ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪ್ರಸಕ್ತ ಸಾಲಿನಲ್ಲಿ ೬.೫ ಲಕ್ಷ ನಿವ್ವಳ ಲಾಭದಲ್ಲಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ, ಅಪೆಕ್ಸ್ ಬ್ಯಾಂಕ್ ಹಾಗೂ ದಿ.ಎಚ್.ಎಸ್. ಮಹದೇವಪ್ರಸಾದ್ ಸಹಕಾರ ಸಚಿವರಾಗಿದ್ದಾಗ ನೀಡಿದ ಅನುದಾನದಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣವಾಗಿದೆ ಅಲ್ಲದೆ ಸಂಘದ ಅನುದಾನ ಬಳಕೆ ಮಾಡಿಲ್ಲದಿರುವುದು ಕೂಡ ಸಂಘ ಲಾಭದಲ್ಲಿ ಇರಲು ಕಾರಣ ಎಂದರು. ರೈತರಿಗೆ ಹೊಸ ಸಾಲ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ಗಳಿಗಿಂತಲೂ ನಮ್ಮ ಸಂಘದಲ್ಲಿ ಠೇವಣಿ ಇಟ್ಟರೆ ಹೆಚ್ಚಿನ ಬಡ್ಡಿ ನೀಡುವ ಕಾರಣದಿಂದ ಸಂಘದ ವ್ಯಾಪ್ತಿಯ ರೈತರು ಸಂಘದಲ್ಲಿ ಠೇವಣಿ ಇಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಪಿ. ರಾಜಪ್ಪ, ನಿರ್ದೇಶಕರಾದ ಮಹದೇವಪ್ಪ, ಮಹದೇವ, ರುದ್ರಸ್ವಾಮಿ, ಮರಿಶೆಟ್ಟಿ, ಎಸ್.ಬಿ.ಸ್ವಾಮಿ, ತಾಯಮ್ಮ, ಅಕ್ಕಮಹದೇವಮ್ಮ, ವೀರಭದ್ರಶೆಟ್ಟಿ, ಸಿದ್ದನಾಯಕ ಹಾಗೂ ಮುಖಂಡರಾದ ಮಂಚಹಳ್ಳಿ ಲೋಕೇಶ್, ಬಾಬು, ಆಲತ್ತೂರು ರಾಮಕೃಷ್ಣೇಗೌಡ, ಟಿ.ಶಾಂತೇಶ್, ಕೆ.ರಾಜೇಶ್, ಸಿದ್ದಯ್ಯನಪುರ ಸೋಮಶೇಖರ್, ಮಂಚಳ್ಳಿ ಹರೀಶ್ ಸೇರಿ ನೂರಾರು ಮಂದಿ ಸಂಘದ ಸದಸ್ಯರು ಇದ್ದರು.