)
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೂದಿಗೆರೆ ಸಮೀಪದ ‘ಕಾಯಲೊರಮ್ ರೆಸ್ಟೋರೆಂಟ್’ ಮೇಲೆ ಆರೋಪ ಬಂದಿದೆ. ಇತ್ತೀಚಿಗೆ ಊಟ ತೆರಳಿದ್ದಾಗ ಹೋಟೆಲ್ನಲ್ಲಿ ನೀಡಿದ್ದ ಮಾಂಸದ ಬಗ್ಗೆ ಗ್ರಾಹಕರೊಬ್ಬರಿಗೆ ಅನುಮಾನ ಬಂದಿತು. ಕೂಡಲೇ ಆವಲಹಳ್ಳಿ ಠಾಣೆ ಪೊಲೀಸರಿಗೆ ಅವರು ದೂರು ನೀಡಿದ್ದಾರೆ. ಅದರನ್ವಯ ಹೋಟೆಲ್ ಮೇಲೆ ದಾಳಿ ನಡೆಸಿದ ಪೊಲೀಸರು, ಪಶು ವೈದ್ಯರನ್ನು ಕರೆದೊಯ್ದು ಆಹಾರ ಪರಿಶೀಲಿಸಿದಾಗ ದನದ ಮಾಂಸ ಎಂಬುದು ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ 6 ತಿಂಗಳಿಂದ ಆರೋಪಿಗಳು ಹೋಟೆಲ್ ನಡೆಸುತ್ತಿದ್ದರು. ಕುರಿ ಮಟನ್ ಮಾಂಸದೂಟ ಹೆಸರಿನಲ್ಲಿ ಅವರು ಪ್ರಚಾರ ನಡೆಸಿದ್ದರು. ಆದರೆ ಕುರಿ ಮಾಂಸದ ಸೋಗಿನಲ್ಲಿ ದನದ ಮಾಂಸದ ತಿನಿಸನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಎಲ್ಲಿಂದ ಮಾಂಸ ತಂದು ಮಾರಾಟ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪತ್ತೆ ಹಚ್ಚಿದ್ದು ಹೇಗೆ?
*ಪಶು ವೈದ್ಯರನ್ನು ಕರೆದೊಯ್ದು ಹೋಟೆಲಲ್ಲಿ ಆಹಾರ ಪರಿಶೀಲಿಸಿದಾಗ ದನದ ಮಾಂಸ ಎಂಬುದು ದೃಢ*ಕೇರಳದಿಂದ ಬಂದು ನಗರದಲ್ಲಿ ನೆಲೆಸಿದ್ದ ಇಬ್ಬರು ಕಿಡಿಗೇಡಿಗಳನ್ನು ಬಂಧಿಸಿದ ಆವಲಹಳ್ಳಿ ಪೊಲೀಸರು