ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಸಮೀಪದ ಬೆಡದಹಳ್ಳಿಯ ಶ್ರೀಪಂಚಭೂತೇಶ್ವರ ಮಠ ಏರ್ಪಡಿಸಿದ್ದ ಸಂಸ್ಕಾರ ಜ್ಞಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ, ಸೇವಾ ಮನೋಭಾವ, ಮಾನವೀಯ ಮೌಲ್ಯಗಳನ್ನು ಬಾಲ್ಯದಿಂದಲೇ ನೀಡಬೇಕಿದೆ. ಮಕ್ಕಳನ್ನು ಮೊಬೈಲ್ ಫೋನ್ ಪ್ರಪಂಚದಿಂದ ಹೊರಕ್ಕೆ ಕರೆ ತರುವುದು ಅಗತ್ಯವಾಗಿದೆ ಎಂದರು.
ಮಕ್ಕಳಿಗೆ ಯೋಗ, ಧ್ಯಾನ, ಸಂಸ್ಕೃತ ನೀತಿ ಬೋಧನೆ, ವಚನಗಳ ಮಹತ್ವ, ರಾಮಾಯಣ ಮಹಾಭಾರತ ಗ್ರಂಥಗಳ ಸಾರ ತಿಳಿಸುವುದು ಅವಶ್ಯವಿದೆ. ಮಕ್ಕಳಿಗೆ ಸಮಗ್ರ ವ್ಯಕ್ತಿತ್ವ ರೂಪಿಸಿ ಮಕ್ಕಳ ಆಸಕ್ತಿ, ಕಲಿಕೆಗೆ ಪೂರಕವಾಗಿ ಮಾರ್ಗದರ್ಶನ ನೀಡುವ ಶಿಬಿರ ಅವಶ್ಯವಿದೆ ಎಂದರು.ಬೆಡದಹಳ್ಳಿ ಪಂಚಭೂತೇಶ್ವರ ಮಠದ ಪೀಠಾಧಿಪತಿ ಶ್ರೀರುದ್ರಮುನಿ ಸ್ವಾಮೀಜಿ ಮಾತನಾಡಿ, ಮಕ್ಕಳ ಕಲಿಕೆ ಹಾಗೂ ಆಸಕ್ತಿಗೆ ಪೂರಕವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಜ್ಞಾನ ಬೋಧನೆಯನ್ನು ಮಠದಿಂದ ಮಾಡಲಾಗುತ್ತಿದೆ. ಜ್ಞಾನದ ಸುಧೆ ಮಕ್ಕಳಿಗೆ ಮೃಷ್ಟಾನ್ನವಾಗಿ ಉಣಬಡಿಸಿ ಉತ್ತಮ ಸಮಾಜ ಕಟ್ಟಲು ಪ್ರೇರಕರಾಗುವ ಕೆಲಸ ಸದಾ ಮಾಡುವುದಾಗಿ ನುಡಿದರು.
ಶ್ರೀಪಟ್ಟಲದಮ್ಮ ದೇವಿಯ ಅದ್ಧೂರಿ ರಥೋತ್ಸವ
ಗ್ರಾಮದೇವತೆ ಶ್ರೀಪಟ್ಟಲದಮ್ಮ ದೇವಿ ರಥೋತ್ಸವ ಭಕ್ತ ಸಾಗರದ ನಡುವೆ ಅದ್ಧೂರಿಯಾಗಿ ಜರುಗಿತು.
ಅಮ್ಮನ ಮೆರವಣಿಗೆ ವೇಳೆ ಭಕ್ತಾದಿಗಳು ಮಜ್ಜಿಗೆ ಪಾನಕ ಹೆಸರು ಬೇಳೆ ನೀಡಿದರು. ದೇವಲಾಪುರ ದೇವತೆಗಳ ಅದ್ಧೂರಿ ಮೆರವಣಿಗೆಯೊಂದಿಗೆ ಶ್ರೀಪಟ್ಟಲದಮ್ಮ ದೇವಿಯನ್ನು ಭಕ್ತ ಸಾಗರದ ನಡುವೆ ರಥೋತ್ಸವ ಬೀದಿಗೆ ತಂದು ವಿವಿಧ ಪೂಜಾ ಕಾರ್ಯಗಳನ್ನು ನೆರವೇರಿಸಿದ ಜನಸಾಗರದ ನಡುವೆ ರಥೋತ್ಸವ ನಡೆಸಲಾಯಿತು.