‘ವೈದ್ಯ’ ಕನಸಿಗೆ ಎಕ್ಸೆಲ್ ಗುರುವಾಯನಕೆರೆ ಜೀವ

Published : Jun 30, 2026, 11:41 AM IST
doctor

ಸಾರಾಂಶ

ಪ್ರತಿಭಾವಂತರಾದರೂ ಅವಕಾಶ ಇಲ್ಲವೆಂದು ಪರಿತಪಿಸುವ, ಸಾಮಾನ್ಯ ವಿದ್ಯಾರ್ಥಿಗಳಿಗೆ ಕೈಗೆಟುಕುವ ಶುಲ್ಕದಲ್ಲಿ ಉನ್ನತ ಗುಣಮಟ್ಟದ ಕೋಚಿಂಗ್ ನೀಡುತ್ತಾ ಮಧ್ಯಮ ವರ್ಗದ ಅದೆಷ್ಟೋ ವಿದ್ಯಾರ್ಥಿಗಳ ವೈದ್ಯರಾಗುವ ಕನಸಿಗೆ ಜೀವ ತುಂಬಿದ ಹಿರಿಮೆ ಗುರುವಾಯನಕೆರೆಯ ಎಕ್ಸೆಲ್ ನೀಟ್ ಅಕಾಡೆಮಿ

  ಬೆಳ್ತಂಗಡಿ :  ಪ್ರತಿಭಾವಂತರಾದರೂ ಅವಕಾಶ ಇಲ್ಲವೆಂದು ಪರಿತಪಿಸುವ, ಸಾಮಾನ್ಯ ವಿದ್ಯಾರ್ಥಿಗಳಿಗೆ ಕೈಗೆಟುಕುವ ಶುಲ್ಕದಲ್ಲಿ ಉನ್ನತ ಗುಣಮಟ್ಟದ ಕೋಚಿಂಗ್ ನೀಡುತ್ತಾ ಮಧ್ಯಮ ವರ್ಗದ ಅದೆಷ್ಟೋ ವಿದ್ಯಾರ್ಥಿಗಳ ವೈದ್ಯರಾಗುವ ಕನಸಿಗೆ ಜೀವ ತುಂಬಿದ ಹಿರಿಮೆ ಗುರುವಾಯನಕೆರೆಯ ಎಕ್ಸೆಲ್ ನೀಟ್ ಅಕಾಡೆಮಿಯದ್ದಾಗಿದೆ.

ರಸಾಯನ ವಿಜ್ಞಾನದ ಪ್ರಾಧ್ಯಾಪಕರಾಗಿ, ನೀಟ್ ಟ್ರೈನರ್ ಆಗಿ ಖ್ಯಾತರಾದ ಸುಮಂತ್

ರಸಾಯನ ವಿಜ್ಞಾನದ ಪ್ರಾಧ್ಯಾಪಕರಾಗಿ, ನೀಟ್ ಟ್ರೈನರ್ ಆಗಿ ಖ್ಯಾತರಾದ ಸುಮಂತ್ ಕುಮಾರ್ ಜೈನ್ ಬಿ. ಅವರ ಸಮರ್ಥ ನಾಯಕತ್ವ ಇಲ್ಲಿದೆ. ದಕ್ಷಿಣ ಭಾರತದ ಸುಪ್ರಸಿದ್ಧ ವಿದ್ಯಾಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ, ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾವಿರಾರು ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಕಿಗೆ ತಂದ ಪ್ರಾಧ್ಯಾಪಕ ಬಳಗದ ಮಾರ್ಗದರ್ಶನದಲ್ಲಿ ನೀಟ್ ಶಿಕ್ಷಣ ಪಡೆಯಲು ಇಲ್ಲಿ ಅವಕಾಶವಿದೆ. ತನ್ನ ಶೈಕ್ಷಣಿಕ ಸಾಧನೆಗಳಿಂದ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜು, ಎಕ್ಸೆಲ್ ಟೆಕ್ನೊ ಸ್ಕೂಲ್, ವೇಣೂರಿನಲ್ಲಿರುವ ಎಕ್ಸೆಲ್ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಎಕ್ಸೆಲ್ ನೀಟ್ ಅಕಾಡೆಮಿಯ ಸಹ ಸಂಸ್ಥೆಗಳಾಗಿವೆ.

ಪದವಿ ಪೂರ್ವ ಶಿಕ್ಷಣದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ, ಸ್ಟೇಟ್ ಟಾಪ್ 10ರಲ್ಲಿ 58 ವಿದ್ಯಾರ್ಥಿಗಳಿಗೆ ಸ್ಥಾನ, ಜೆಇಇ ಪರೀಕ್ಷೆಯಲ್ಲಿ ಒಟ್ಟು 12 ವಿದ್ಯಾರ್ಥಿಗಳಿಗೆ ಐ ಐಟಿಗಳಿಗೆ ಪ್ರವೇಶ, ಸಿಇಟಿಯಲ್ಲಿ 1000 ರ್‍ಯಾಂಕ್‌ ನೊಳಗೆ 300 ರ್‍ಯಾಂಕ್‌, ಬಿಎಸ್ಸಿ ಅಗ್ರಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ, ಸಿಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ, ಎನ್‌ಡಿಎ ಪರೀಕ್ಷೆಯಲ್ಲಿ 12 ಮಂದಿ ಆಯ್ಕೆ, ನಾಟ ಎಕ್ಸಾಂ ಬರೆದವರೆಲ್ಲಾ ಅರ್ಹರಾಗುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ನೂತನ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದ ಹಿರಿಮೆ ಎಕ್ಸೆಲ್‌ನದು.

ಪರಿಣಿತ ಹಾಗೂ ಹಿರಿಯ ಶ್ರೇಣಿಯ ಪ್ರಾಧ್ಯಾಪಕ ವೃಂದ

ನೀಟ್ ಎಕ್ಸಾಂ ಅದೆಷ್ಟೇ ಕಠಿಣವಾಗಿದ್ದರೂ ಎಕ್ಸೆಲ್‌ನ ವಿದ್ಯಾರ್ಥಿಗಳಿಗೆ ಸುಲಭ ಸಾಧ್ಯವಾಗಲು ಕಾರಣ ಇಲ್ಲಿರುವ ಪರಿಣಿತ ಹಾಗೂ ಹಿರಿಯ ಶ್ರೇಣಿಯ ಪ್ರಾಧ್ಯಾಪಕ ವೃಂದದ ಬೋಧನೆ. ಅಚ್ಚುಕಟ್ಟಾದ ಅಕಾಡೆಮಿಕ್ ಪ್ಲ್ಯಾನ್, ನಿರಂತರವಾದ ತರಗತಿ, ಡೌಟ್ ಕ್ಲಿಯರ್ ಸೆಷನ್ಸ್, ಒತ್ತಡವಾಗದಂತೆ ನಡೆಸುವ ಕೌನ್ಸಿಲಿಂಗ್ ಸೆಷನ್‌ಗಳು ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿಸಲು ಸಫಲವಾಗಿವೆ.

ವಿಶಾಲವಾದ ತರಗತಿ ಕೋಣೆಗಳು, ಒಂದು ಲಕ್ಷಕ್ಕೂ ಹೆಚ್ಚು ಪ್ರಶ್ನೆಗಳಿರುವ ಕ್ವಶ್ಚನ್ ಬ್ಯಾಂಕ್, ಅವಶ್ಯಕತೆಗನುಗುಣವಾಗಿ ಇಂಡಿವಿಜುವಲ್ ಕೋಚಿಂಗ್ ಅಗತ್ಯವನ್ನನುಸರಿಸಿ ಆನ್ಲೈನ್ ತರಬೇತಿ, ಡೈಲಿ ಟೆಸ್ಟ್ ಪ್ರಾಧ್ಯಾಪಕರ ಉಪಸ್ಥಿತಿಯಲ್ಲಿ ಸ್ಟಡಿ ಅವರ್, ಎಕ್ಸ್ಟ್ರಾ ಎಕ್ಸಪ್ಲಾನೇಶನ್ ಮೊದಲಾದವು ದಾಖಲಾದ ವಿದ್ಯಾರ್ಥಿಗಳ ಕನಸು ಕೈಗೂಡಿಸಲು ಕೈಗೊಳ್ಳುವ ಯತ್ನಗಳಾಗಿವೆ. ಎಕ್ಸೆಲ್ ನೀಟ್ ಅಕಾಡೆಮಿ ಅವಿರತ ಶ್ರಮ ವಹಿಸುವುದರಿಂದ ಸಹಜವಾಗಿ ಇಲ್ಲಿನ ವಿದ್ಯಾರ್ಥಿಗಳು ಅತ್ಯದ್ಭುತ ಸಾಧನೆ ಮಾಡಲು ಸಾಧ್ಯವಾಗುತ್ತದೆ.

ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್, ಬಿಸಿ ನೀರಿನ ವ್ಯವಸ್ಥೆ, ಕ್ಯಾಂಪಸ್‌ನಲ್ಲೇ ವೈದ್ಯಕೀಯ ಸೌಲಭ್ಯ, ನಾಲ್ಕು ಹೊತ್ತು ಗುಣಮಟ್ಟದ ಆಹಾರ ಪೂರೈಕೆ, ಯೋಗ-ಧ್ಯಾನ-ಪ್ರಾರ್ಥನಾ ಸಮಯ ಹೀಗೆ ಎಕ್ಸೆಲ್ ವಸತಿ ನಿಲಯಗಳು ವಿದ್ಯಾರ್ಥಿ ಸ್ನೇಹಿಯಾಗಿವೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಐದು ಮಂದಿ ಏಮ್ಸ್, ಜಿಪ್ಮಾರ್ ಸೇರಿದಂತೆ ಒಟ್ಟು 258 ವಿದ್ಯಾರ್ಥಿಗಳಿಗೆ ಭಾರತದ ಅತ್ಯಂತ ಪ್ರತಿಷ್ಠಿತ ಮೆಡಿಕಲ್ ಕಾಲೇಜುಗಳಲ್ಲಿ ಓದುವಂಥ ಅವಕಾಶವನ್ನು ಎಕ್ಸೆಲ್ ಮಾಡಿ ಕೊಟ್ಟಿದೆ.

ಕೊಡಗು ಮೂಲದ ಪ್ರವಾಣ್ ಪೊನ್ನಪ್ಪ, ಎಕ್ಸೆಲ್ ಅಕಾಡೆಮಿಗೆ ಸೇರಿ 99.91 ಪರ್ಸಂಟೇಜ್ ಪಡೆದು ರಾಷ್ಟ್ರದಲ್ಲೇ ಎರಡನೆಯ ಸ್ಥಾನದಲ್ಲಿರುವ ಜಿಪ್ಮಾರ್‌ಗೆ ಎಂಬಿಬಿಎಸ್‌ಗೆ ಆಯ್ಕೆ ಆಗಿರುವುದು ಎಕ್ಸೆಲ್‌ನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಮರು ನೀಟ್ ಅದೆಷ್ಟೇ ಕಠಿಣವಾಗಿದ್ದರೂ ರಾಷ್ಟ್ರಮಟ್ಟದಲ್ಲೇ ಗುರುತಿಸಿಕೊಳ್ಳುವಂಥ ಫಲಿತಾಂಶ ಖಚಿತವಾಗಿಯೂ ದಾಖಲಿಸುವ ಶೈಕ್ಷಣಿಕ ಸಾಮರ್ಥ್ಯ ಎಕ್ಸೆಲ್ ಸಂಸ್ಥೆಗಿದೆ .

ಶೈಕ್ಷಣಿಕ ವರ್ಷದಲ್ಲಿ ನೀಟ್‌ನಲ್ಲಿ 450 ಸ್ಕೋರ್ ಮಾಡಿದ ಹಾಗೂ ಬೋರ್ಡ್ ಎಕ್ಸಾಂನಲ್ಲಿ ಶೇ.97ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಕೋಚಿಂಗ್ ನೀಡಲು ಅಕಾಡೆಮಿ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ನಿರ್ಧರಿಸಿದ್ದಾರೆ. 400ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ, ಪಿಯುಸಿಯಲ್ಲಿ ಶೇ.95ಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ ಶೇ.20ರಷ್ಟು ಶುಲ್ಕ ರಿಯಾಯಿತಿ, ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದವರಿಗೆ ಶೇ.10ರಷ್ಟು ಶುಲ್ಕ ರಿಯಾಯಿತಿ ನೀಡಲಾಗುತ್ತದೆ. ಸೀಮಿತ ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು, ವೈದ್ಯರಾಗುವ ಅವರ ಕನಸನ್ನು ನನಸಾಗಿಸಲು ಪಣ ತೊಟ್ಟಿದೆ ಎಕ್ಸೆಲ್ ನೀಟ್ ಅಕಾಡೆಮಿ ಗುರುವಾಯನಕೆರೆ.

ಹೆಚ್ಚಿನ ಮಾಹಿತಿಗೆ 8867242769 / 9880899769 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

 

PREV
Get the latest news from Dakshina Kannada (ದಕ್ಷಿಣ ಕನ್ನಡ ಸುದ್ದಿ) — covering coastal city Mangaluru, local governance, beaches & tourism, culture & traditions (Yakshagana, Kambala), education, industry and agriculture, environment, civic issues, and community events from the district on Kannada Prabha News.
Read more Articles on

Recommended Stories

ವೈದ್ಯಕೀಯ ತಪಾಸಣೆ, ಆಧಾರ್‌ ನೋಂದಣಿ, ತಿದ್ದುಪಡಿ ಶಿಬಿರ
ಯೋಗದಿಂದ ವ್ಯಕ್ತಿತ್ವ ವಿಕಸನ ಸಾಧ್ಯ: ಈರಯ್ಯ ದೂಂತೂರು