ಮನರೇಗಾ ಹೆಸರು ಬದಲಾವಣೆಗೆ ಖಂಡನೆ: ಕಾಂಗ್ರೆಸ್‌ ಪ್ರತಿಭಟನೆ

KannadaprabhaNewsNetwork |  
Published : Jan 31, 2026, 01:45 AM IST
30ಎಎನ್‌ಟಿ1ಇಪಿ: ಆನವಟ್ಟಿಯ ನಾಡ ಕಚೇರಿ ಮುಂದೆ ಮನರೇಗಾ ಹೆಸರು ಬದಲಾವಣೆ ಮಾಡುತ್ತಿರುವ ಕೇಂದ್ರ ಸರ್ಕಾರ ವಿರುದ್ದ  ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿದ್ದ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ ಮಾತನಾಡಿದರು. | Kannada Prabha

ಸಾರಾಂಶ

ವಿಶ್ವ ಮೆಚ್ಚಿದ ಮಹಾನ್‌ ನಾಯಕ ಮಹಾತ್ಮ ಗಾಂಧಿ ಅವರಿಗೆ ಸ್ವಾರ್ಥ ರಾಜಕಾರಣಕ್ಕಾಗಿ, ನಿತ್ಯವೂ ಅಪಮಾನ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ಕೇಂದ್ರ ಸರ್ಕಾರಕ್ಕೆ ದಿಕ್ಕಾರಗಳನ್ನು ಹಾಕುತ್ತಾ ಕಾಂಗ್ರೆಸ್‌ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಆನವಟ್ಟಿಯ ನಾಡ ಕಚೇರಿ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ಮಾಡಿದರು.

ಕನ್ನಡಪ್ರಭ ವಾರ್ತೆ ಆನವಟ್ಟಿ

ವಿಶ್ವ ಮೆಚ್ಚಿದ ಮಹಾನ್‌ ನಾಯಕ ಮಹಾತ್ಮ ಗಾಂಧಿ ಅವರಿಗೆ ಸ್ವಾರ್ಥ ರಾಜಕಾರಣಕ್ಕಾಗಿ, ನಿತ್ಯವೂ ಅಪಮಾನ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ಕೇಂದ್ರ ಸರ್ಕಾರಕ್ಕೆ ದಿಕ್ಕಾರಗಳನ್ನು ಹಾಕುತ್ತಾ ಕಾಂಗ್ರೆಸ್‌ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಆನವಟ್ಟಿಯ ನಾಡ ಕಚೇರಿ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ಮಾಡಿದರು.

ಶುಕ್ರವಾರ ಸಚಿವರ ಕಚೇರಿಯಲ್ಲಿ ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಹುತಾತ್ಮ ದಿನದ ಶೋಕಾಚಾರಣೆ ಆಚರಿಸಿ, ನಂತರ ಕೇಂದ್ರ ಸರ್ಕಾರದ ನಡೆ ವಿರುದ್ಧ ಪ್ರತಿಭಟನೆ ಕೈಗೊಂಡರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆನವಟ್ಟಿ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ ಮಾತನಾಡಿ, ಹಳ್ಳಿಗಳ ಉದ್ದಾರ, ಮಹಿಳೆಯರ ಸಬಲೀಕರಣ, ಸ್ಥಳೀಯ ಸಂಸ್ಥೆಯ ಬಲವರ್ಧನೆ, ಸಮಾನ ವೇತನ ಹೀಗೆ ಹತ್ತು ಹಲವು ಉದ್ದೇಶಗಳನ್ನು ಇಟ್ಟುಕೊಂಡು ಕಾಂಗ್ರೆಸ್‌ ಪಕ್ಷದ ಅಡಳಿತಾವಧಿಯಲ್ಲಿ ಜಾರಿಗೆ ತಂದ ಮಹಾತ್ಮ ಗಾಂಧಿ ಹೆಸರಿನ ಮನರೇಗಾ ಯೋಜನೆಯ ಹೆಸರನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿ, ಹಳ್ಳಿಗಳ ಅಭಿವೃದ್ಧಿಗೆ ಮಾರಕವಾದ ಯೋಜನೆ ಸೃಷ್ಟಿಸಿ, ದ್ವೇಷ ಭಾವನೆ ಬೆಳಸುವ ಸಂಚು ಮಾಡಿರುವುದನ್ನು ನಾವು ಒಪ್ಪುವುದಿಲ್ಲ. ಕೂಡಲೇ ಮರುನಾಮಕರಣ ಉದ್ದೇಶವನ್ನು ಕೈಬಿಟ್ಟು ಮನರೇಗಾ ಯೋಜನೆಯನ್ನೇ ಮುಂದುವರೆಸಬೇಕು ಎಂದು ಅಗ್ರಹಿಸಿದರು.

ಮನರೇಗಾ ಹೆಸರು ಬದಲಾಯಿಸದಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿ, ನಂತರ ನಾಡ ಕಚೇರಿಯ ಉಪ ತಹಸೀಲ್ದಾರ್‌ ಶಿವ ಪ್ರಸಾದ್‌ ಅವರ ಮೂಲಕ, ಕೇಂದ್ರ ಸರ್ಕಾರಕ್ಕೆ ರವಾನಿಸುವಂತೆ ಕಾಂಗ್ರೆಸ್‌ ಮುಖಂಡರು ಮನವಿ ಸಲ್ಲಿಸಿದರು.

ಜಿಲ್ಲಾ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ಪಿ ರುದ್ರಗೌಡ ಗಿಣಿವಾಲ, ವೀರೇಶ್‌ ಕೊಟಗಿ, ಮಧುಕೇಶ್ವರ ಪಾಟೀಲ್‌, ಶಿವಲಿಂಗೇಗೌಡ, ಸುರೇಶ್‌ ಹಾವಣ್ಣನವರ್‌, ಧರ್ಮನಾಯ್ಕ, ಬಸವಂತಪ್ಪ, ಪ್ರವೀಣ್‌ ಹಿರೇ ಇಡಗೋಡು ಅವರು ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಮಾತನಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಜರ್ಮಲೆ ಚಂದ್ರಶೇಖರ್‌, ಅನೀಶ್‌ ಪಾಟೀಲ್‌, ಸಂಜೀವ ತರಕಾರಿ, ಚಾಂದ್‌ ಸಾಬ್‌, ಅಜೀಂಸಾಬ್‌, ಓಂಕಾರಿ ನಾಯ್ಕ, ಶಿವಕುಮಾರ್‌ ತತ್ತೂರು, ಹರೀಶ್‌ ದಚ್ಚು, ಚಂದ್ರಪ್ಪ ವೃತ್ತಿಕೊಪ್ಪ, ವಿಜೇಂದ್ರ ಸ್ವಾಮಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಿಬಿ ಗೇಟ್‌ ಬದಲಿಸಲು ಹಣ ಕೊಡಿ : ಬಿವೈವಿ
ರಾಯ್‌ ಸಾವಿಗೆ ಐ.ಟಿ. ಕಿರುಕುಳ ಕಾರಣ : ಬಾಬು