ಕನ್ನಡಪ್ರಭವಾರ್ತೆ ಮೂಲ್ಕಿ
ದೈವಾರಾಧನೆಯೇ ಈ ಮಣ್ಣಿನ ಮೂಲ ಸತ್ವ ಮತ್ತು ತತ್ವ. ಸಂಧಿಗಳ ಸಮೂಹವೇ ಪಾರ್ದನ. ಅದು ಒಂದು ನಿಖರವಾದ ಮಾಹಿತಿ. ಒಂದು ದೈವದ ಹುಟ್ಟು-ಕಟ್ಟು-ಆಯ -ಬೀರ ಇವುಗಳು ಸಂಧಿಗಳಲ್ಲಿ ವ್ಯಕ್ತವಾಗುವ ವಿವಿಧ ಆಯಾಮಗಳು. ಇದರ ಆರಂಭ ಮತ್ತು ಅಂತ್ಯ, ಉದ್ದೇಶ ಒಂದೇ ಆಗಿದ್ದು, ಅದರ ಮಧ್ಯೆ ಪ್ರಾದೇಶಿಕ ವ್ಯತ್ಯಾಸಗಳನ್ನು ಕಾಣಬಹುದು. ಪಾಡ್ಡನಗಳು ತುಳುನಾಡಿನ ಪುರಾಣ ಪಠ್ಯಗಳಾಗಿದ್ದು 16,400 ಸಾಲುಗಳಿರುವ ಸಿರಿ ಪಾರ್ದನ ಹಾಡಿದ ಮಾಚಾರು ಗೋಪಾಲ ನಾಯ್ಕರನ್ನು ವಿದೇಶಿಯರು ಬಂದು ಪಾರ್ದನದ ಬಗೆಗಿನ ಅಧ್ಯಯನ ನಡೆಸಿರುವುದು ನಮಗೆ ಹೆಮ್ಮೆ. ಪಾರ್ದನ ಪಠ್ಯಗಳನ್ನು ಶೈಕ್ಷಣಿಕ ನೆಲೆಯಲ್ಲಿ ಅಧ್ಯಯನ ನಡೆಯಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಟೀಲು ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ ವಿ. ಪಾರ್ದನ ತುಳುವರ ಜೀವನದ ಅವಿಭಾಜ್ಯ ಅಂಗ, ಇದರಲ್ಲಿ ವ್ಯಕ್ತವಾಗುವ ಕಥೆ, ಸಂಗೀತ, ಸಾಹಿತ್ಯ ಎಲ್ಲವೂ ಮುಖ್ಯವಾಗುತ್ತದೆ. ತುಳುವರ ಮೂಲ ಕೃಷಿ ಬದುಕು, ಇಂದಿನ ಪೀಳಿಗೆಯು ಇದರಿಂದ ದೂರವಿರುವುದು ಬೇಸರ ತಂದಿದೆ ಎಂದರು. ಕಾರ್ಯಕ್ರಮ ಸಂಯೋಜಕಿ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಹರಿಣಾಕ್ಷಿ ಉಪಸ್ಥಿತರಿದ್ದರು. ತುಳು ಪೀಠದ ಸಹಾಯಕ ಪ್ರಸಾದ್ ಅಂಚನ್ ಸ್ವಾಗತಿಸಿದರು. ವಿದ್ಯಾರ್ಥಿನಿ ಪೃಥ್ವಿ ಎಚ್. ಪೂಜಾರಿ ನಿರೂಪಿಸಿದರು, ಬಿಂದಿಯಾ ವಂದಿಸಿದರು.