)
- ಬೀದರ್ನಲ್ಲಿ ಜರುಗಿದ ಮಹಾಮಂಡಲ ಸಭೆಯಲ್ಲಿ ಸರ್ವಾನುಮತಕನ್ನಡಪ್ರಭ ವಾರ್ತೆ ಬೀದರ್
ಗಣೇಶ ಮಹಾ ಮಂಡಳಿಯ ಗೌರವಾಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಅಧ್ಯಕ್ಷರಾಗಿ ಚಂದ್ರಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿಯಾಗಿ ಬಾಬು ವಾಲಿಯವರನ್ನು ಆಯ್ಕೆ ಮಾಡಲಾಯಿತು.
ಗಣೇಶ ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾದ ಬಾಬು ವಾಲಿ ಮಾತನಾಡಿ ಈ ವರ್ಷದ ವೇದಿಕೆಗೆ ಪ್ರತಿ ವರ್ಷ ತಮ್ಮದೇ ಆದ ಕೊಡುಗೆ ನೀಡುತ್ತಿದ್ದ ಪ್ರಕಾಶ ನಂದಗೌಳಿ, ನಾಗಶೆಟ್ಟಿ ಧರಂಪೂರೆ ಅವರ ಹೆಸರು ಇಡಬೇಕೆಂಬ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲಾ ಪದಾಧಿಕಾರಿಗಳು ಮತ್ತು ಸಾರ್ವಜನಿಕ ಗಣೇಶ ಮಂಡಳಿಯ ಅಧ್ಯಕ್ಷರು ಸದಸ್ಯರು ಸಮ್ಮತಿ ನೀಡಿದರು.ಐದು ದಿನಗಳ ಗಣೇಶ ಪ್ರತಿಷ್ಠಾಪನೆ ನಡುವೆ ಸೆ.17ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯಿದ್ದು, ಅಂದು ಎಲ್ಲಾ ಸಾರ್ವಜನಿಕ ಗಣೇಶ ಮಂಡಳಿಗಳು ಧ್ವಜಾರೋಹಣ ನಡೆಸಬೇಕು, ಮತ್ತು ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ್ಯಗೊಳಿಸಲು ಹೋರಾಡಿದ ಅಂದಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಸಾರ್ವಜನಿಕರಲ್ಲಿ ಒಗ್ಗಟ್ಟು ಮೂಡಿಸಲು ದೇಶಾದ್ಯಂತ ಗಣೇಶ ಚತುರ್ಥಿ ಆಚರಣೆ ಹುಟ್ಟುಹಾಕಿದ ಬಾಲ ಗಂಗಾಧರ್ ತಿಲಕ್ ಅವರ ಭಾವಚಿತ್ರವನ್ನು ತಪ್ಪದೇ ಅಳವಡಿಸಬೇಕು ಎಂದರು.
ಸಭೆಯ ಅಧ್ಯಕ್ಷತೆ ನಂದಕೀಶೋರ ವರ್ಮಾ ವಹಿಸಿದರು. ಗಣೇಶ ಮಹಾ ಮಂಡಳಿಯ ಉಪಾಧ್ಯಕ್ಷರಾಗಿ ಈಶ್ವರ ಸಿಂಗ್ ಠಾಕೂರ್, ರೇವಣಸಿದ್ದಪ್ಪಾ ಜಲಾದೆ, ದೀಪಕ್ ವಾಲಿ ಮತ್ತಿತರರು, ಕಾರ್ಯದರ್ಶಿಯಾಗಿ ಸುಭಾಷ ಮಡಿವಾಳ, ಖಜಾಂಚಿಯಾಗಿ ರಜನೀಶ ವಾಲಿ ಆಯ್ಕೆಯಾದರು.
ನಗರ ಅಲಂಕಾರ ಸಮಿತಿ ಅಧ್ಯಕ್ಷರಾಗಿ ಹಣಮಂತ ಬುಳ್ಳಾ,ಮೆರವಣಿಗೆ ಸಮಿತಿ ಗೌರವಾಧ್ಯರಾಗಿ ಸೂರ್ಯಕಾಂತ ಶೆಟಕಾರ, ಅಧ್ಯಕ್ಷರಾಗಿ ಸೋಮಶೇಖರ ಪಾಟೀಲ ಗಾದಗಿ, ಪ್ರಧಾನ ಕಾರ್ಯದರ್ಶಿಯಾಗಿ ಶಶಿ ಹೊಸಳ್ಳಿ ಆಯ್ಕೆ ಮಾಡಲಾಯಿತು.
--
ಬೀದರಿನಲ್ಲಿ ಗಣೇಶ ಮಹಾ ಮಂಡಲ ಸಭೆ ಬುಧವಾರ ಜರುಗಿತು.