- ಮಲೇಬೆನ್ನೂರು ರೈತರಲ್ಲಿ ಆತಂಕ । ದಿಗ್ಗೇನಹಳ್ಳಿ ಸಮೀಪದಲ್ಲಿ ಒಡೆದಿರುವ ನಾಲೆ ತೊಟ್ಟಿಲು
- - - ಕನ್ನಡಪ್ರಭ ವಾರ್ತೆದಾವಣಗೆರೆ
ಭದ್ರಾ ಡ್ಯಾಂನ ಆನವೇರಿ ವಿಭಾಗದ ನಾಲಾ ತೊಟ್ಟಿಲು ದಿಗ್ಗೇನಹಳ್ಳಿ ಬಳಿ ಮೊನ್ನೆ ರಾತ್ರಿ ಒಡೆದಿದ್ದರಿಂದ ಅಪಾರ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ. ಇದರಿಂದ ಹರಿಹರ ತಾಲೂಕು ಮಲೇಬೆನ್ನೂರು ಭಾಗದ 25 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಿಲ್ಲದಂತಾಗಿದೆ.13ನೇ ಕಿಮೀ ಬಳಿ ದಿಗ್ಗೇನಹಳ್ಳಿ ಸಮೀಪ ನಾಲೆ ತೊಟ್ಟಿಲು ಒಡೆದು, 300 ಕ್ಯುಸೆಕ್ ನೀರು ವ್ಯರ್ಥವಾಗಿ ಹರಿಯುತ್ತಿದೆ. ಮಲೇಬೆನ್ನೂರು ಭಾಗದ ಸುಮಾರು 25 ಸಾವಿರ ಎಕರೆಗೂ ಅಧಿಕ ಅಚ್ಚುಕಟ್ಟು ಪ್ರದೇಶ ಈಗ ಬೆಳೆ ಕಳೆದುಕೊಳ್ಳುವ ಭೀತಿಗೆ ಸಿಲುಕಿದೆ.
ಬತ್ತ, ಅಡಕೆ, ಕಬ್ಬು ಸೇರಿದಂತೆ ಸ್ಟ್ಯಾಂಡಿಂಗ್ ಕ್ರಾಪ್ಗಳನ್ನು ಬೆಳೆದ ರೈತರಿಗೆ ನೀರಿಲ್ಲದೇ ತೊಂದರೆಯಾಗುವ ಅಪಾಯವಿದೆ. ಈ ಹಿನ್ನೆಲೆ ಸರ್ಕಾರವು ತುರ್ತಾಗಿ ಹಗಲು-ರಾತ್ರಿ ಎನ್ನದೇ ನಾಲೆ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು. ನಾಲೆಯಲ್ಲಿ 300 ಕ್ಯೂಸೆಕ್ ನೀರು ಹರಿಯುತ್ತಿದೆ. ಸರ್ಕಾರ ಮೀನ-ಮೇಷ ಎಣಿಸಿದರೆ, ಪ್ರತಿ ಎಕರೆಗೆ ಕನಿಷ್ಠ ₹40 ಸಾವಿರ ಖರ್ಚು ಮಾಡಿರುವ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಅಪಾಯವಿದೆ. ಸಮಾರೋಪಾದಿಯಲ್ಲಿ ಸರ್ಕಾರ ತೊಟ್ಟಿಲು ನಾಲೆಯಲ್ಲಿ 300 ಕ್ಯುಸೆಕ್ ಪೈಪ್ಲೈನ್ ಅಳವಡಿಸಿ, ತಾತ್ಕಾಲಿಕವಾಗಿ ನೀರು ಹರಿಸಲು ಕ್ರಮ ಕೈಗೊಳ್ಳಲಿ ಎಂದು ಶಾಬನೂರು ಲಿಂಗರಾಜ ಆಗ್ರಹಿಸಿದ್ದಾರೆ.
ಅಲ್ಲದೇ, ಭದ್ರಾ ಅಣೆಕಟ್ಟೆ ನಿರ್ಮಿಸಿ 7 ದಶಕಗಳೇ ಕಳೆದಿವೆ. ಡ್ಯಾಂನ ಎಮರ್ಜೆನ್ಸಿ ಗೇಟ್, ಸರ್ವೀಸ್ ಗೇಟ್, ಕ್ರಸ್ಟ್ ಗೇಟ್ ಹಾಗೂ ಬಲನಾಲೆ, ಎಡನಾಲೆ ಗೇಟುಗಳು ಮೇಲೆ- ಕೆಳಗೆ ಹೋಗದೇ ತುಕ್ಕುಗಟ್ಟಿದಂತಾಗಿದೆ. ಇವುಗಳ ದುರಸ್ತಿಪಡಿಸಿ, ಗೇಟುಗಳನ್ನು ಮೇಲೆತ್ತುವ ರೂಫ್ಗಳನ್ನು ಬದಲಾಯಿಸಬೇಕು. ಭದ್ರಾ ಡ್ಯಾಂನಲ್ಲಿ ನೀರು ಸೋರಿಕೆ ಇರುವುದರಿಂದ ಅದನ್ನು ಸರಿಪಡಿಸಲಿ. ಸರ್ಕಾರ ಭದ್ರಾ ಡ್ಯಾಂ, ಭದ್ರಾ ನಾಲೆಗಳ ಭದ್ರತೆ, ದುರಸ್ತಿ, ಸುರಕ್ಷತೆ ದೃಷ್ಟಿಯಿಂದ ಎಲ್ಲ ಅಗತ್ಯ ಕ್ರಮ ಕೈಗೊಂಡು, ರೈತರ ಹಿತಕಾಯುವ ಕೆಲಸ ಮೊದಲು ಮಾಡಬೇಕು. ಭದ್ರಾ ಅಚ್ಚುಕಟ್ಟಿನ ಶಿವಮೊಗ್ಗ, ದಾವಣಗೆರೆ ಜಿಲ್ಲೆ, ವಿಜಯ ನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಶಾಸಕರು, ಜನಪ್ರತಿನಿಧಿಗಳು, ಆಡಳಿತ- ವಿಪಕ್ಷದವರು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
- ಸಿಂಧನೂರು ಶಾಸಕ, ಮುಖಂಡರ ಒತ್ತಾಯಕ್ಕೆ ಭಾರತೀಯ ರೈತ ಒಕ್ಕೂಟ ಆಕ್ಷೇಪ ಕನ್ನಡಪ್ರಭ ವಾರ್ತೆ ದಾವಣಗೆರೆ
ತುಂಗಭದ್ರಾ ಡ್ಯಾಂನಲ್ಲಿ 31 ಟಿಎಂಸಿ ಹೂಳು ತುಂಬಿದೆ, ತುಂಗಭದ್ರಾ ಅಚ್ಚುಕಟ್ಟು ವ್ಯಾಪ್ತಿ ರೈತರ ಬೆಳೆಗೆ 3 ಟಿಎಂಸಿ ನೀರಿನ ಕೊರತೆ ಇದೆ ಎಂದು ಅಲ್ಲಿನ ಶಾಸಕರು, ಮುಖಂಡರು ಸರ್ಕಾರಕ್ಕೆ ಭದ್ರಾ ಡ್ಯಾಂನಿಂದ 6 ಟಿಎಂಸಿ ನೀರು ಬಿಡುವಂತೆ ಒತ್ತಾಯಿಸಿದ್ದು ಸರಿಯಲ್ಲ ಎಂದಿದೆ.
ತುಂಗಭದ್ರಾ ಅಚ್ಚುಕಟ್ಟು ಭಾಗಕ್ಕೆ ನೀರುಬೇಕೆಂದು ಕೇಳುತ್ತೀರಿ. ನಮ್ಮ ಭದ್ರಾ ಅಚ್ಚುಕಟ್ಟು ರೈತರಿಗೆ ನೀರು ಇಲ್ಲವೆಂದರೆ ನಾವು ಯಾರಿಗೆ ಕೇಳಬೇಕು, ಎಲ್ಲಿಂದ ನೀರು ಬಿಡಿಸಿಕೊಳ್ಳಬೇಕು? ಬೇಸಿಗೆ ಹಂಗಾಮಿಗೆ ಇನ್ನೂ 53 ದಿನ ಸತತ ನೀರು ಬಿಡಬೇಕು. ಕುಡಿಯುವ ನೀರು, ಕಾರ್ಖಾನೆಗಳಿಗೆ ನೀರು ಕೊಟ್ಟು, ಮಳೆಗಾಲದ ತೋಟ, ಕಬ್ಬು, ನರ್ಸರಿ ಮಾಡಲಿಕ್ಕೆ ಮಾತ್ರ 10 ಟಿಎಂಸಿ ಮಾತ್ರ ಉಳಿಯುತ್ತದೆ. ಇದರಲ್ಲೂ 6 ಟಿಎಂಸಿ ತುಂಗಭದ್ರಾಗೆ ಕೊಟ್ಟರೆ, ನಮ್ಮ ಗತಿ ಏನೆಂಬ ಕನಿಷ್ಠ ಆಲೋಚನೆ, ಪ್ರಶ್ನೆಯೂ ನಿಮ್ಮಲ್ಲಿ ಮೂಡಲಿಲ್ಲವೇ ಎಂದು ಒಕ್ಕೂಟ ಪ್ರಶ್ನಿಸಿದೆ.
- - - -17ಕೆಡಿವಿಜಿ1, 2, 3: ಭದ್ರಾ ಅಣೆಕಟ್ಟೆಯ ಆನವೇರಿ ವಿಭಾಗದ ಭದ್ರಾ ನಾಲೆಯು ದಿಗ್ಗೇನಹಳ್ಳಿ ಬಳಿ ತೊಟ್ಟಿಲು ಸೇವೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದು.
-17ಕೆಡಿವಿಜಿ4: ಶಾಬನೂರು ಎಚ್.ಆರ್.ಲಿಂಗರಾಜ