ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲಾವತಿ ಲಕ್ಕಪ್ಪ ಮಾಂಗ ಜಾಥಾಗೆ ಚಾಲನೆ ನೀಡಿದರು. ಜಾಥಾದಲ್ಲಿ ಉಪಾಧ್ಯಕ್ಷೆ ಮಹಾದೇವಿ ಮಾರುತಿ ಜಮಖಂಡಿ, ಗ್ರಾಮದ ಹಿರಿಯರಾದ ಸಿದ್ದನಗೌಡ ಪಾಟೀಲ, ಸದಾಶಿವ ಹೇಗಾಡಿ, ಮಲ್ಲಪ್ಪ ಗುರವ, ಗ್ರಾಮ ಪಂಚಾಯತಿ ಸದಸ್ಯರಾದ ಸುರೇಶ ಸಿದ್ದಾಪುರ, ಪರಪ್ಪ ಭಜಂತ್ರಿ, ಪರಪ್ಪ ಕರಿಗಾರ, ಪಿಕೆಪಿಎಸ್ ಅಧ್ಯಕ್ಷ ಮಲ್ಲಪ್ಪ ಸಿದ್ಧಾಪುರ, ಜಾಥಾ ನೊಡಲ್ ಅಧಿಕಾರಿ ಎಸ್. ಆರ್. ಬಂಡಿವಡ್ಡರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಎಸ್. ಗಡ್ಡದೇವರಮಠ, ಗ್ರಾಮ ಆಡಳಿತಾಧಿಕಾರಿ ಸದಾಶಿವ ಕುಂಬಾರ, ಪಿಡಿಒ ವಿದ್ಯಾ ಕುಲ್ಲೊಳ್ಳಿ, ಬಿ.ಎಸ್. ಕಡಕೋಳ ಸೇರಿದಂತೆ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮುಖ್ಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವೇಷಭೂಷಣದೊಂದಿಗೆ ಮಕ್ಕಳು ಪಾಲ್ಗೊಂಡಿದ್ದರು.
ಶಿಕ್ಷಕ ಮ.ಕೃ. ಮೇಗಾಡಿ, ಗ್ರಾಮ ಪಂಚಾಯತಿ ಸದಸ್ಯ ಪರಪ್ಪ ಭಜಂತ್ರಿ ಸಂವಿಧಾನವನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಭಾರತದ ಸವಾಂಗೀಣ ಪ್ರಗತಿಯಲ್ಲಿ ಮಹತ್ವ ಪಡೆದಿದೆ. ಎಂದರು. ಶಿಕ್ಷಕ ಗಂಗಾಧರ ಮೋಪಗಾರ ಸ್ವಾಗತಿಸಿದರು. ವಿದ್ಯಾ ಕುಳ್ಳೊಳ್ಳಿ ವಂದಿಸಿದರು.