ಶಾಂತಿ ಕಾಪಾಡಲು ಪೊಲೀಸರಿಗೆ ಸಹಕರಿಸಿ

KannadaprabhaNewsNetwork |  
Published : Jul 03, 2025, 11:52 PM IST
ಕಾರ್ಯಕ್ರಮವನ್ನು ಶಾಸಕ ಶ್ರೀನಿವಾಸ್ ಮಾನೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಜನಸ್ನೇಹಿ ಪೊಲೀಸ್ ನಮಗೆ ಬೇಕಾಗಿದೆ. ಪೊಲೀಸರಿಗೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕಾರ ನೀಡಲಿ

ಹಾನಗಲ್ಲ: ಅಪರಾಧ ಕೃತ್ಯ, ವ್ಯಕ್ತಿ ಪತ್ತೆಗೆ ಪೊಲೀಸ್ ಧೈರ್ಯ, ಕರ್ತವ್ಯನಿಷ್ಠೆ, ಸಾಹಸದ ಕ್ರಮದ ಸಂದರ್ಭದಲ್ಲಿ ರಾಜಕೀಯ ಹಾಗೂ ಇತರ ರೀತಿಯ ಅನಗತ್ಯ ಹಸ್ತಕ್ಷೇಪಗಳು ಆಗದಿದ್ದರೆ ಎಲ್ಲ ರೀತಿಯಲ್ಲಿ ಕಾನೂನು, ಸುವ್ಯವಸ್ಥೆ ಮೂಲಕ ನೆಮ್ಮದಿಗೆ ಸಾಕ್ಷಿಯಾಗುತ್ತದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.

ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ತಾಲೂಕಿನ ವರ್ತಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶಿಗ್ಗಾಂವಿ ಕೊಲೆ ಪ್ರಕರಣದಲ್ಲಿ ಧೈರ್ಯ ತೋರಿ ಅಪರಾಧಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾದ ಹಾನಗಲ್ಲ ಪಿಎಸ್‌ಐ ಸಂಪತ್ ಆನಿಕಿವಿ ಹಾಗೂ ಆಡೂರು ಪಿಎಸ್‌ಐ ಶರಣಪ್ಪ ಹಂಡರಗಲ್ ಅವರನ್ನು ಗೌರವಿಸುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜನಸ್ನೇಹಿ ಪೊಲೀಸ್ ನಮಗೆ ಬೇಕಾಗಿದೆ. ಪೊಲೀಸರಿಗೆ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಸಹಕಾರ ನೀಡಲಿ ಎಂದರು.

ಮಾಜಿ ಪುರಸಭಾಧ್ಯಕ್ಷ ಎಂ.ಬಿ. ಕಲಾಲ, ವಕೀಲ ರಾಜು ಗೌಳಿ ಮಾತನಾಡಿದರು. ಮಾಜಿ ಪುರಸಭಾಧ್ಯಕ್ಷ ಎಲ್ಲಪ್ಪ ಕಿತ್ತೂರ, ಅನಿತಾ ಡಿಸೋಜಾ ಮಾತನಾಡಿದರು. ಎಸ್. ಅಮರೇಂದ್ರ, ಕೆ.ಟಿ. ಕಲಗೌಡ್ರ, ಆರ್.ಬಿ. ಪಾಟೀಲ, ಜಾಫರ್‌ಸಾಬ ಖೇಣಿ, ಮಹಾಲಿಂಗಪ್ಪ ಅಕ್ಕಿವಳ್ಳಿ, ಮಂಜಣ್ಣ ನಾಗಜ್ಜನವರ, ರಾಜಣ್ಣ ಸಿಂಧೂರ, ರವಿ ದೇಶಪಾಂಡೆ, ಆದರ್ಶ ಶೆಟ್ಟಿ, ಗುರುರಾಜ ನಿಂಗೋಜಿ, ರಾಜು ಶಿರಪಂಥಿ, ಅರುಣ ಕಿತ್ತೂರ, ಮುನ್ನಾ ಬೇಗ್, ಚಂದ್ರು ಮಲಗುಂದ, ಕೃಷ್ಣ ಬಾಗಲೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ