- 2025-26ನೇ ಸಾಲಿನ ಶಿವಮೊಗ್ಗ ವಲಯ ಮಟ್ಟದ ಕ್ರೀಡಾಕೂಟ: ಅಭಿನಂದನೆ
ಕನ್ನಡಪ್ರಭ ವಾರ್ತೆ ನ್ಯಾಮತಿ
ತಾಲೂಕಿನ ದಾನಿಹಳ್ಳಿ ಗ್ರಾಮದ ತರಳಬಾಳು ಜಗದ್ಗುರು ಶಾಲೆ ಆವರಣದಲ್ಲಿ 2025-26ನೇ ಸಾಲಿನ ಶಿವಮೊಗ್ಗ ವಲಯ ಮಟ್ಟದ ಕ್ರೀಡಾಕೂಟ ನಡೆದಿದ್ದು, ವಿವಿಧ ಶಾಲೆಗಳ ಫಲಿತಾಂಶ ಪ್ರಕಟಗೊಂಡಿದೆ.ವಿದ್ಯಾರ್ಥಿನಿಯರ ವಿಭಾಗದ 100 ಮೀ. ಓಟದಲ್ಲಿ ಎಸ್.ಪಿ.ಸಾಕ್ಷಿ ದಾನಿಹಳ್ಳಿ (ಪ್ರಥಮ), ಭೂಮಿಕ ಚನ್ನಗಿರಿ (ದ್ವಿತೀಯ), ಗೌರಮ್ಮ ಬೆನಕನಹಳ್ಳಿ (ತೃತೀಯ), 600 ಮೀ ಓಟದಲ್ಲಿ ಮಾನ್ವಿತ ನಲ್ಲೂರು (ಪ್ರಥಮ), ಫಾಲತ್ ಬಸವಪಟ್ಟಣ (ದ್ವಿತೀಯ), ಮಾನಸ ಸೂಗೂರು (ತೃತೀಯ).
ವಿದ್ಯಾರ್ಥಿಗಳ ವಿಭಾಗದ 100 ಮೀ ಓಟದಲ್ಲಿ ನಶಾಲ್ ನಲ್ಲೂರು (ಪ್ರಥಮ), ಮನೋಜ್ ದಾನಿಹಳ್ಳಿ (ದ್ವಿತೀಯ), ನಂದೀಶ ಬೆನಕನಹಳ್ಳಿ (ತೃತೀಯ), 600 ಮೀ. ಓಟದಲ್ಲಿ ಜಿ.ಎಂ. ಯತೀಶ ನಲ್ಲೂರು (ಪ್ರಥಮ), ಕಿಶೋರ್ ದಾನಿಹಳ್ಳಿ (ದ್ವಿತೀಯ), ತರಣ್ಗೌಡ ಬೆನಕನಹಳ್ಳಿ (ತೃತೀಯ).
4*100 ರಿಲೇ- ದಾನಿಹಳ್ಳಿ (ಪ್ರಥಮ), ಬೆನಕನಹಳ್ಳಿ (ದ್ವಿತೀಯ), ಚನ್ನಗಿರಿ (ತೃತೀಯ), ಖೋ ಖೋ- ನಲ್ಲೂರು (ಪ್ರಥಮ), ದಾನಿಹಳ್ಳಿ (ದ್ವಿತೀಯ), ವಾಲಿಬಾಲ್- ನಲ್ಲೂರು (ಪ್ರಥಮ), ಸೂಗೂರು (ದ್ವಿತೀಯ), ಶಟಲ್- ಬೆನಕನಹಳ್ಳಿ (ಪ್ರಥಮ), ಸೂಗೂರು (ದ್ವಿತೀಯ), ಸಾಂಪ್ರದಾಯಿಕ ಯೋಗ- ಚಿರಾಗ್ ದಾನಿಹಳ್ಳಿ, ಸಂಗೀತ ಯೋಗ- ಕಿರಣ್, ಧನುಶ್ ಬಸವಪಟ್ಟಣ (ಪ್ರಥಮ), ಚೆಸ್- ನವೀನ್ಕುಮಾರ್ ನಲ್ಲೂರು (ಪ್ರಥಮ), ಚಿರಾಗ್ ದಾನಿಹಳ್ಳಿ (ದ್ವಿತೀಯ), ಕುಶ್ವಂತ್ ಸೂಗೂರು (ತೃತೀಯ) ಸ್ಥಾನಗಳನ್ನು ಪಡೆದಿದ್ದಾರೆ. ವಿಜೇತ ಕ್ರೀಡಾಪಟುಗಳ ತರಳಬಾಳು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.- - -
(ಸಾಂದರ್ಭಿಕ ಚಿತ್ರ)