ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್, ವಾರ್ತಾ ಇಲಾಖೆ ಸಹಯೋಗದಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪತ್ರಕರ್ತರಲ್ಲಿ ಕೇಳಿಸಿಕೊಳ್ಳುವ, ಆಲೋಚನೆ ಮಾಡುವ, ಚಿಂತನೆ ಮಾಡುವ ಗುಣ ಕಡಿಮೆ ಆಗಿದೆ. ಪತ್ರಿಕೋದ್ಯಮಕ್ಕೆ ಬರುವವರು ಮಧ್ಯಮ ವರ್ಗ, ಬಡವರ ಕುಟುಂಬದಿಂದ ಬಂದವರೇ ಹೆಚ್ಚಿದ್ದಾರೆ. ಆದರೂ ಬಡವರ ಪರವಾದ ಕಾಳಜಿ ಮಾತ್ರ ಕಾಣುತ್ತಿಲ್ಲ. ಜನರಿಗೆ ಏನು ಕೊಡಬೇಕೋ ಅದನ್ನು ನಾವು ಕೊಡುತ್ತಿಲ್ಲ. ಹಾಗಾಗಿ ಪತ್ರಿಕೆಗಳ ಬಗ್ಗೆ ಜನರಲ್ಲಿ ವಿಶ್ವಾಸ ಉಳಿಯುತ್ತಿಲ್ಲ. ಭವಿಷ್ಯದಲ್ಲಿ ಪತ್ರಿಕೋದ್ಯಮಕ್ಕೆ ಬರುವ ವಿದ್ಯಾರ್ಥಿಗಳು ಒಮ್ಮೆ ಈ ಬಗ್ಗೆ ಚಿಂತನೆ ಮಾಡಬೇಕಿದೆ ಎಂದು ಸಲಹೆ ನೀಡಿದರು.ಜನರಿಗೆ ಏನು ಬೇಕೋ ಅಂತಹ ಸುದ್ದಿಗಳನ್ನು ನೀಡಬೇಕು. ಜನಪರವಾಗಿ ಹಾಗೂ ಕ್ರಿಯಾತ್ಮಕವಾಗಿ ಪತ್ರಿಕೋದ್ಯಮ ಕೆಲಸ ಮಾಡಬೇಕು. ಇತ್ತೀಚಿನ ದಿನಮಾನದಲ್ಲಿ ಬರವಣಿಗೆ ನಶಿಸುತ್ತಿದೆ. ಕ್ರಿಯಾತ್ಮಕತೆ ದಿನೇ ದಿನೇ ಕ್ಷೀಣಿಸುತ್ತಿದೆ. ಸುದ್ದಿಗಳಲ್ಲಿ ಸಮಾಜ ಪರತೆ ಕಡಿಮೆ ಆಗಿದೆ. ವೈಭವೀಕರಣ ಮತ್ತು ಪೀತ ಪತ್ರಿಕೋದ್ಯಮ ಹೆಚ್ಚುತ್ತಿದೆ. ಈ ಕುರಿತು ಪತ್ರಕರ್ತರು ಹಾಗೂ ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು. ನಾವು ಯಾವ ರೀತಿಯ ಸುದ್ದಿಗಳನ್ನು ನೀಡಬೇಕೆಂದು ಆಲೋಚಿಸಿ, ಜನ ಮತ್ತು ಸಮಾಜಪರವಾಗಿ ಕೆಲಸ ಮಾಡುವ ತುರ್ತು ಇದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಪತ್ರಕರ್ತರು ಹಾಗೂ ಅವರ ಒಟ್ಟು ಕುಟುಂಬ ಸಂಕಷ್ಟದಲ್ಲಿದೆ. ಪತ್ರಕರ್ತರ ಆರೋಗ್ಯಕ್ಕೆ ವಿಶೇಷ ಒತ್ತು ನೀಡುವಂತಹ ಕೆಲಸ ಆಗಬೇಕು. ಆಂಧ್ರ ಪ್ರದೇಶ ಮಾದರಿ ರೀತಿ ರಾಜ್ಯದಲ ಪತ್ರಕರ್ತರಿಗೂ ಆರೋಗ್ಯದ ಸವಲತ್ತುಗಳು ಸಿಗುವಂತಾಗಬೇಕು. ಇದಕ್ಕಾಗಿ ಪತ್ರಕರ್ತರ ಕ್ಷೇಮ ನಿಧಿಯ ಸಮಿತಿ ರಚಿಸಿ 25 ಕೋಟಿ ರೂ ಮೀಸಲಿಡಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.95 ಕ್ಕಿಂತ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳನ್ನು ಅಭಿನಂದಿಸಲಾಯಿತು.
ಗ್ರಾಮೀಣ ಪತ್ರಕರ್ತರಿಗೆ ಶೀಘ್ರ ಉಚಿತ ಬಸ್ಪಾಸ್
ಲಗಾಮೇ ಇಲ್ಲದ ಡಿಜಿಟಲ್ ಮಾಧ್ಯಮ
ಇಂದು ಮುದ್ರಣ ಮಾದ್ಯಮ ದೊಡ್ಡ ಸವಾಲು ಎದುರಿಸುತ್ತಿದೆ. ಮುದ್ರಣ ಮಾಧ್ಯಮಕ್ಕೆ ದೊಡ್ಡ ಬಿಕ್ಕಟ್ಟಿದೆ. ಡಿಜಿಟಲ್ ಮಾಧ್ಯಮಕ್ಕೆ ಯಾವುದೇ ಲಂಗು-ಲಗಾಮು ಇಲ್ಲದೆ ದೊಡ್ಡ ಯುವ ಸಮೂಹ ಹೆಜ್ಜೆ ಇಡುತ್ತಿದೆ. ಒಂದು ಮೊಬೈಲ್ ಸಿಕ್ಕರೆ ಸಾಕು ದೊಡ್ಡ ಪತ್ರಕರ್ತ ಆಗಬಹುದು ಎಂಬ ಭ್ರಮೆಯಲ್ಲಿ ಯುವ ಸಮುದಾಯ ಇದೆ. ಈ ಭ್ರಮೆಯಿಂದ ಪರ್ತಕರ್ತರು ಹೊರಬರಬೇಕಿದೆ ಎಂದರು.
ಸವಾಲು ಕೇವಲ ಪತ್ರಕರ್ತರ ಮುಂದಿಲ್ಲ. ಓದುಗರ ಮುಂದೆಯೂ ಇದೆ. ಹೀಗಾಗಿ ಸುದ್ದಿಗಳ ವಿಚಾರಗಳಿಗೆ ಪತ್ರಕರ್ತರು ಆದ್ಯತೆ ನೀಡಬೇಕಿದೆ. ಸುಳ್ಳು ಸುದ್ದಿಗಳು ಹೆಚ್ಚಾಗುತ್ತಿವೆ ಎಂದು ಹಿರಿಯ ಪತ್ರಕರ್ತ ಋಷಿಕೇಷ ಬಹದ್ದೂರು ದೇಸಾಯಿ ಹೇಳಿದರು.
ಮಾಧ್ಯಮ ಕ್ಷೇತ್ರಕ್ಕೆ ಭವಿಷ್ಯದ ಸವಾಲುಗಳು ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಸುಳ್ಳು ಸುದ್ದಿಯಲ್ಲಿಂದು ನಿಪುಣತೆ ಹೆಚ್ಚಾಗುತ್ತಿದೆ. 9 ಸಾವಿರ ಪತ್ರಕರ್ತರು ದೇಶದ್ರೋಹದ ಕೇಸಿನಲ್ಲಿ ಜೈಲಿನಲ್ಲಿದ್ದಾರೆ ಎಂದರು. ಆರ್ಟಿಫಿಷಿಯಲ್ ಇಂಟಲಿಜೆನ್ಸಿಯಲ್ಲಿ ಬುದ್ಧಿ ಇಲ್ಲ. ನಾವು ಒಂದು ಹುಡುಕಿದರೆ ಅದು ಇನ್ನೊಂದು ಕೊಡುತ್ತದೆ. ಹೀಗಾಗಿ ಅದನ್ನು ಬಳಸಬೇಕೇ ಬೇಡವೇ ಎಂಬುದನ್ನು ನಾವೇ ತೀರ್ಮಾನಿಸಿಕೊಳ್ಳಬೇಕಿದೆ. ಮನಸು ಬದಲಾಯಿಸದೆ ಭಾಷೆ ಬದಲಾಯಿಸಿದರೆ ಉಪಯೋಗವಿಲ್ಲ ಎಂದರು.