ಲಿಂಗದಹಳ್ಳಿ ರಸ್ತೆಯಲ್ಲಿ ದ್ವಿಪಥ ನಿರ್ಮಾಣ: ಕೆ.ಎಸ್.ಆನಂದ್

KannadaprabhaNewsNetwork | Published : Apr 24, 2025 12:01 AM

ಸಾರಾಂಶ

ಬೀರೂರು, ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಾ ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಅದರಂತೆ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಅಪಘಾತ ಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಿಂಗದಹಳ್ಳಿಯಲ್ಲಿ ರಸ್ತೆ ಅಗಲೀಕರಣ ಮಾಡಿ ದ್ವಿಪಥ ಮಾಡಲಾಗುವುದು ಜೊತೆಗೆ ಈ ರಸ್ತೆ ಎರಡೂ ಬದಿಗಳಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

4ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ

ಕನ್ನಡಪ್ರಭ ವಾರ್ತೆ, ಬೀರೂರು ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಾ ಜನಸಂಖ್ಯೆಯೂ ಹೆಚ್ಚಾಗುತ್ತಿದೆ. ಅದರಂತೆ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಅಪಘಾತ ಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಿಂಗದಹಳ್ಳಿಯಲ್ಲಿ ರಸ್ತೆ ಅಗಲೀಕರಣ ಮಾಡಿ ದ್ವಿಪಥ ಮಾಡಲಾಗುವುದು ಜೊತೆಗೆ ಈ ರಸ್ತೆ ಎರಡೂ ಬದಿಗಳಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲಾಗುವುದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಪಟ್ಟಣದ ಲಿಂಗದಹಳ್ಳಿ ರಸ್ತೆಯ ಎಸ್.ಎಂ.ಕೃಷ್ಣ ಸಮುದಾಯ ಭವನದ ಮುಂಭಾಗ ಬುಧವಾರ ₹4 ಕೋಟಿ ವೆಚ್ಚದ ರಸ್ತೆ ಅಗಲೀಕರಣ ಹಾಗೂ ಅಲಂಕಾರಿಕ ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಇದರ ಜೊತೆ ಮಹಾತ್ಮ ಗಾಂಧಿ ವೃತ್ತದಿಂದ ಶಿವಾಜಿ ಪುತ್ಥಳಿವರೆಗೂ ಹಾಗೂ ಲಿಂಗದ ಹಳ್ಳಿ ರಸ್ತೆಯ ರೈಲ್ವೆ ಅಂಡರ್ ಬ್ರಿಡ್ಜ್ ನಿಂದ ಮಹಾತ್ಮಗಾಂಧಿ ಉದ್ಯಾನದವರೆಗೂ ಎರಡು ಕಡೆ ವಿದ್ಯುತ್ ಅಲಂಕಾರಿಕ ಕಂಬಗಳನ್ನು ಅಳವಡಿಸ ಲಾಗುವುದು. ಇದರಿಂದಾಗಿ ಪ್ರವಾಸಿ ತಾಣಗಳಾದ ಕೆಮ್ಮಣ್ಣುಗುಂಡಿ-ಕಲ್ಲತ್ತಿಗಿರಿ ಕಡೆಗೆ ತೆರಳುವ ಪ್ರವಾಸಿಗರಿಗೆ ಅನುಕೂಲ ವಾಗುವ ಜೊತೆ ಪಟ್ಟಣ ಸುಂದರವಾಗಿ ಕಾಣುತ್ತದೆ ಎಂದರು.

ಪಟ್ಟಣದಲ್ಲಿ ಹಾದು ಹೋಗುವ ಬಿ.ಎಚ್. ರಸ್ತೆ ಅಗಲೀಕರಣಕ್ಕೆ ಸುಮಾರು ₹ 27ಕೋಟಿ ಅಂದಾಜು ವೆಚ್ಚವಾಗಲಿದ್ದು ಆ ರಸ್ತೆ ಯನ್ನು ಮುಂದಿನ ದಿನಗಳಲ್ಲಿ ದ್ವಿಪಥವಾಗಿ ಅಭಿವೃದ್ಧಿಪಡಿಸಲಾಗುವುದು. ಉಳಿದಂತೆ ಪಟ್ಟಣದ ಎಲ್ಲಾ ವಾರ್ಡಗಳಿಗೂ ಮುಂಬರುವ ಸಾಲಿನಲ್ಲಿ ನಗರೋತ್ಥಾನ ಯೋಜನೆಯಡಿ ಸಮಸ್ಯೆ ನಿವಾರಣೆಗೆ ಹಣ ಬಿಡುಗಡೆ ಮಾಡಿಸಿ ಆ ಕಾಮಗಾರಿಗೂ ಒತ್ತು ನೀಡಲಾಗುವುದು ಎಂದರು.ಪುರಸಭೆ ಅಧ್ಯಕ್ಷೆ ವನಿತಮಧು ಮಾತನಾಡಿ, ಬೀರೂರು ಪಟ್ಟಣವನ್ನು ಶಾಸಕರು ಅಭಿವೃದ್ಧಿಪಡಿಸುತ್ತಿರುವುದು ಶ್ಲಾಘನೀಯ. ಭಗವತ್ ನಗರ ಮತ್ತು ಪುರಿಭಟ್ಟಿ ಬಡಾವಣೆಗಳಿಗೆ ರಸ್ತೆಯೇ ಇಲ್ಲದೆ ಜನ ಪರದಾಡುತ್ತಿದ್ದಾರೆ. ಈ ಸಮಸ್ಯೆ ಬಗ್ಗೆ ಶಾಸಕರು ಗಮನ ಹರಸಿ ಶೀಘ್ರ ಅವರ ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದ ಅವರು, ಮಾರ್ಗದ ಕ್ಯಾಂಪ್ ನಲ್ಲಿ ಸುಮಾರು 5-6ವಾರ್ಡ ಗಳಿದ್ದು ಜನ ಪಟ್ಟಣದ ಒಳ ಭಾಗಕ್ಕೆ ಬರಲು ಸುತ್ತಿಕೊಂಡು ಬರುವ ಪರಿಸ್ಥಿತಿ ಇದೆ. ಇತ್ತೀಚೆಗೆ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಬಂದಾಗ, ಮಾರ್ಕೆಟ್ ರಸ್ತೆಯಿಂದ ಭೂತನಗುಡಿ ಬೀದಿವರೆಗೂ ರೈಲ್ವೆ ಒವರ್ ಬ್ರಿಡ್ಜ್ ಮಾಡಿಕೊಡುವಂತೆ ಪುರಸಭೆ ಮತ್ತು ನಾಗರಿಕರು ಮನವಿ ಮಾಡಿದ್ದರು. ಅದು ಸದ್ಯ ಯಾವ ಸ್ಥಿತಿಯಲ್ಲಿದೆ ಎಂದು ಶಾಸಕರು ಗಮನ ಹರಸಿ ಸಚಿವರೊಂದಿಗೆ ಚರ್ಚಿಸಿ ಶೀಘ್ರ ರೈಲ್ವೆ ಒವರ್ ಬ್ರಿಡ್ಜ್ ಕಾಮಗಾರಿಗೆ ಚಾಲನೆ ನೀಡುವಂತೆ ಮನವಿ ಮಾಡಿದರು.ಇದಕ್ಕೆ ಉತ್ತರಿಸಿದ ಶಾಸಕರು, ರೈಲ್ವೆ ಒವರ್ ಬ್ರಿಡ್ಜ್ ಕಾಮಗಾರಿ ಬಗ್ಗೆ ಸಚಿವ ಸೋಮಣ್ಣ ಅವರು ಈ ಕಾಮಗಾರಿ ಮಾಡುವಂತೆ ಪಟ್ಟಿಯಲ್ಲಿ ಸೇರಿಸಿದ್ದಾರೆಂಬ ಮಾಹಿತಿ ಇದೆ. ಮತ್ತೊಮ್ಮೆ ಚರ್ಚಿಸಿ ಬ್ರಿಡ್ಜ್ ಮಾಡಿಸಲಾಗುವುದು. ಉಳಿದಂತೆ ಭಗವತ್ ನಗರದ ರಸ್ತೆ ಸಮಸ್ಯೆ ಬಗ್ಗೆ ಎಲ್ಲಾ ಕಡೆ ಕೇಳಿಬರುತ್ತಿದ್ದು ಶೀಘ್ರ ನನ್ನ ಅನುದಾನವನ್ನೆ ಹಾಕಿ ರಸ್ತೆ ಕಾಮಗಾರಿ ಮಾಡಿಸಿ ಅಲ್ಲಿನ ಜನರ ಸಮಸ್ಯೆಗೆ ಮುಕ್ತಿ ನೀಡುತ್ತೇನೆ ಎಂಬ ಭರವಸೆ ನೀಡಿದ ಅವರು ಗುತ್ತಿಗೆದಾರರು ಕಾಮಗಾರಿಯನ್ನು ಗುಣ ಮಟ್ಟದಿಂದ ಮಾಡಿ ಕಾಮಗಾರಿಯ ಗಾಂಭಿರ್ಯತೆ ಉಳಿಸಬೇಕು ಇದಕ್ಕೆ ಪುರಸಭೆ ಅಧ್ಯಕ್ಷ ಮತ್ತು ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಪುರಸಭೆ ಸದಸ್ಯೆ ಜ್ಯೋತಿ ಸಂತೋಷ್‌ ಕುಮಾರ್, ಜಿಮ್ ರಾಜು ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ಮಾನಿಕ್ ಭಾಷ, ಬಿ.ಕೆ.ಶಶಿಧರ್, ಎಲೆರವಿಕುಮಾರ್, ಲೋಕೇಶಪ್ಪ, ಆಶ್ರಯ ಕಮಿಟಿ ಸದಸ್ಯರಾದ ಬಿ.ಟಿ. ಚಂದ್ರಶೇಖರ್, ಮುಬಾರಕ್, ಪಿಡಬ್ಲೂಡಿ ಎಇಇ ವೈ.ಆರ್. ಬಸವರಾಜ್, ಎಇ ಶಿವಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಪ್ರಕಾಶ್, ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ಗುತ್ತಿಗೆದಾರ ವಿನಯ್ ಸೇರಿದಂತೆ ಸಾರ್ವಜನಿಕರು ಇದ್ದರು.

23 ಬೀರೂರು 1ಬೀರೂರು ಪಟ್ಟಣದ ಎಸ್.ಎಂ.ಕೃಷ್ಣ ಸಮುದಾಯ ಭವನದ ಮುಂಭಾಗ ಬುಧವಾರ ₹ 4ಕೋಟಿ ವೆಚ್ಚದ ರಸ್ತೆ ಅಗಲೀಕರಣ ಹಾಗೂ ಅಲಂಕಾರಿಕ ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು. ಅಧ್ಯಕ್ಷೆ ವನಿತಾ ಮಧು ಬಿ.ಕೆ.ಶಶಿಧರ್, ಪ್ರಕಾಶ್, ಮತ್ತಿತರಿದ್ದರು.

Share this article