ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರ: ಎಸ್.ಆರ್. ಬಳ್ಳಾರಿ ಭರವಸೆ

KannadaprabhaNewsNetwork |  
Published : Mar 15, 2026, 02:15 AM IST
ಉತ್ತಮ ಸಾಧನೆ ತೋರಿದ ಮೋಟೆಬೆನ್ನೂರ ಬಿಆರ್ ಇ ಕಾಲೇಜಿನ ಬಳ್ಳಾರಿ ರುದ್ರಪ್ಪ ಶಿಕ್ಷಣ ಮಹಾವಿದ್ಯಾಲಯದ ಬಿ,ಇಡಿ ವಿದ್ಯಾರ್ಥಿಗಳಾದ ಸ್ನೇಹ ಶಿವಪ್ಪ ಇಮ್ಮಡಿ ಹಾಗೂ ನಾಗರಾಜ ವಾಸ್ತಣ್ಣನವರ ಈರ್ವರು ಪ್ರಶಿಕ್ಷಾಣಾರ್ಥಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸಾಧನೆಯ ಹೊಸ್ತಿಲಿನಲ್ಲಿರುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ಭವಿಷ್ಯದಲ್ಲಿ ಅವರ ಶೈಕ್ಷಣಿಕ ಪ್ರಗತಿಗೆ ಸಹಕರಿಸುವುದಾಗಿ ಬಿಆರ್‌ಈ ಶಿಕ್ಷಣ ಸಂಸ್ಥೆಯ ಖಜಾಂಚಿ ಎಸ್.ಆರ್. ಬಳ್ಳಾರಿ ಭರವಸೆ ನೀಡಿದರು.

ಬ್ಯಾಡಗಿ: ಸಾಧನೆಯ ಹೊಸ್ತಿಲಿನಲ್ಲಿರುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ಭವಿಷ್ಯದಲ್ಲಿ ಅವರ ಶೈಕ್ಷಣಿಕ ಪ್ರಗತಿಗೆ ಸಹಕರಿಸುವುದಾಗಿ ಬಿಆರ್‌ಈ ಶಿಕ್ಷಣ ಸಂಸ್ಥೆಯ ಖಜಾಂಚಿ ಎಸ್.ಆರ್. ಬಳ್ಳಾರಿ ಭರವಸೆ ನೀಡಿದರು.

ಉತ್ತಮ ಸಾಧನೆ ತೋರಿದ ಮೋಟೆಬೆನ್ನೂರ ಬಳ್ಳಾರಿ ರುದ್ರಪ್ಪ ಶಿಕ್ಷಣ ಮಹಾವಿದ್ಯಾಲಯದ ಬಿ.ಇಡಿ. ವಿದ್ಯಾರ್ಥಿಗಳಾದ ಸ್ನೇಹ ಶಿವಪ್ಪ ಇಮ್ಮಡಿ ಹಾಗೂ ನಾಗರಾಜ ವಾಸ್ತಣ್ಣನವರ ಈರ್ವರು ಪ್ರಶಿಕ್ಷಾಣಾರ್ಥಿಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ವಿದ್ಯಾರ್ಥಿ ಒಕ್ಕೂಟದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಹಂತದಲ್ಲಿ ಉತ್ತಮ ಸಾಧನೆ ತೋರುವುದೆಂದರೆ ಸುಲಭದ ಮಾತಲ್ಲ, ತಪ್ಪಸ್ಸು ಮಾಡಿದಷ್ಟೇ ಗಟ್ಟಿಯಾಗಿ ಕುಳಿತು ಜ್ಞಾನಾರ್ಜನೆ ಪಡೆದುಕೊಂಡು ಬಳಿಕ ನಿರ್ಣಾಯಕ ಹಂತದಲ್ಲಿ ಅದನ್ನು ಪ್ರಚುರಪಡಿಸಬೇಕಾಗುತ್ತದೆ ಎಂದರು.

ದೃಢ ನಿರ್ಧಾರಗಳು ಬೇಕು: ಪ್ರಶಿಕ್ಷಣಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದ ಬಿಎಸ್ಎಂ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಎಸ್. ಪ್ರಶಾಂತ, ಸಮಾಜದಲ್ಲಿ ಶಿಕ್ಷಕ ವೃತ್ತಿಗೆ ತನ್ನದೇ ಆದ ಗೌರವವಿದೆ, ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ ನಮ್ಮನ್ನು ಪ್ರಶ್ನಿಸುವವರು ಹಾಗೂ ಅನುಕರಣೆ ಮಾಡುವವರು ಕೂಡ ಇದ್ದಾರೆ, ಈ ಹಿನ್ನೆಲೆಯಲ್ಲಿ ಇಂದಿನ ಪ್ರಶಿಕ್ಷಣಾರ್ಥಿಗಳು ತಮ್ಮ ವೈಯಕ್ತಿಕ ಬದುಕಿನಲ್ಲಿ ಕೆಲವೊಂದು ದೃಡ ನಿರ್ಧಾರಗಳು ಕೈಗೊಳ್ಳುವುದು ಅನಿವಾರ್ಯವಾಗಿದ್ದು, ನಿಮ್ಮನ್ನು ನೀವು ತೊಡಗಿಸಿಕೊಂಡು ಆದರ್ಶ ಶಿಕ್ಷಕರಾಗಿ ಸಮಾಜದಲ್ಲಿ ಗುರ್ತಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಎಂ. ಸುರೇಶ ಮಾತನಾಡಿ, ಬಿ.ಇಡಿ. ವ್ಯಾಸಂಗದಲ್ಲಿ 2400 ಅಂಕಗಳಿಗೆ 2226 (92.75) ಅಂಕಗಳನ್ನು ಪಡೆದು ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಹಾವೇರಿ ವಿಶ್ವವಿದ್ಯಾಲಯದಿಂದ ಕೊಡ ಮಾಡುವ 8ನೇ ರ್‍ಯಾಂಕ್ ಪಡೆದ ಸ್ನೇಹ ಶಿವಪ್ಪ ಇಮ್ಮಡಿ ಹಾಗೂ 2400 ಅಂಕಗಳಿಗೆ 2205 (91.88) ಅಂಕಗಳನ್ನು ಪಡೆದ ನಾಗರಾಜ ವಾಸ್ತಣ್ಣನವರ ಇವರನ್ನು ಸನ್ಮಾನಿಸಲು ಅತ್ಯಂತ ಖುಷಿಯಾಗುತ್ತಿದೆ ಎಂದರು.

ಇದಕ್ಕೂ ಮುನ್ನ ಪ್ರೊ, ರಾಜಕುಮಾರ ತಳವಾರ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಡಿ ಫಾರ್ಮ್ ಮತ್ತು ಬಿ ಫಾರ್ಮ್ ಕಾಲೇಜಿನ ಪ್ರಾಚಾರ್ಯ ರೇಣುಕಾರಾಧ್ಯ ಚೆಟ್ಟಿ ಹಾಗೂ ಸಿಬಿಎಸ್ಸಿ ಶಾಲೆ ಮುಖ್ಯೋಪಾಧ್ಯಾಯ ಬಿ.ಸಿ.ಪ್ರಕಾಶ, ಪ್ರಶಿಕ್ಷಣಾರ್ಥಿ ವೀಣಾ ಹರಿಹರ ಸ್ವಾಗತಿಸಿದರು. ಎಂ. ಪ್ರೇಮಾ ವಂದಿಸಿದರು. ಅರ್ಜುನ್ ಚೂರಿ ಮತ್ತು ಕವಿತಾ ಅಂಗಡಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಿಂಗರಾಜ ಪಾಟೀಲಗೆ ವಿಜಯೇಂದ್ರ, ಜೋಶಿ ಸಮಾಧಾನ
ಉತ್ತಮ ಶಿಕ್ಷಕರಾಗಲು ಪಾಠದ ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳು ಅಗತ್ಯ