ಕನ್ನಡಪ್ರಭ ವಾರ್ತೆ ಹಲಗೂರು
ಹಲಗೂರಿನ ಸ್ವಾಮಿ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಜೆಪಿಎಂ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿ, ವ್ಯಾಪಾರದಲ್ಲಿ ಬಂಡವಾಳದ ಹೂಡಿಕೆ ಲಾಭ, ನಷ್ಟ ತಿಳಿವಳಿಕೆ, ಜ್ಞಾನ ವೃದ್ಧಿಯಾಗಲಿದೆ. ದಿನನಿತ್ಯ ವಸ್ತುಗಳ ಬೆಲೆ ನಿರ್ಧಾರ, ಒಂದು ಕಾರ್ಯದ ಹಿಂದಿನ ಶ್ರಮದ ಅರಿವು ಮೂಡಲಿದೆ ಎಂದರು.
ಮುಖ್ಯ ಶಿಕ್ಷಕ ಮಧುಸ್ವಾಮಿ ಮಾತನಾಡಿ, ಪಠ್ಯದ ಜೊತೆಗೆ ಸಹ ಪಠ್ಯ ಚಟುವಟಿಕೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮಕ್ಕಳ ಸಂತೆ ಆಯೋಜಿಸಿದೆ. ಗಣಿತ ವಿಷಯದ ಸಂಕಲನ, ವ್ಯವಕಲನ ಕಲಿಕೆ ವೃದ್ಧಿಯಾಗಲಿದೆ. ಗ್ರಾಹಕ ಮತ್ತು ವ್ಯಾಪಾರಿಗಳ ನಡುವಿನ ಸಂವಹನ ಕೌಶಲ್ಯ ಮತ್ತು ಗ್ರಾಹಕರನ್ನು ಕಾಯ್ದುಕೊಳ್ಳುವ ಕಲೆಯನ್ನು ಕರಗತ ಮಾಡಿಸುವುದಲ್ಲದೇ ಮಕ್ಕಳಲ್ಲಿ ಸ್ವಾವಲಂಬಿ ಭಾವನೆಯನ್ನು ಗಟ್ಟಿಗೊಳಿಸಲು ಮಕ್ಕಳ ಸಂತೆ ಸಹಕಾರಿಯಾಗಲಿದೆ ಎಂದರು.ಈ ವೇಳೆ ಜೆಪಿಎಂ ಶಾಲೆ ಮುಖ್ಯ ಶಿಕ್ಷಕ ಮಧುಸ್ವಾಮಿ, ಶಿಕ್ಷಕರಾದ ಗೋವಿಂದರಾಜು, ಶೃತಿ, ಹರ್ಷಿತಾ, ಸವಿತಾ, ಇರ್ಫಾನ್ ತಬ್ಬಸುಮ್, ಲುಬ್ನಾ, ನಂದಿನಿ, ಭಾಗ್ಯ ಲಕ್ಷ್ಮೀ, ವಿನುತಾ ಬಿ.ಕೆ.ಮಧು, ಸಿದ್ದರಾಜು, ಸೇರಿದಂತೆ ಪೋಷಕರು ಭಾಗವಹಿಸಿದ್ದರು.ಹೊಸವರ್ಷಾಚರಣೆ-ಗಣ್ಯರಿಗೆ ಸನ್ಮಾನ: ಸಾಂಸ್ಕೃತಿಕ ಕಾರ್ಯಕ್ರಮಗಳು
ಹೊಸ ವರ್ಷಾಚರಣೆ ಅಂಗವಾಗಿ ಶ್ರೀರಂಜಿನಿ ಕಲಾ ವೇದಿಕೆ ವತಿಯಿಂದ ಜ.1ರಂದು ನಗರದ ವಿದ್ಯಾ ಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ಹೊಸ ವರ್ಷಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿನ ಶೈಲಾ ಕೆ.ಎಸ್.( ಭರತನಾಟ್ಯ), ಎ.ಎನ್.ಬಸವರಾಜು ( ಸಂಗೀತ ), ಕೊತ್ತತ್ತಿ ರಾಜು, (ಸಾಹಿತ್ಯ) ದ.ಕೋ. ಹಳ್ಳಿ ಚಂದ್ರಶೇಖರ್ (ಪತ್ರಿಕೋದ್ಯಮ), ಶಶಿಧರ್ ಸಬ್ಬನಹಳ್ಳಿ (ಯುವ ಕವಿ) ರೋಷನ್ ಚೋಪ್ರಾ (ಯುವ ಕವಿ ) ದೋ.ಚಿ.ಗೌಡ (ರೈತ ಕವಿ) ಲೋಕೇಶ್ ಕಲ್ಕುಣಿ (ಸಾಹಿತ್ಯ) ಅವರನ್ನು ಸನ್ಮಾನಿಸಲಾಗುವುದು.
ಅತಿಥಿಗಳಾಗಿ ಮನ್ಮುಲ್ ಮಾಜಿ ನಿರ್ದೇಶಕಿ ನೀನಾ ಪಟೇಲ್ , ಡ್ಯಾಫೋಡಿಲ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿ.ಸುಜಾತಕೃಷ್ಣ , ಕರವೇ ಗೌರವಾಧ್ಯಕ್ಷ ಕೆ.ಟಿ.ಶಂಕರೇಗೌಡ ಹಾಗೂ ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್ ನ ಕಾರ್ಯದರ್ಶಿ ರಾಘವೇಂದ್ರ, ಹಾಗೂ ಖ್ಯಾತ ವಕೀಲ ಬಸವಯ್ಯ ಭಾಗವಹಿಸುವರು,