ಸುಬ್ಬಾರೆಡ್ಡಿ ಪರ ಕಾಂಗ್ರೆಸ್ ಕಾರ್ಯಕರ್ತರ ಒಗ್ಗಟ್ಟು: ಸುಪ್ರೀಂ ತೀರ್ಪಿನತ್ತ ಎಲ್ಲರ ಚಿತ್ತ

KannadaprabhaNewsNetwork |  
Published : Feb 22, 2026, 01:45 AM IST
ಚೇಳೂರು ಹೆಚ್.ವಿ.ಎನ್ ಕಲ್ಯಾಣ ಮಂಟಪದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆ.ಆರ್. ಸುಧಾಕರ್ ರೆಡ್ಡಿ ಹಾಗೂ ಇತರ ಕಾಂಗ್ರೆಸ್ ಮುಖಂಡರು ಉಪಸ್ಥಿತರಿರುವುದು. | Kannada Prabha

ಸಾರಾಂಶ

ರೈತ ಕುಟುಂಬದಿಂದ ಬಂದ ಸುಬ್ಬಾರೆಡ್ಡಿ ಅವರು ಕಳೆದ 15 ವರ್ಷಗಳಿಂದ ನಿಸ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸೇವೆಯನ್ನು ಮೆಚ್ಚಿಯೇ ಕ್ಷೇತ್ರದ ಜನತೆ ಸತತ ಮೂರು ಬಾರಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ರಾಜಕೀಯ ಲಾಭ-ನಷ್ಟದ ಆಚೆಗೂ ನಾವು ಅವರ ವ್ಯಕ್ತಿತ್ವಕ್ಕೆ ಬೆಲೆ ಕೊಡುತ್ತೇವೆ.

ಕನ್ನಡಪ್ರಭ ವಾರ್ತೆ ಚೇಳೂರು

ಉಚ್ಚ ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸುತ್ತೇವೆ. ಆದರೆ, ಶಾಸಕ ಸುಬ್ಬಾರೆಡ್ಡಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಅಲ್ಲಿ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ನಮಗಿದೆ. ತೀರ್ಪು ಏನೇ ಬರಲಿ, ನಾವು ಎಂದಿಗೂ ಅವರ ಬೆನ್ನಿಗೆ ನಿಲ್ಲುತ್ತೇವೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಆರ್. ಸುಧಾಕರ್ ರೆಡ್ಡಿ ಹೇಳಿದರು.

ಪಟ್ಟಣದ ಎಚ್.ವಿ.ಎನ್. ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರೈತ ಕುಟುಂಬದಿಂದ ಬಂದ ಸುಬ್ಬಾರೆಡ್ಡಿ ಅವರು ಕಳೆದ 15 ವರ್ಷಗಳಿಂದ ನಿಸ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸೇವೆಯನ್ನು ಮೆಚ್ಚಿಯೇ ಕ್ಷೇತ್ರದ ಜನತೆ ಸತತ ಮೂರು ಬಾರಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ರಾಜಕೀಯ ಲಾಭ-ನಷ್ಟದ ಆಚೆಗೂ ನಾವು ಅವರ ವ್ಯಕ್ತಿತ್ವಕ್ಕೆ ಬೆಲೆ ಕೊಡುತ್ತೇವೆ ಎಂದು ಸುಧಾಕರ್ ರೆಡ್ಡಿ ತಿಳಿಸಿದರು.

ಮುಖಂಡ ಕಡ್ಡಿಲು ವೆಂಕಟರಮಣಪ್ಪ ಮಾತನಾಡಿ, ವಿರೋಧ ಪಕ್ಷದವರು ಏನೇ ಪಿತೂರಿ ನಡೆಸಿದರೂ ಸುಬ್ಬಾರೆಡ್ಡಿ ಅವರ ಮೇಲಿರುವ ಜನರ ಪ್ರೀತಿ- ವಿಶ್ವಾಸವನ್ನು ಕುಂದಿಸಲು ಸಾಧ್ಯವಿಲ್ಲ. ಕ್ಷೇತ್ರದ ಮಹಿಳೆಯರ ಮತ್ತು ಬಡವರ ಆಶೀರ್ವಾದ ಅವರ ಮೇಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ಅವರಿಗೆ ಖಂಡಿತ ಜಯ ಸಿಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ತಾಪಂ ಮಾಜಿ ಸದಸ್ಯ ಬಿ.ವಿ. ಮಂಜುನಾಥ್ , ಪರಾಜಿತ ಅಭ್ಯರ್ಥಿ ಮುನಿರಾಜು ಅವರು ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಹವಣಿಸುತ್ತಿದ್ದಾರೆ. ಅವರಿಗೆ ಕ್ಷೇತ್ರದ ಅಭಿವೃದ್ಧಿಯ ಕಾಳಜಿಯಿಲ್ಲ. ಒಂದು ವೇಳೆ ಮರುಚುನಾವಣೆ ನಡೆದರೆ, ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಅಂದರೆ ಸುಮಾರು 50 ಸಾವಿರ ಮತಗಳಿಂದ ಸುಬ್ಬಾರೆಡ್ಡಿ ಅವರನ್ನು ಜನತೆ ಗೆಲ್ಲಿಸಲಿದ್ದಾರೆ. ಮುನಿರಾಜು ಅವರಿಗೆ ಧೈರ್ಯವಿದ್ದರೆ ನೇರವಾಗಿ ಚುನಾವಣಾ ಕಣಕ್ಕೆ ಇಳಿಯಲಿ ಎಂದು ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಆರ್. ರಾಮಾಂಜನೇಯ ರೆಡ್ಡಿ, ಪಿ.ಆರ್. ಚಲಂ, ಗುತ್ತಿಗೆದಾರ ಮುರಳಿ ಮೋಹನ್, ಸಹದೇವ ರೆಡ್ಡಿ, ಎಸ್. ಶ್ರೀನಿವಾಸ್ ರೆಡ್ಡಿ, ಎಚ್.ವಿ. ನಾರಾಯಣಸ್ವಾಮಿ, ಪಾತೂರು ಶಿವಶಂಕರರೆಡ್ಡಿ, ಕೆ.ಜಿ. ವೆಂಕಟರಮಣ, ರಾಧಾಕೃಷ್ಣ ಸ್ವಾಮಿ, ಡೈರಿ ಅಧ್ಯಕ್ಷ ಜೆ.ಎನ್. ಜಾಲರಿ, ರಾಮೋಜುಪಲ್ಲಿ ಶ್ರೀನಿವಾಸ್, ತಿಮ್ಮಣ್ಣ, ಫಾತಿಮಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಪಿಎಸ್ ಮ್ಯಾಗ್ನೆಟ್ ಯೋಜನೆ: ಬಟ್ಟಲಕಟ್ಟೆಯಲ್ಲಿ ಪ್ರತಿಭಟನೆ
ಹನೂರು ಚನ್ನಪ್ಪ ಕೃತಿ ಗಟ್ಟಿತನದಿಂದ ಕೂಡಿದೆ: ವಿ. ಮನೋಹರ್‌