ಸಿಎಸ್ಪಿ ಕಪ್ ಸೀಜನ್ -2: ಮಜ್ಜಿಗೆಪುರ ತಂಡಕ್ಕೆ ಪ್ರಥಮ ಬಹುಮಾನ

KannadaprabhaNewsNetwork |  
Published : May 20, 2026, 12:30 AM IST
19ಕೆಎಂಎನ್ ಡಿ21 | Kannada Prabha

ಸಾರಾಂಶ

ಮಜ್ಜಿಗೆಪುರ ಗ್ರಾಮದ ತಂಡವು ಗೆಲುವು ಸಾಧಿಸುವ ಮೂಲಕ ಪ್ರಥಮ ಸ್ಥಾನಗಳಿಸಿತು. ಅತಿಥೇಯ ಬನ್ನಂಗಾಡಿ ತಂಡ ದ್ವಿತೀಯ ಸ್ಥಾನಪಡೆದು ಆಕರ್ಷಕ ಟ್ರೋಫಿಯೊಂದಿಗೆ 22 ಸಾವಿರ ನಗದು ಹಣ ಬಹುಮಾನ ಪಡೆದರು. ಮೈಸೂರಿನ ಜಾಲಿಬಾಯ್ಸ್ ತಂಡ ತೃತೀಯ ಸ್ಥಾನ ಪಡೆದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬನ್ನಂಗಾಡಿ ಗ್ರಾಮದಲ್ಲಿ ಫ್ರೆಂಡ್ಸ್ ಕ್ರಿಕೆಟರ್ಸ್ ವತಿಯಿಂದ ನಡೆದ ಸಿಎಸ್ಪಿ ಕಪ್ ಸೀಜನ್ -2 ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶ್ರೀರಂಗಪಟ್ಟಣ ತಾಲೂಕು ಮಜ್ಜಿಗೆಪುರ ಗ್ರಾಮದ ತಂಡ ಪ್ರಥಮ ಸ್ಥಾನಗಳಿಸಿ ಆಕರ್ಷಕ ಟ್ರೋಫಿ ಜೊತೆಗೆ 33 ಸಾವಿರ ನಗದು ಬಹುಮಾನ ಪಡೆದುಕೊಂಡರು.

ಎರಡನೇ ದಿನ ನಡೆದ ಕ್ರಿಕೆಟ್ ಪಂದ್ಯಾವಳಿಗೆ ಜೆಡಿಎಸ್ ಯುವ ನಾಯಕ ಸಿ.ಪಿ.ಶಿವರಾಜ್ ಪುಟ್ಟರಾಜು ಅವರು ಕ್ರಿಕೆಟ್ ಆಡುವ ಮೂಲಕ ಚಾಲನೆ ನೀಡಿದರು. ಫೈನಲ್ ಪಂದ್ಯಾವಳಿಯಲ್ಲಿ ಅತಿಥೇಯ ಬನ್ನಂಗಾಡಿ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಮಜ್ಜಿಗೆಪುರ ಗ್ರಾಮಗಳ ತಂಡಗಳು ಎದುರಾದವು.

ಮಜ್ಜಿಗೆಪುರ ಗ್ರಾಮದ ತಂಡವು ಗೆಲುವು ಸಾಧಿಸುವ ಮೂಲಕ ಪ್ರಥಮ ಸ್ಥಾನಗಳಿಸಿತು. ಅತಿಥೇಯ ಬನ್ನಂಗಾಡಿ ತಂಡ ದ್ವಿತೀಯ ಸ್ಥಾನಪಡೆದು ಆಕರ್ಷಕ ಟ್ರೋಫಿಯೊಂದಿಗೆ 22 ಸಾವಿರ ನಗದು ಹಣ ಬಹುಮಾನ ಪಡೆದರು. ಮೈಸೂರಿನ ಜಾಲಿಬಾಯ್ಸ್ ತಂಡ ತೃತೀಯ ಸ್ಥಾನ ಪಡೆದರು.

ಜೆಡಿಎಸ್ ಯುವ ಮುಖಂಡ ಸಿ.ಪಿ.ಶಿವರಾಜು ಪುಟ್ಟರಾಜು ಮಾತನಾಡಿ, ಬನ್ನಂಗಾಡಿ ಗ್ರಾಮದ ಯುವಕರು ಸಿಎಸ್ಪಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡುವ ಮೂಲಕ ಕ್ರೀಡೆಗೆ ಉತ್ತೇಜನೆ ನೀಡುತ್ತಿದ್ದಾರೆ. ಯುವ ಸಮುದಾಯ ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕ್ರೀಡಾಕೂಟಗಳಲ್ಲಿ ಭಾಗವಹಿಸಿವ ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿ ಮೆರೆಯಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಎರಡನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಈ ವೇಳೆ ತಾಪಂ ಮಾಜಿ ಸದಸ್ಯ ಅಲ್ಪಳ್ಳಿಗೋವಿಂದಯ್ಯ, ಬಿ.ಎಸ್.ಶ್ರೀನಿವಾಸ್, ಬಿ.ಎಚ್.ಪ್ರಸನ್ನ, ಮಹೇಂದ್ರ, ಬಿ.ಪಿ.ಸಂತೋಷ, ಆಕಾಶ್, ರಕ್ಷಿತ್, ಸಚ್ಚಿನ್, ಗೌತಮ್, ಪವನ್ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನನಗೆ ವಿಸಿಟಿಂಗ್ ಕಾರ್ಡ್‌ ಜಿಲ್ಲಾಧ್ಯಕ್ಷರು ಬೇಡ: ಎಚ್ಡಿಕೆ
ವನ್ಯಜೀವಿ-ಮಾನವ ಸಂಘರ್ಘ: ಐದೇ ವರ್ಷದಲ್ಲಿ 270 ಸಾವು!