ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದಿಂದ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, 12ನೇ ಶತಮಾನದಲ್ಲಿ ಮೌಢ್ಯ, ಕಂದಾಚಾರಗಳನ್ನು ತೊಡೆದು ಹಾಕಿ ಕಾಯಕ ತತ್ವವನ್ನು ಬಲವಾಗಿ ಪ್ರಚುರ ಪಡಿಸಿದ ಚೌಡಯ್ಯ ಶರಣರು ಅವರ ತತ್ವಾದರ್ಶಗಳಿಂದ ತಲೆತಲಾಂತರ ಶಾಶ್ವತವಾಗಿರಲಿದ್ದಾರೆ ಎಂದ ಅವರು ಕೋಲಿ ಸಮಾಜದ ಸಮುದಾಯ ಭವನವನ್ನು ಅಫಜಲ್ಪುರ ಪಟ್ಟಣದಲ್ಲಿ ₹3 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಜೊತೆಗೆ ಮಣೂರ ಹಾಗೂ ಹೊನ್ನಕೀರಣಗಿ ಗ್ರಾಮಗಳಲ್ಲೂ ತಲಾ 50 ಲಕ್ಷ ವೆಚ್ಚದಲ್ಲಿ ಚೌಡಯ್ಯ ಭವನಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ಯುವ ಮುಖಂಡ ರಿತೇಶ ಗುತ್ತೇದಾರ ಮಾತನಾಡಿ, ಎಲ್ಲರೂ ರಾಜಕೀಯ ಮರೆತು ಸಮಾಜಗಳ ಸುಧಾರಣೆಯತ್ತ ದೃಷ್ಟಿ ಇಡಬೇಕಾಗಿದೆ ಅಂದಾಗ ಇಂತಹ ಶರಣರ ಜಯಂತಿಗಳನ್ನು ಆಚರಿಸಿದ್ದಕ್ಕೂ ಸಾರ್ಥಕತೆ ಸಿಗಲಿದೆ ಎಂದರು.ಮುಖಂಡ ಮಹಾಂತೇಶ ಪಾಟೀಲ್ ಮಾತನಾಡಿ, ಹಿಂದುಳಿದ ವರ್ಗಗಳು ಉದ್ದಾರವಾಗಬೇಕಾದರೆ ಕಾಂತರಾಜ ವರದಿ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದರು.