ದಾರೆ ಎಂದರು.