ಕನ್ನಡಪ್ರಭ ವಾರ್ತೆ ನಿಪ್ಪಾಣಿ
ಸಂಘದಿಂದ ಬೆಳ್ಳಿಹಬ್ಬ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ವಿರುಪಾಕ್ಷಲಿಂಗ ಸಮಾಧಿಮಠದ ವಸತಿಗೃಹದಲ್ಲಿರುವ ಸುಮಾರು 60ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸೋಮವಾರ ಬ್ಲ್ಯಾಂಕೇಟ್(ಹೊದಿಕೆ)ಗಳನ್ನು ವಿತರಿಸಿ ಮಾತನಾಡಿದ ಅವರು, ಕಳೆದ 25 ವರ್ಷಗಳಿಂದ ಪಾರದರ್ಶಕತೆ, ವಿಶ್ವಾಸ, ಶ್ರದ್ಧೆಯಿಂದ ನಮ್ಮ ಸಹಕಾರಿ ಸಂಘವು ಗ್ರಾಹಕರ ಸೇವೆ ಮಾಡುತ್ತ ಬಂದಿದ್ದು, ಕೊರೋನಾ, ಪ್ರವಾಹ, ಮೊದಲಾದ ಆಪತ್ತಿನ ಕಾಲದಲ್ಲಿಯೂ ಅನೇಕ ಬಾರಿ ರಸ್ತೆಗಿಳಿದು ಜನಸಾಮಾನ್ಯರ ಕಣ್ಣೀರು ಒರೆಸುವ ಕಾರ್ಯ ಮಾಡಿದೆ. ದೂರದೂರದಿಂದ ಬಂದು ವಿದ್ಯಾಭ್ಯಾಸಕ್ಕಾಗಿ ಈ ಮಠದಲ್ಲಿ ನೆಲೆಸಿದ ವಿದ್ಯಾರ್ಥಿಗಳಿಗೆ ಚಳಿಗಾಲದಲ್ಲಿ ಯಾವುದೆ ಕಷ್ಟವಾಗಬಾರದೆಂಬ ನಿಟ್ಟಿನಲ್ಲಿ ಬ್ಲ್ಯಾಂಕೇಟ್ (ಹೊದಿಕೆ) ಹಂಚಲಾಗುತ್ತಿದೆ. ಪ್ರಾಣಲಿಂಗ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಬೆಳೆಯುತ್ತಿರುವ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿ ಎಂದರು.
ಈ ಕಾರ್ಯಕ್ರಮದಲ್ಲಿ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಿವಮೂರ್ತಿ ಸ್ವಾಮೀಜಿ, ಸಂಚಾಲಕ ಸುರೇಶ ಕೋಠಿವಾಲೆ, ಶಶಿಕಾಂತ ಕೋಠಿವಾಲೆ, ಪಪ್ಪು ಪಾಟೀಲ, ಸಂಜಯ ಶಿಂತ್ರೆ, ರಾವಸಾಹೇಬ ಪಾಟೀಲ, ಧನಂಜಯ ಮಾನವಿ, ರಾಜಶೇಖರ ಹಿರೆಕೊಡಿ, ನರಸಗೌಡಾ ಪಾಟೀಲ, ಶ್ರೀರಾಮ ಭಾರಮಲ, ರಾಜೇಶ ತಿಳವೆ, ಅವಿನಾಶ ಪಾಟೀಲ, ಸಿದ್ಧಗೌಡ ಪಾಟೀಲ, ರಾಮಗೌಡ ಪಾಟೀಲ, ಮುರುಘೇಂದ್ರ ತೋಡಕರ, ವಿರುಪಾಕ್ಷ ಸ್ವಾಮೀಜಿ, ಸಿಇಒ ದಿನಕರ ಪೊವಾರ, ಮೊದಲಾದವರು ಉಪಸ್ಥಿತರಿದ್ದರು.