ಮುಕ್ತ ಮತದಾನಕ್ಕೆ ವಾತಾವರಣ ನಿರ್ಮಿಸಿ: ಶರತ್‌ ಬಚ್ಚೇಗೌಡ

KannadaprabhaNewsNetwork |  
Published : May 05, 2024, 02:01 AM IST
ಸುರಪುರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಶರತ ಬಚ್ಚೆಗೌಡ ಮಾತನಾಡಿದರು. | Kannada Prabha

ಸಾರಾಂಶ

ಕೊಡೇಕಲ್ ಹೋಬಳಿಯ ಭಾಗಕ್ಕೆ ಅಭ್ಯರ್ಥಿ ಹೋಗಬಾರದು. ಬೂತ್ ಏಜೆಂಟ್ ಇರಬಾರದು ಎನ್ನುವ ಬೆದರಿಕೆ ಇದೆ. ಈ ಕುರಿತು ನೋಡಲ್ ಅಧಿಕಾರಿಗೆ ದೂರು ನೀಡಲಾಗಿದೆ. ವೋಟ್ ಬದಲಿಸುವ ತಂತ್ರವಿದೆ

ಕನ್ನಡಪ್ರಭ ವಾರ್ತೆ ಸುರಪುರ

ಮತಕ್ಷೇತ್ರ ವ್ಯಾಪ್ತಿಯ ಸೂಕ್ಷ್ಮ ಮತಗಟ್ಟೆಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ರಾಯನಪಾಳ್ಯದಲ್ಲಿ ದೌರ್ಜನ್ಯವೆಸಗಿದ್ದರಿಂದ 7 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಶಾಸಕ ಶರತ್‌ ಬಚ್ಚೇಗೌಡ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವೊಂದು ಜನರನ್ನು ಬಂಧಿಸಲಾಗಿದೆ. ಈ ಕೃತ್ಯದ ಹಿಂದಿರುವ ಇನ್ನೂ ಕೆಲವರು ಹಾಗೂ ರೂವಾರಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಕೊಡೇಕಲ್ ಹೋಬಳಿಯ ಭಾಗಕ್ಕೆ ಅಭ್ಯರ್ಥಿ ಹೋಗಬಾರದು. ಬೂತ್ ಏಜೆಂಟ್ ಇರಬಾರದು ಎನ್ನುವ ಬೆದರಿಕೆ ಇದೆ. ಈ ಕುರಿತು ನೋಡಲ್ ಅಧಿಕಾರಿಗೆ ದೂರು ನೀಡಲಾಗಿದೆ. ವೋಟ್ ಬದಲಿಸುವ ತಂತ್ರವಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

2023 ರಲ್ಲೂ ಕೊಡೇಕಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕಾರುಗಳ ಮೇಲೆ ಕಲ್ಲು ತೂರಾಟ ಮತ್ತು ಹಲ್ಲೆ ನಡೆಸಿದ್ದರು. ಈಗ ಮತ್ತೆ 2024ರಲ್ಲಿ ಮತ್ತೆ ರಾಯನಪಾಳ್ಯದಲ್ಲಿ ಪುನರಾವರ್ತಿತವಾಗಿದೆ. ಮುಕ್ತ ಮತದಾನಕ್ಕೆ ಘಟನೆ ನಡೆದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಬೇಕು. ಮುಕ್ತ ಮತದಾನಕ್ಕಾಗಿ ವಾತಾವರಣ ನಿರ್ಮಾಣ ಮಾಡಬೇಕು ಎಂದರು.

ರಾಜಕಾರಣ ಇರುತ್ತೆ, ಹೋಗುತ್ತೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಭಾರೀ ಅಂತರದಿಂದ ಜಯಶೀಲರಾಗುತ್ತಾರೆ ಎಂಬ ಭಯದಲ್ಲಿ ಕುಟುಂಬದ ಮೇಲೆ ಹಲ್ಲೆ ಮಾಡಲಾಗಿದೆ. ಈ ಘಟನೆಯನ್ನು ಖಂಡಿಸುತ್ತೇವೆ. ರಾಜಾ ವೆಂಕಟಪ್ಪ ನಾಯಕರು ಹಠಾತ್ ವಿಧಿವಶರಾಗಿದ್ದರಿಂದ ಉಪ ಚುನಾವಣೆ ಎದುರಾಗಿದೆ. 4 ವರ್ಷ ರಾಜಾ ವೇಣುಗೋಪಾಲ ನಾಯಕ ನಿಮ್ಮ ಪರವಾಗಿ ಆಡಳಿತ ನಡೆಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ಕಾಂಗ್ರೆಸ್ಸಿನವರೇ ಹೊಡೆದಿದ್ದಾರೆ ಎಂದಾದರೆ ಇಡೀ ಕುಟುಂಬದವರು ಅಷ್ಟೊಂದು ಕಲ್ಲನ್ನು ತಮ್ಮ ಮನೆಗೆ ಹೊಡೆದುಕೊಳ್ಳಲು ಸಾಧ್ಯವೇ? ನಾವು ಶಾಂತಿಯುತವಾಗಿದ್ದು, ಕಾನೂನು ರೀತಿ ನಡೆದುಕೊಳ್ಳುತ್ತೇವೆ. ಯಾವುದೇ ಭಯವಿಲ್ಲದೆ ನಿರ್ಭಿತಿಯಿಂದ ಮತ ಚಲಾಯಿಸಬೇಕು. ಅದಕ್ಕೆ ತಕ್ಕಂತೆ ಸಿಸಿ ಕ್ಯಾಮೆರಾ ಮತ್ತು ಬಂದೋಬಸ್ತ್ ಮಾಡಬೇಕು ಎಂದು ಮನವಿ ಮಾಡಿದರು.

ಕೆಪಿಸಿಸಿ ವೀಕ್ಷಕ ಅಭಿಷೇಕ್ ದತ್ತ ಮಾತನಾಡಿದರು. ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ, ವಿಠ್ಠಲ ಯಾದವ್, ಶಾಂತನಗೌಡ, ನಿಂಗರಾಜ, ರಂಗನಗೌಡ ಸೇರಿದಂತೆ ಇತರರಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು