- ಸಿಲಿಂಡರ್ ಸ್ಫೋಟ, ಸರ್ಕಾರಗಳ ಬೊಕ್ಕಸಕ್ಕೆ ನಷ್ಟ ಸಂಭವಿಸುವ ಮುನ್ನ ಆಡಳಿತ ಎಚ್ಚೆತ್ತುಕೊಳ್ಳಲಿ: ಎಸ್.ಚೇತನ ಕುಮಾರ್ - - - ಕನ್ನಡಪ್ರಭ ವಾರ್ತೆ ದಾವಣಗೆರೆ ಸರ್ಕಾರಗಳಿಗೆ ಕೋಟ್ಯಂತರ ರು. ನಷ್ಟ ಮತ್ತು ಭೀಕರ ಸ್ಫೋಟಗಳ ಸೃಷ್ಟಿಸಿ, ಸಾವು-ನೋವುಗಳ ಅಪಾಯ ತಂದೊಡ್ಡಬಲ್ಲ ರೀತಿಯಲ್ಲಿ ದಾವಣಗೆರೆ ಸೇರಿದಂತೆ ಹಲವಾರು ಕಡೆಗಳಲ್ಲಿ ಗೃಹ ಬಳಕೆ ಗ್ಯಾಸ್ ಸಿಲಿಂಡರ್ಗಳನ್ನು ಬಳಸಲಾಗುತ್ತಿದೆ. ವಾಹನಗಳು ಮತ್ತು ವಾಣಿಜ್ಯ ಸ್ಥಳಗಳಲ್ಲಿಯೇ ವ್ಯಾಪಕ ಹಾಗೂ ಅಸುರಕ್ಷಿತವಾಗಿ ಸಿಲಿಂಡರ್ಗಳ ಬಳಕೆ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ದುರ್ಬಳಕೆ ತಡೆಗೆ ಸರ್ಕಾರ ಸೂಕ್ತ ರೀತಿಯಲ್ಲಿ ಕಡಿವಾಣ ಹಾಕಿ, ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್ ಒತ್ತಾಯಿಸಿದೆ.
ಶನಿವಾರ ಫೌಂಡೇಶನ್ ರಾಜ್ಯ ವಿಭಾಗ ಮುಖ್ಯಸ್ಥ ಎಸ್.ಚೇತನ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಾಣಿಜ್ಯ ಸಿಲಿಂಡರ್ಗಳ ಬೆಲೆಗಳು ಸುಮಾರು 100ರಷ್ಟು ಹೆಚ್ಚಾಗಿವೆ. ಇದರಿಂದಾಗಿ ವಾಣಿಜ್ಯ ಉದ್ದೇಶಗಳಿಗಾಗಿ ಕೆಲ ಸಂಸ್ಥೆಗಳು, ವ್ಯಾಪಾರಸ್ಥರು ಗೃಹ ಬಳಕೆ ಸಿಲಿಂಡರ್ಗಳನ್ನೇ ಬಳಸುತ್ತಿದ್ದಾರೆ ಎಂದರು.ವಾಣಿಜ್ಯ ಉದ್ದೇಶಕ್ಕೇ ಹೆಚ್ಚು:
14.2 ಕೆಜಿ ಅನಿಲ ತುಂಬಿರುವ ಸಿಲಿಂಡರ್ಗಳನ್ನು ವ್ಯಾಪಕವಾಗಿ ಬಳಸುತ್ತಿರುವುದು ಕಂಡುಬರುತ್ತಿದೆ. ಕೆಲವೆಡೆ 14.2 ಕೆಜಿ ಸಿಲಿಂಡರ್ನಲ್ಲಿರುವ ಅನಿಲವನ್ನು 19 ಕೆ.ಜಿ.ಯ ವಾಣಿಜ್ಯ ಸಿಲಿಂಡರ್ ಆಗಿ ಪರಿವರ್ತಿಸಲಾಗುತ್ತಿದೆ. ವಾಹನಗಳಲ್ಲಿಯೂ ವ್ಯಾಪಕವಾಗಿ ಬಳಸಲಾಗುತ್ತಿದ್ದು, ಇದು ಅಪಾಯಕ್ಕೆ ಎಡೆಮಾಡಿಕೊಟ್ಟರೆ ಆಶ್ಚರ್ಯವಿಲ್ಲ. ಗೃಹ ಬಳಕೆ ಸಿಲಿಂಡರ್ ಅಸಮರ್ಪಕ ಹಾಗೂ ಅಕ್ರಮವಾಗಿ ಬಳಕೆ ವಿಚಾರ ಅತ್ಯಂತ ಗಂಭೀರವಾಗಿದೆ. ಇದರಿಂದ ಸರ್ಕಾರಗಳಿಗೆ ಕೋಟ್ಯಂತರ ರು. ನಷ್ಟವಾಗುತ್ತಿದೆ. ಅಲ್ಲದೆ, ಅಸುರಕ್ಷತೆ ಹೆಚ್ಚಿರುವ ಈ ಬೆಳವಣಿಗೆಯಿಂದ ಸ್ಫೋಟ, ಬೆಂಕಿ ಅವಘಡ ಸಂಭವಿಸುವ ಭೀತಿ ಎದುರಾಗಿದೆ ಎಂದು ದೂರಿದರು.ಗ್ರಾಹಕರ ಆಟೋ ಬುಕ್ಕಿಂಗ್ ಹೆಸರಲ್ಲಿ:
ಕಾಳಸಂತೆಕೋರರಿಗೆ ಸ್ವಲ್ಪ ಹೆಚ್ಚು ಹಣ ನೀಡಿದರೆ ಅನಿಲ ತುಂಬಿದ ಗೃಹ ಬಳಕೆ ಸಿಲಿಂಡರ್ಗಳು ಮಾರುಕಟ್ಟೆಯಲ್ಲಿ ಅಕ್ರಮವಾಗಿ ಸುಲಭವಾಗಿ ದೊರೆಯುತ್ತಿವೆ. ಕೆಲವು ಗ್ಯಾಸ್ ಏಜೆನ್ಸಿಗಳು ತೈಲ ಕಂಪನಿಗಳಿಂದ ಹೆಚ್ಚುವರಿ ಸಿಲಿಂಡರ್ ತೆಗೆದುಕೊಳ್ಳುತ್ತಿರುವುದು ಇಷ್ಟೆಲ್ಲ ಅವ್ಯವಹಾರಕ್ಕೆ ಕಾರಣವಾಗಿದೆ. ಡಮ್ಮಿ ಗ್ರಾಹಕರ ಹೆಸರಿನಲ್ಲಿ ನೋಂದಣಿ ಮಾಡಿಸಿ ಕಪ್ಪು ಮಾರುಕಟ್ಟೆ ಮಾಡುತ್ತಿದ್ದಾರೆ. ಒಂದೆಡೆ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬಡವರು ಮಿತವಾಗಿ ಬಳಸುತ್ತಿದ್ದಾರೆ. ಸದ್ಯ 2ರಿಂದ 3 ತಿಂಗಳಿಂದ ಒಂದು ಕುಟುಂಬ 1 ಸಿಲಿಂಡರ್ ಬಳಕೆಯಾಗುತ್ತಿದೆ. ಮಾರ್ಕೆಟಿಂಗ್ನಿಂದ ನಾಗಾ ಫಂಡ ಬಳಸಿ ಗ್ರಾಹಕರ ಆಟೋ ಬುಕ್ಕಿಂಗ್ ಹೆಸರಿನಲ್ಲಿ ತೈಲ ಕಂಪನಿಗಳು ವಿತರಕರ ಮೂಲಕ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ವಿತರಿಸಲು ಆರಂಭಿಸಿವೆ ಎಂದರು.ವಾಹನಗಳಲ್ಲಿ ಗೃಹ ಬಳಕೆಯ 14.2 ಕೆಜಿ ಎಲ್ಪಿಜಿ ಗ್ಯಾಸ್ ತುಂಬಿಸುವುದು ತುಂಬಾ ಅಪಾಯಕಾರಿ. ಯಾವುದೇ ಕ್ಷಣದಲ್ಲಿ ಸಿಲಿಂಡರ್ ಸ್ಫೋಟಗೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಗೃಹ ಬಳಕೆ ಸಿಲಿಂಡರ್ಗಳನ್ನು ಅಕ್ರಮವಾಗಿ ಬಳಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಎಸ್. ಚೇತನ ಕುಮಾರ್ ಹೇಳಿದರು.
ಎಲ್.ಪಿ.ಜಿ. ಸಿಲಿಂಡರ್ಗಳನ್ನು ಅಕ್ರಮವಾಗಿ ಸಾಗಣೆ, ಬಳಕೆಗೆ ಕಡಿವಾಣ ಹಾಕಬೇಕು. ಸರ್ಕಾರ ಮತ್ತು ಜಿಲ್ಲಾಡಳಿತ ಅವ್ಯವಹಾರ ನಡೆಸುವವರಿಗೆ ಚುರುಕು ಮುಟ್ಟಿಸಬೇಕಾದ ಅಗತ್ಯವಿದೆ. ರಾಜ್ಯದ ವಿವಿಧೆಡೆ ನಡೆದ ಸಿಲಿಂಡರ್ ಸ್ಫೋಟ ಪ್ರಕರಣಗಳ ಕುರಿತು ಉನ್ನತಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಗ್ರಾಹಕ ದಕ್ಷತಾ ಕಲ್ಯಾಣ ಫೌಂಡೇಶನ್ ಹುಬ್ಬಳ್ಳಿ ವಿಭಾಗದ ಮುಖ್ಯಸ್ಥ ಅರುಣ್ ಮಾನಗಾಂವೆ ಇದ್ದರು.
- - -ಬಾಕ್ಸ್ 1. ಅಕ್ರಮ ರೀಫಿಲಿಂಗ್ ಚಟುವಟಿಕೆಗಳಿಂದ ಸಿಲಿಂಡರ್ ಅಗ್ನಿ ಅವಘಡಗಳು ನಡೆಯುತ್ತಿವೆ 2. ರಾಜ್ಯದಲ್ಲಿ ಈಗಾಗಲೇ ಗಂಭೀರ ಪ್ರಕರಣಗಳು ಘಟಿಸಿರುವುದು ಗಮನೀಯ
3. ಸಿಲಿಂಡರ್ಗಳ ಅಕ್ರಮ ವ್ಯವಹಾರ ವಿರುದ್ಧ ಸರ್ಕಾರ ಮತ್ತು ಜಿಲ್ಲಾಡಳಿತ ಶೀಘ್ರ ಎಚ್ಚೆತ್ತುಕೊಳ್ಳಬೇಕು4. ಬರೀ ಕಾಗದ ಪತ್ರಗಳ ಮೂಲಕ ಕೆಲಸ ಆಗುವುದಿಲ್ಲ
5. ಸಿಲಿಂಡರ್ಗಳ ಅಸುರಕ್ಷಿತ ಬಳಕೆ ಹೆಚ್ಚುತ್ತಿದ್ದು, ನಾಗರೀಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ6. ಸಿಲಿಂಡರ್ ಸ್ಫೋಟ ಪ್ರಕರಣಗಳ ಕುರಿತು ಉನ್ನತಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು
7. ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬಡವರು ಮಿತವಾಗಿ ಬಳಸುತ್ತಿದ್ದಾರೆ8. ವಾಹನಗಳು, ವಾಣಿಜ್ಯ ಸ್ಥಳಗಳಲ್ಲಿಯೇ ಎಲ್ಪಿಜಿ ಸಿಲಿಂಡರ್ಗಳ ಅವ್ಯಾಹತ ಬಳಕೆಗೆ ಕಡಿವಾಣ ಬೀಳಬೇಕು
- - - -27ಕೆಡಿವಿಜಿ32ಃ:ದಾವಣಗೆರೆಯಲ್ಲಿ ವಾಹನಗಳು ಹಾಗೂ ವಾಣಿಜ್ಯ ಸ್ಥಳಗಳಲ್ಲಿ ಗೃಹ ಬಳಕೆ ಸಿಲಿಂಡರ್ ಅಕ್ರಮ ಬಳಕೆಗೆ ಶೀಘ್ರ ಕಡಿವಾಣ ಹಾಕಿ ಅಪಾಯಗಳ ತಪ್ಪಿಸುವಂತೆ ಸುದ್ದಿಗೋಷ್ಠಿಯಲ್ಲಿ ಎಸ್.ಚೇತನ್ ಕುಮಾರ್ ಸರ್ಕಾರ, ಜಿಲ್ಲಾಡಳಿತಕ್ಕೆ ಒತ್ತಾಯಿಸಿದರು.