ಕನ್ನಡಪ್ರಭ ವಾರ್ತೆ ಲೋಕಾಪುರ
ಬಾಗಲಕೋಟೆ ಜಿಲ್ಲೆಯಾದ್ಯಂತ ಭೀಕರ ಬರಗಾಲವಿದ್ದು ರೈತರು ತುಂಬಾ ಕಷ್ಟದಲ್ಲಿದ್ದಾರೆ ಆದಕಾರಣ, ಬಾಗಲಕೋಟೆ ಜಿಲ್ಲೆಯನ್ನು ಸಂಪೂರ್ಣ ಬರಗಾಲ ಪೀಡಿತ ಪ್ರದೇಶ ಎಂಬು ಘೋಷಣೆ ಮಾಡಬೇಕು ಎಂದರು. ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಹಾಗೂ ರೈತ ಮುಖಂಡ ಲೋಕಣ್ಣ ಉಳ್ಳಾಗಡ್ಡಿ ಮಾತನಾಡಿ, ರೈತರು ಮಾಡಿದ ಸಾಲ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕುಗಳಲ್ಲಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಜತೆಗೆ ಪ್ರತಿ ಹೆಕ್ಟೇರ್ಗೆ ₹೫೦,೦೦೦ ಪರಿಹಾರ ನೀಡಬೇಕು. ಜಿಲ್ಲೆಯ ಕಡುಬಡತನದ ಕುಟುಂಬಗಳಿಗೆ ಆಸರೆಯಾದ ಭಾಗ್ಯಜ್ಯೋತಿ ಮತ್ತು ಕುಟಿರ ಜ್ಯೋತಿಗಳಿಗೆ ಮೀಟರ್ ಅಳವಡಿಸುತ್ತಿದ್ದು ಅವುಗಳನ್ನು ಸಂಪೂರ್ಣ ತೆಗೆದುಹಾಕಬೇಕೆಂದು ಆಗ್ರಹಿಸಿದರು.
ಕೂಡಲೇ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು. ಒಂದು ವೇಳೆ ಈಡೇರಿಸದೆ ಹೋದರೆ ರೈತರು ಸರ್ಕಾರದ ವಿರುದ್ಧ ಬೃಹತ್ ಪಾದಯಾತ್ರೆಯ ಮೂಲಕ ಪ್ರತಿಭಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಎಲ್ಲ ಪದಾಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ ಎಂದರು.ಈ ವೇಳೆ ರೈತ ಮುಖಂಡರಾದ ಬಾಳಪ್ಪ ಜೋಗಿ, ಹುಸೇನಸಾಬ ಮುಲ್ಲಾ, ನೂರಸಾಬ ತಾಂಬೋಳಿ, ಬಸಯ್ಯಾ ಮಠಪತಿ, ಮಂಜುನಾಥ ಗದಿಗೆನ್ನವರ, ಹಣಮಂತ ದುರ್ಗನ್ನವರ, ಯಮನಪ್ಪ ಕಾಳಮ್ಮನವರ, ಗೋಡಚಯ್ಯ ಗಣಾಚಾರಿ, ಮಾಳಪ್ಪ ಕಿಲಾರಿ, ಕಾಂತು ಗೌಡರ ರೈತ ಬಾಂಧವರು ಇದ್ದರು.