-ಪರಿಹಾರದ ಚೆಕ್ಗಳ ವಿತರಣೆ
ಕನ್ನಡಪ್ರಭ ವಾರ್ತೆ ಸೂಲಿಬೆಲೆ
ಹೈನುಗಾರಿಕೆ ಬಡ ರೈತರಿಗೆ ಆದಾಯ ತರುವ ಗ್ಯಾರಂಟಿ ಉಪಕಸುಬಾಗಿದ್ದು ,ಇದಕ್ಕೆ ಪೂರಕವಾಗಿ ಬೆಂಗಳೂರು ಹಾಲು ಒಕ್ಕೂಟ ಸದಾ ಬೆನ್ನಲುಬಾಗಿ ನಿಂತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.ಹೋಬಳಿಯ ಬೆಂಡಿಗಾನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ವಿಮೆ, ಮರಣ ವಿಮೆ, ವೈದ್ಯಕೀಯ ವೆಚ್ಚಗಳ ಚೆಕ್ ಗಳನ್ನು ವಿತರಿಸಿ ಮಾತನಾಡಿದ ಅವರು, ಹೊಸಕೋಟೆ ತಾಲೂಕಿನ ೧೫೫ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ೧.೫೫ ಲಕ್ಷ ಲೀಟರ್ ಹಾಲು ಬೆಂಗಳೂರು ಹಾಲು ಒಕ್ಕೂಟಕ್ಕೆ ಸರಬರಾಜು ಮಾಡುತ್ತಿದೆ. ಸರ್ಕಾರಿ ಸವಲತ್ತುಗಳ ಜೊತೆಯಲ್ಲಿ ಬಮೂಲ್ ನಿರ್ದೇಶಕ ಬಿ.ವಿ.ಸತೀಶಗೌಡರ ಕೋಟಾದಲ್ಲಿಯೂ ಸವಲತ್ತುಗಳನ್ನು ನೀಡುತ್ತಿರುವುದು ನಿಮ್ಮ ಅಭಿವೃದ್ಧಿಗೆ ಪೂರಕ ಎಂದು ಹೇಳಿದರು.
ಹೊಸಕೋಟೆ ಶಿಬಿರದ ಡಾ.ಸಂತೋಷ್ ಮಾತನಾಡಿ, ಪಶು ಆಹಾರದಲ್ಲಿ ವ್ಯತ್ಯಾಸವಾಗಿದ್ದು ಲ್ಯಾಬ್ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಹೊಸಕೋಟೆ ತಾಲ್ಲೂಕಿನಲಿ ಪ್ರಸ್ತುತ ೧.೫೫ ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ರಿಂದ ೩ ಲಕ್ಷ ಲೀಟರ್ವರಗೆ ಹೆಚ್ಚಬಹುದು. ಕೊಳತೂರು ಹಾಲು ಉತ್ಪಾದಕರ ಸಂಘ ಹಾಲು ಸರಬರಾಜಿನಲ್ಲಿ ಪ್ರಥಮ ಸ್ಥಾನ ಹಾಗೂ ಬೆಂಡಿಗಾನಹಳ್ಳಿ ಸಂಘ ೨ನೇ ಸ್ಥಾನದಲ್ಲಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಎಂಅರ್ಡಿ ಸದಸ್ಯ ಸುಬ್ಬರಾಜು, ಚೊಕ್ಕಹಳ್ಳಿ ಡೇರಿ ಅಧ್ಯಕ್ಷ ರಾಜಣ್ಣ, ಹೊಸಕೋಟೆ ಶಿಬಿರದ ವ್ಯವಸ್ಥಾಪಕರಾದ ಡಾ.ಮಧುಸೂದನ್, ವಿನಯಕುಮಾರ್, ವಿಸ್ತರಣಾಧಿಕಾರಿ ಅನಂದ್, ರಮೇಶ್, ವಿದ್ಯಾಶ್ರೀ, ಪವಿತ್ರ, ರಘುನಾಥ್, ಬಮೂಲ್ ಟ್ರಸ್ಟ್ ನವೀನ್ ಕುಮಾರ್, ಕೃಷಿ ಅಧಿಕಾರಿ ಸೌಮ್ಯ, ಡೇರಿ ನೌಕರರ ಸಂಘದ ಅಧ್ಯಕ್ಷ ವಿಜಯಕುಮಾರ್ ಇತರರರಿದ್ದರು.(ಫೋಟೋ ಕ್ಯಾಪ್ಷನ್)ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿ ಗ್ರಾಮದಲ್ಲಿ ಬೆಂಗಳೂರು ಹಾಲು ಒಕ್ಕೂಟದಿಂದ ಹೈನುದಾರರ ಕುಟುಂಬಗಳಿಗೆ ವಿವಿಧ ಪರಿಹಾರದ ಚೆಕ್ಗಳನ್ನು ಶಾಸಕ ಶರತ್ ಬಚ್ಚೇಗೌಡ ವಿತರಿಸಿದರು. ನಿರ್ದೇಶಕ ಬಿ.ವಿ.ಸತೀಶಗೌಡ, ಬಿಎಂಅರ್ಡಿ ಸದಸ್ಯ ಸುಬ್ಬರಾಜು, ಚೊಕ್ಕಹಳ್ಳಿ ಡೇರಿ ಅಧ್ಯಕ್ಷ ರಾಜಣ್ಣ ಇತರರಿದ್ದರು.