ಮಹಿಳಾಪರ ಕಾರ್ಯಕ್ರಮಕ್ಕೆ ಸಹಕಾರ ಅಗತ್ಯ: ಹೇಮಲತಾ ರೇವಣ್ಣ

KannadaprabhaNewsNetwork |  
Published : Jul 14, 2026, 01:15 AM IST
ಕನಕಶ್ರೀ ಮಹಿಳಾ ಸಮಾಜ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭ | Kannada Prabha

ಸಾರಾಂಶ

ತರೀಕೆರೆಹಮ್ಮಿಕೊಳ್ಳಲು ಉದ್ದೇಶಿಸಿರುವ ಹಲವಾರು ಮಹಿಳಾಪರ ಕಾರ್ಯಕ್ರಮಗಳಿಗೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಕನಕಶ್ರೀ ಮಹಿಳಾ ಸಮಾಜ ನೂತನ ಅಧ್ಯಕ್ಷೆ ಹೇಮಲತಾ ರೇವಣ್ಣ ಹೇಳಿದ್ದಾರೆ.

- ಕನಕಶ್ರೀ ಮಹಿಳಾ ಸಮಾಜ ಅಧ್ಯಕ್ಷ, ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭ

ಕನ್ನಡಪ್ರಭ ವಾರ್ತೆ ತರೀಕೆರೆ

ಹಮ್ಮಿಕೊಳ್ಳಲು ಉದ್ದೇಶಿಸಿರುವ ಹಲವಾರು ಮಹಿಳಾಪರ ಕಾರ್ಯಕ್ರಮಗಳಿಗೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಕನಕಶ್ರೀ ಮಹಿಳಾ ಸಮಾಜ ನೂತನ ಅಧ್ಯಕ್ಷೆ ಹೇಮಲತಾ ರೇವಣ್ಣ ಹೇಳಿದ್ದಾರೆ.

ಕನಕಶ್ರೀ ಮಹಿಳಾ ಸಮಾಜದಿಂದ ಪಟ್ಟಣದ ಶ್ರೀ ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ ಕನಕಶ್ರೀ ಮಹಿಳಾ ಸಮಾಜ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನಕಶ್ರೀ ಮಹಿಳಾ ಸಮಾಜ ನಡೆದು ಬಂದ ಹಾದಿ ಮತ್ತು ನಡೆಸಿಕೊಂಡು ಬರುವ ಕಾರ್ಯಕ್ರಮ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವನಿ ಜನಪದ ಕಲಾವಿದೆ ಎಸ್.ಆರ್.ರಂಜಿತಾ ಮಾತನಾಡಿ ಮಹಿಳೆ ಮತ್ತು ಜನಪದ ಒಂದಕ್ಕೊಂದು ಬೆಸೆದುಕೊಂಡಿದೆ. ಮಹಿಳೆಯ ಜನನದಿಂದ ಮರಣದವರೆಗೆ ಎಲ್ಲಾ ಪ್ರಮುಖ ಘಟ್ಟಗಳಿಗೂ ಸಂಬಂದಿಸಿದ ಜನಪದ ಗೀತೆಗಳನ್ನು ಹಾಡಿ, ಎಲ್ಲಾ ಮಹಿಳೆಯರಿಗೂ ಜಾನಪದದ ಉಳಿವಿಗೆ ತಮ್ಮನ್ನು ತೊಡಗಿಸಿ ಕೊಳ್ಳುವಂತೆ ಮನವಿ ಮಾಡಿದರು.

ವಾಣಿ ಶ್ರೀನಿವಾಸ್ ಅತಿಥಿಗಳಾಗಿ ಭಾಗವಹಿಸಿ ನೂತನ ಅಧ್ಯಕ್ಷೆ ಹೇಮಲತಾ ರೇವಣ್ಣ ಅವರಿಗೆ ಅಭಿನಂದಿಸಿ ಮಾತನಾಡಿ ಕನಕಶ್ರೀ ಮಹಿಳಾ ಸಮಾಜದ ಎಲ್ಲಾ ಕೆಲಸಗಳಿಗೂ ತಮ್ಮ ಸಹಕಾರ ಸದಾ ಇರುತ್ತದೆ ಎಂದರು.

ಕನಕಶ್ರೀ ಮಹಿಳಾ ಸಮಾಜ ನಿಕಟಪೂರ್ವ ಅಧ್ಯಕ್ಷೆ ಲಕ್ಷ್ಮೀ ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು.

ನೂತನ ಪದಾದಿಕಾರಿಗಳು: ಉಪಾಧ್ಯಕ್ಷೆ ಚಂದ್ರಕಲಾ ಆನಂದ್, ಕಾರ್ಯದರ್ಶಿ ಶಶಿಕಲಾ ಲೋಕೇಶ್, ಖಚಾಂಚಿ ರೇಣುಕಾ ಬಾಬು. ಕನಕಶ್ರೀ ಮಹಿಳಾ ಸಮಾಜ ಗೌರವ ಅಧ್ಯಕ್ಷೆ ಜಯ್ಯಮ್ಮ ಗಣೇಶ್, ರಶ್ಮಿ ರಮೇಶ್, ಧನಲಕ್ಷ್ಮಿ ಗುರುಮೂರ್ತಿ, ನಾಗರತ್ನ ಹಾಲಪ್ಪ, ಜಯಲಕ್ಷ್ಮೀ ಜಗದೀಶ್, ಕವಿತಾ ಇನ್ನು ಹಲವು ಸದಸ್ಯರು ಭಾಗವಹಿಸಿದ್ದರು.

ಪದಾದಿಕಾರಿಗಳುಃ ಉಪಾಧ್ಯಕ್ಷೆ ಚಂದ್ರಕಲಾ ಆನಂದ್, ಕಾರ್ಯದರ್ಶಿ ಶಶಿಕಲಾ ಲೋಕೇಶ್, ಖಚಾಂಚಿ ರೇಣುಕಾ ಬಾಬು,

12ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಕನಕಶ್ರೀ ಮಹಿಳಾ ಸಮಾಜದಿಂದ ನಡೆದ ಕಾರ್ಯಕ್ರಮದಲ್ಲಿ ಸಮಾಜದ ನೂತನ ಅಧ್ಯಕ್ಷೆ ಹೇಮಲತಾ ರೇವಣ್ಣ ಮಾತನಾಡಿದರು. ವಾಣಿ ಶ್ರೀನಿವಾಸ್, ಜಯ್ಯಮ್ಮ ಗಣೇಶ್, ಎಸ್.ಆರ್.ರಂಜಿತಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಗೆಮಡು ಗಂಗಾಧರೇಶ್ವರ ಕ್ಷೇತ್ರದ ಅಭಿವೃದ್ಧಿಗೆ ವೇಗ
ಅರಸೀಕೆರೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ