)
- ಮಹಿಳಾ ಪ್ರಯಾಣಿಕರನ್ನು ಕಡೆಗಣಿಸಕೂಡದು: ಕಂಡಕ್ಟರ್ಗೆ ಗ್ರಾಹಕರ ಆಯೋಗ ತಾಕೀತು
ಕನ್ನಡಪ್ರಭ ವಾರ್ತೆ ಹರಿಹರ
ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ ಎಂಬ ಕಾರಣಕ್ಕೆ ಅವರ ಸುರಕ್ಷತೆ ಮತ್ತು ಘನತೆಗೆ ಧಕ್ಕೆ ತರುವುದನ್ನು ಸಹಿಸಲಾಗದು ಎಂದು ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಎಚ್ಚರಿಸಿದೆ.ಮಹಿಳಾ ಪ್ರಯಾಣಿಕರೊಬ್ಬರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಎಚ್.ಎನ್. ಮೀನಾ ಹಾಗೂ ಸದಸ್ಯ ತ್ಯಾಗರಾಜನ್ ಸಿ.ಎಸ್. ಅವರು ಸರ್ಕಾರದ ಕಲ್ಯಾಣ ಯೋಜನೆಗಳ ಲಾಭ ಪಡೆಯುವುದರಿಂದ ವ್ಯಕ್ತಿಯ ಯಾವುದೇ ಹಕ್ಕು ಮೊಟಕಾಗುವುದಿಲ್ಲ ಎಂದು ಸ್ಪಷ್ಟಪಡಿಸಿ, ಉಚಿತ ಪ್ರಯಾಣದ ಬಗ್ಗೆ ಟೀಕಿಸಿ, ನಿರ್ಲಕ್ಷ ತೋರಿದ ಬಸ್ ನಿರ್ವಾಹಕನಿಗೆ ₹5 ಸಾವಿರ ಪರಿಹಾರ ನೀಡಲು ಕಳೆದ ಸೋಮವಾರ ಆದೇಶದಲ್ಲಿ ಸೂಚಿಸಿದ್ದಾರೆ.
ಶಿವಮೊಗ್ಗದ ರೇಷ್ಮಾ ಬಾನು ಮೇ 15, 2024ರಂದು ತಮ್ಮ 10 ವರ್ಷದ ವಿಕಲಚೇತನ ಮಗನೊಂದಿಗೆ ಹರಿಹರದಿಂದ ಶಿವಮೊಗ್ಗಕ್ಕೆ ಕೆಎಸ್ಆರ್ಟಿಸಿ ಬಸ್ನಲ್ಲಿ ಹೊರಟಿದ್ದರು. ಶಕ್ತಿ ಯೋಜನೆಯಡಿ ತಮಗೆ ಉಚಿತ ಟಿಕೆಟ್ ಹಾಗೂ ಮಗನಿಗೆ ಅರ್ಧ ದರದ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದರು.
ಅದೇ ಮಾರ್ಗದಲ್ಲಿ ಬಂದ ಬೇರೆ ಬಸ್ಗಳಲ್ಲಿ ಕೆಲವರು ಪ್ರಯಾಣಿಸಿದರಾದರೂ ಅಸ್ವಸ್ಥ ಮಗ ಮತ್ತು ಬ್ಯಾಗ್ ಇದ್ದುದರಿಂದ ರೇಷ್ಮಾ ಬಾನು ಅವರಿಗೆ ಹತ್ತಲಾಗಿರಲಿಲ್ಲ. ಆಗ ಮಳೆ ಬರುತ್ತಿದ್ದರಿಂದ ಸಮೀಪದ ಹಣ್ಣಿನಂಗಡಿ ಛಾವಣಿಯಡಿ ನಿಂತಿದ್ದರು.
ವಿಚಾರಣೆ ನಡೆಸಿದ ಆಯೋಗ, ಘಟನೆ ಉದ್ದೇಶಪೂರ್ವಕವಾಗಿತ್ತೇ ಎಂಬ ಪ್ರಶ್ನೆಗಿಂತ ನಿರ್ವಾಹಕ ತನ್ನ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದಾನೆಯೇ ಎಂಬ ಪ್ರಶ್ನೆ ಮುಖ್ಯವಾಗುತ್ತೆ. ಶಕ್ತಿ ಯೋಜನೆಯಿಂದ ಬಸ್ಗಳಲ್ಲಿ ರಶ್ ಹೆಚ್ಚಿ ಸಿಬ್ಬಂದಿ ಅಸಹಾಯಕರಾದರೂ ಪ್ರಯಾಣಿಕರ ಸುರಕ್ಷತೆ ಕಡೆಗಣಿಸುವಂತಿಲ್ಲ ಎಂದು ತಿಳಿಸಿದೆ. ಸೇವಾ ನ್ಯೂನತೆ ಎಸಗಿರುವ ನಿರ್ವಾಹಕ 30 ದಿನದೊಳಗೆ ದೂರುದಾರರಿಗೆ ₹3 ಸಾವಿರ ಪರಿಹಾರ, ₹2 ಸಾವಿರ ವ್ಯಾಜ್ಯದ ಖರ್ಚು ನೀಡಲು ಆದೇಶಿಸಿದೆ.
- - -
- ರೇಷ್ಮಾ ಬಾನು, ದೂರುದಾರರು.
(ಕೋಟ್-2)
* ಕೆಳ ಹಂತದ ಸಿಬ್ಬಂದಿ ಮಾತ್ರ ಗುರಿ: ಬಿಎಂಎಸ್ ಶಕ್ತಿ ಯೋಜನೆಗೆ ತಕ್ಕಂತೆ ಬಸ್ಗಳ ಸಂಖ್ಯೆ ಹಾಗೂ ಸಿಬ್ಬಂದಿಯನ್ನು ಹೆಚ್ಚಿಸದಿರುವುದು, ಬಸ್ ಕೆಟ್ಟುನಿಂತಾಗ ಪರ್ಯಾಯ ವ್ಯವಸ್ಥೆ ಕಲ್ಪಿಸದಿರುವುದು ಮೊದಲಾದ ಆಡಳಿತಾತ್ಮಕ ವೈಫಲ್ಯಗಳಿಗೆ ಕೆಳ ಹಂತದ ಸಿಬ್ಬಂದಿಯನ್ನು ಮಾತ್ರ ಹೊಣೆ ಮಾಡಲಾಗದು ಎಂದು ದೂರುದಾರರ ಪರ ವಕೀಲರಾದ ಬಿ.ಎಂ. ಸಿದ್ದಲಿಂಗ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.ತನ್ನ ಪ್ರತಿನಿಧಿಯಾದ ನಿರ್ವಾಹಕನ ನಿರ್ಲಕ್ಷ್ಯಕ್ಕೆ ಸಂಸ್ಥೆಯೇ ಪರೋಕ್ಷ ಹೊಣೆಗಾರಿಕೆ ಹೊರಬೇಕಾಗುತ್ತದೆ. ಕೇವಲ ನಿರ್ವಾಹಕನಿಗೆ ಮಾತ್ರ ಹೊಣೆಗಾರಿಕೆ ನಿಗದಿಪಡಿಸಿ, ವಿಭಾಗೀಯ ನಿಯಂತ್ರಕ ಹಾಗೂ ಘಟಕ ವ್ಯವಸ್ಥಾಪಕರನ್ನು ಮುಕ್ತಗೊಳಿಸಿರುವುದು ಕಾನೂನಾತ್ಮಕವಾಗಿ ಸಮರ್ಥನೀಯವಲ್ಲ. ಅಲ್ಲದೆ ನೀಡಿರುವ ಪರಿಹಾರವೂ ಪ್ರಕರಣದ ಗಂಭೀರತೆಗೆ ತಕ್ಕಂತೆ ಇಲ್ಲ. ಆದ್ದರಿಂದ ಮೇಲ್ಮನವಿ ಸಲ್ಲಿಸಲಾಗುವುದೆಂದು ತಿಳಿಸಿದ್ದಾರೆ.
- - -