ವಿಜಯಪುರದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ದಂಪತಿ

KannadaprabhaNewsNetwork |  
Published : May 28, 2025, 12:06 AM IST
ವಿಜೆಪಿ೨೭ವಿಜಯಪುರ ಪಟ್ಟಣದಲ್ಲಿ ಮೃತಪಟ್ಟಿರುವ ದಂಪತಿ. | Kannada Prabha

ಸಾರಾಂಶ

ಪತ್ನಿಯನ್ನು ಜಿಮ್ ಮಾಡುವ ಡಂಬಲ್ ನಿಂದ ಹೊಡೆದು ಸಾಯಿಸಿ, ತಾನೂ ಸೀರೆಯಲ್ಲಿ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಜಿಮ್ ನಲ್ಲಿ ಬಳಕೆ ಮಾಡುವ ಡಂಬಲ್ ವೊಂದು ಮೃತನ ಪತ್ನಿ ಸುಮಾ ಅವರ ಮೃತದೇಹದ ಬಳಿ ಪತ್ತೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ವಿಜಯಪುರ

ದಂಪತಿಯಿಬ್ಬರೂ ತಮ್ಮ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಧಾರುಣ ಘಟನೆ ವಿಜಯಪುರ ಪಟ್ಟಣದ ಶಿಡ್ಲಘಟ್ಟ ಡಿವಿಯೇಷನ್ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ಪಟ್ಟಣದ ೫ನೇ ವಾರ್ಡಿನ ಮಾರುತಿನಗರದ, ವಿಜಯನಗರ ಬಡಾವಣೆಯ ೨ನೇ ಕ್ರಾಸ್ ನಲ್ಲಿ ವಾಸವಾಗಿದ್ದ ಬಸವಾಚಾರಿ, ಅಲಿಯಾಸ್ ಶ್ಯಾಮ್ (೪೨), ಸುಮಾ (೩೮) ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ.

ವಿಜಯಪುರ ಪಟ್ಟಣದ ಶಿಡ್ಲಘಟ್ಟ ಡಿವಿಯೇಷನ್ ರಸ್ತೆಯಲ್ಲಿ ವೆಲ್ಡಿಂಗ್ ಶಾಪ್ ಇಟ್ಟುಕೊಂಡು ಜೀವನ ಮಾಡುತ್ತಿದ್ದ ಬಸವಾಚಾರಿ, ಅಲಿಯಾಸ್ ಶ್ಯಾಮ್ ಅವರ ಮೃತದೇಹವು, ಮನೆಯಲ್ಲಿನ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಇವರ ಪತ್ನಿ ಸುಮಾ (೩೮) ಅವರು, ಮಲಗುವ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿರುವುದು ಕಂಡು ಬಂದಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೃತರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮೃತ ದಂಪತಿ ಪುತ್ರ ಶಾಲೆಯಿಂದ ಮನೆಗೆ ಬಂದಾಗ, ತನ್ನ ತಂದೆ, ಫ್ಯಾನಿನಲ್ಲಿ ನೇತಾಡುತ್ತಿರುವುದನ್ನು ಕಂಡ ಕೂಡಲೇ, ತನ್ನ ದೊಡ್ಡಪ್ಪನಿಗೆ ವಿಚಾರ ತಿಳಿಸಿದ್ದಾನೆ. ವಿಷಯ ತಿಳಿದ ಕೂಡಲೇ ಮೃತನ ಸಹೋದರ, ತಕ್ಷಣ ಧಾವಿಸಿ ನೋಡುವಷ್ಟರಲ್ಲಿ ಬಸವಾಚಾರಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿರುವುದು ಗೊತ್ತಾಗಿದೆ.

ಪತ್ನಿಯನ್ನು ಜಿಮ್ ಮಾಡುವ ಡಂಬಲ್ ನಿಂದ ಹೊಡೆದು ಸಾಯಿಸಿ, ತಾನೂ ಸೀರೆಯಲ್ಲಿ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಜಿಮ್ ನಲ್ಲಿ ಬಳಕೆ ಮಾಡುವ ಡಂಬಲ್ ವೊಂದು ಮೃತನ ಪತ್ನಿ ಸುಮಾ ಅವರ ಮೃತದೇಹದ ಬಳಿ ಪತ್ತೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ರವಿ ಹಾಗೂ ವಿಜಯಪುರ ಪೊಲೀಸರು ಬಂದು, ಪರಿಶೀಲನೆ ನಡೆಸಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಇಬ್ಬರ ಸಾವಿಗೆ ನಿಖರ ಕಾರಣವೇನೆಂದು, ಪೊಲೀಸರ ತನಿಖೆಯಿಂದಷ್ಟೆ ತಿಳಿದು ಬರಬೇಕಿದೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ