ಡಿ.ಕೆ. ಶಿವಕುಮಾರ 2028ಕ್ಕೆ ಮತ್ತೆ ಮುಖ್ಯಮಂತ್ರಿ: ಎಚ್.ಜಿ. ರಾಮುಲು

KannadaprabhaNewsNetwork |  
Published : Sep 06, 2026, 02:45 AM IST
ಗಂಗಾವತಿ ಸಮೀಪದ ಬೂದೇಶ್ವರ ದೇಗುಲದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಎಚ್.ಜಿ. ರಾಮುಲು ಅವರನ್ನು ಭೇಟಿಯಾದರು | Kannada Prabha

ಸಾರಾಂಶ

ಡಿ.ಕೆ. ಶಿವಕುಮಾರ ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಜೊತೆಗೆ ಅಲ್ಪ ಸಮಯ ಇದ್ದರೂ ಅಭಿವೃದ್ದಿ ಮಾಡುವದಕ್ಕೆ ಕಾಲವಕಾಶ ಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ.

ಗಂಗಾವತಿ:

ರಾಜ್ಯದ ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ ಅವರು ಬರುವ 2028ಕ್ಕೆ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಜಿ ಸಂಸದ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಚ್.ಜಿ. ರಾಮುಲು ಹೇಳಿದರು. ಸಮೀಪದ ಬೂದೇಶ್ವರ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿ. ಅವರು ಚಂಡಿಯಾಗದ ಸಂಕಲ್ಪ ಪೂಜೆ ಆಗಮಿಸುವ ಸಂದರ್ಭದಲ್ಲಿ ಪತ್ರಕ್ರತರೊಂದಿಗೆ ಮಾತನಾಡಿದರು.

ಡಿ.ಕೆ. ಶಿವಕುಮಾರ ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಜೊತೆಗೆ ಅಲ್ಪ ಸಮಯ ಇದ್ದರೂ ಅಭಿವೃದ್ದಿ ಮಾಡುವದಕ್ಕೆ ಕಾಲವಕಾಶ ಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.

ಭೂದೇಶ್ವರ ದೇಗಲು ಪುಣ್ಯ ಕ್ಷೇತ್ರವಾಗಿದೆ. ರಾಮಾಯಣ ಸಮಯದಲ್ಲಿ ಶ್ರೀರಾಮಚಂದ್ರರು ಭೇಟಿ ನೀಡಿದ ಸ್ಥಳವಾಗಿರುವ ಈ ಭೂಮಿಯಲ್ಲಿ ಭೂದೇಶ್ವರ ದೇವರ ದೇವಸ್ಥಾನವನ್ನು ಸ್ಥಾಪನೆ ಮಾಡಲಾಗಿದೆ. ಅಷ್ಟೇ ಅಲ್ಲದೆ ದೇವಸ್ಥಾನ ನಿಮಾ೯ಣವಾಗುವ ಮುಂಚಿತವಾಗಿಯೇ ದೇಶದ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಈ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅವರ ನಂತರ ಸಿಎಂ ಡಿಕೆಶಿ ಭೇಟಿ ನೀಡಿದ್ದಾರೆ. ನಮ್ಮ ಶಿಷ್ಯನ ರೀತಿ ಇರುವ ಡಿಕೆಶಿ ಸಿಎಂ ಆಗಿರುವುದು ಸಂತಸದ ವಿಷಯವಾಗದೆ. ಅವರು ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುವುದು ಸಾಕಷ್ಟು ಇದೆ. ಆದರೆ, ಸಮಯ ಕಡಿಮೆ ಇದೆ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಮುಂದಿನ ಬಾರಿಯೂ ಡಿಕೆಶಿ ಸಿಎಂ ಆಗಲಿ ಎಂದು ದೇವರಲ್ಲಿ ಪ್ರಾಥ೯ನೆ ಮಾಡಲಾಗುವುದು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅ. 22ರ ವರೆಗೆ ಮತದಾರ ಚೀಟಿ ತಿದ್ದುಪಡಿಗೆ ಅವಕಾಶ
ಬಸ್ ನಿಲ್ಲದಿದ್ದರೆ ಹೆದ್ದಾರಿ ಬಂದ್: ಗ್ರಾಮಸ್ಥರ ಎಚ್ಚರಿಕೆ