ದಾನಮ್ಮ ಉತ್ಸವ ದೇಸಿ ಸಂಸ್ಕೃತಿಗೆ ಹಿಡಿದ ಕನ್ನಡಿ: ಎಂ.ಎ.ಮೋರೆ

KannadaprabhaNewsNetwork |  
Published : May 09, 2026, 02:45 AM IST
ಪೊಟೋ ಮೇ.8ಎಂಡಿಎಲ್ 1ಎ, 1ಬಿ. ಮುಧೋಳ ದಾನಮ್ಮದೇವಿ ಮಹಿಳಾ ಪದವಿ ಕಾಲೇಜಿನಲ್ಲಿ ದಾನಮ್ಮ ಉತ್ಸವ ಆಚರಿಸಲಾಯಿತು. | Kannada Prabha

ಸಾರಾಂಶ

ಭಾರತ ದೇಶವು ಉತ್ತಮ ಕಲೆ, ಸಾಹಿತ್ಯ, ಸಂಸ್ಕೃತಿಯ ತವರೂರು. ಇಲ್ಲಿ ಉತ್ತಮ ನಡೆ-ನುಡಿಯ ಆಚರಣೆಗಳಿವೆ. ಇಂತಹ ಮುಖ್ಯ ಭೂಮಿಕೆಗೆ ಕಾರಣವಾದದ್ದು ದಾನಮ್ಮ ಉತ್ಸವವಾಗಿದೆ. ಇದು ಭಾರತೀಯ ದೇಶೀಯ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದೆ. ಇದಕ್ಕೆ ವಿದ್ಯಾರ್ಥಿನಿಯರ ಪಾಲ್ಗೊಳ್ಳುವಿಕೆ ಹಾಗೂ ಸೃಜನಶೀಲ ಆಲೋಚನೆ ಬಹಳ ಅವಶ್ಯಕ ಎಂದು ಸ್ಥಳೀಯ ಬಸವೇಶ್ವರ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಎಮ್.ಎ.ಮೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಭಾರತ ದೇಶವು ಉತ್ತಮ ಕಲೆ, ಸಾಹಿತ್ಯ, ಸಂಸ್ಕೃತಿಯ ತವರೂರು. ಇಲ್ಲಿ ಉತ್ತಮ ನಡೆ-ನುಡಿಯ ಆಚರಣೆಗಳಿವೆ. ಇಂತಹ ಮುಖ್ಯ ಭೂಮಿಕೆಗೆ ಕಾರಣವಾದದ್ದು ದಾನಮ್ಮ ಉತ್ಸವವಾಗಿದೆ. ಇದು ಭಾರತೀಯ ದೇಶೀಯ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದೆ. ಇದಕ್ಕೆ ವಿದ್ಯಾರ್ಥಿನಿಯರ ಪಾಲ್ಗೊಳ್ಳುವಿಕೆ ಹಾಗೂ ಸೃಜನಶೀಲ ಆಲೋಚನೆ ಬಹಳ ಅವಶ್ಯಕ ಎಂದು ಸ್ಥಳೀಯ ಬಸವೇಶ್ವರ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಎಮ್.ಎ.ಮೋರೆ ಹೇಳಿದರು.

ನಗರದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಕಲಾ ಹಾಗೂ ವಾಣಿಜ್ಯ ವಿಭಾಗಗಳ ವತಿಯಿಂದ ಗುರುವಾರ ಆಯೋಜಿಸಿದ್ದ ದಾನಮ್ಮ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಗಿದ್ದ ಮುಧೋಳ ಕೌಟಿಲ್ಯ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಆನಂದ ಮೇತ್ರಿ ಮಾತನಾಡಿ ವಿದ್ಯಾರ್ಥಿನಿಯರಲ್ಲಿ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಬಹಳ ಅವಶ್ಯಕವೆಂದು ಎಂದರು.

ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ವಿವಿಧ ಕಲಾ ಮೇಳಗಳೊಂದಿಗೆ ವಿಭಿನ್ನ ಸಂಸ್ಕೃತಿಯ ವೇಷಭೂಷಣಗಳನ್ನು ಧರಿಸಿ ಡೊಳ್ಳು ಕುಣಿತ, ಕುಂಭ, ಆರತಿಯೊಂದಿಗೆ ವಿಜೃಂಭಣೆ ಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂದಿತು. ನಂತರ ಉತ್ತರ ಕರ್ನಾಟಕದ ಇಳಕಲ್ ಸೀರೆಯಲ್ಲಿ ದಾನಮ್ಮ ಉತ್ಸವ ನಾಮಾಂಕಿತ ಒಳಗೊಂಡ ಬ್ಯಾನರ್ ಅನಾವರಣಗೊಳಿಸಿದ್ದು ಅತ್ಯಂತ ವಿಶೇಷವಾಗಿತ್ತು.

ಉತ್ಸವದ ನಿಮಿತ್ಯವಾಗಿ ಮಹಾವಿದ್ಯಾಲಯದ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಯರಿಗಾಗಿ ಬಕೇಟಿನ ಲೋಟದಲ್ಲಿ ಕ್ವಾಯಿನ್ ಹಾಕುವ ಸ್ಪರ್ಧೆ, ಮ್ಯೂಸಿಕ್ ಚೇರ್ ಮತ್ತು ಬಾಟಲ್ ಗೇಮ್, ಜಾನಪದ ನೃತ್ಯ ಮುಂತಾದ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾಲೇಜಿನ ಪ್ರಾಚಾರ್ಯ ಡಾ.ಎಮ್.ಎಮ್.ಹಿರೇಮಠ ಅಧ್ಯಕ್ಷತೆವಹಿಸಿ ಮಾತನಾಡಿ ದಾನಮ್ಮೋತ್ಸವ ಒಂದು ಸಾಂಸ್ಕೃತಿಕ ಉತ್ಸವ. ಈ ಉತ್ಸವ ನಮ್ಮ ಸಂಸ್ಕೃತಿಯ ದ್ಯೂತಕ. ಇಂತಹ ಕಾರ್ಯಕ್ರಮಗಳ ಆಯೋಜನೆಯ ಯಶಸ್ಸು ವಿದ್ಯಾರ್ಥಿಗಳ ಪಾಲ್ಗೊಳುವಿಕೆಯ ಮೇಲೆ ಅವಲಂಬಿತವಾಗಿದೆ ಎಂದರು. ಸಾಂಕೃತಿಕ ವಿಭಾಗದ ಕಾರ್ಯಧ್ಯಕ್ಷರು ಹಾಗೂ ಕಲಾ ವಿಭಾಗದ ಮುಖ್ಯಸ್ಥ ಪ್ರೊ ಎಸ್.ಕೆ. ಸಾರವಾಡ ಸ್ವಾಗತಿಸಿದರು, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ ಎ.ಎನ್.ಬಾಗೇವಾಡಿ ವಂದಿಸಿದರು, ಪ್ರೊ.ಮಲ್ಲಿಕಾರ್ಜುನ ಎಮ್. ನಿರೂಪಿಸಿದರು.

ಮಹಾವಿದ್ಯಾಲಯದ ಎಲ್ಲ ಬೋಧಕ-ಬೋಧಕೇರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರು ಧರ್ಮದ ಹಾದಿಯಲ್ಲಿ ನಡೆಯಲಿ: ಅಭಿನವ ಸಿದ್ಧಲಿಂಗ ಶ್ರೀ
ಹುನಗುಂದ ಪುರಸಭೆಗೆ ಲೋಕಾಯುಕ್ತ ತಂಡ ಭೇಟಿ