ಕನ್ನಡಪ್ರಭ ವಾರ್ತೆ ಬೆಳಗಾವಿ
ಅನ್ಯ ಕೋಮಿನ ರಿಯಲ್ ಎಸ್ಟೇಟ್ ಉದ್ಯಮಿಗೆ ದೇವಸ್ಥಾನದ ಆಸ್ತಿಯನ್ನು ಕಬಳಿಸಲು ಬೆಳಗಾವಿಯ ಮಾಜಿ ಜಿಲ್ಲಾಧಿಕಾರಿ ಸದ್ಯ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿದ್ದರುವ ಜಯರಾಮ ಅವರು ಅವಕಾಶ ಕಲ್ಪಿಸಿದ್ದು, ಸಿಎಂ ಪಕ್ಕದಲ್ಲೇ ಇರುವ ಆ ಅಧಿಕಾರಿಯ ವಿರುದ್ಧ ತನಿಖೆ ನಡೆಸಿ, ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಅಕ್ರಮವಾಗಿ ನಾಸೀರ ಭಾಗವಾನ ಮತ್ತು ಇತರರ ಹೆಸರಲ್ಲಿರುವ ಕಂದಾಯ ಇಲಾಖೆಯಲ್ಲಿನ ದಾಖಲಾತಿಗಳನ್ನು ರದ್ದುಪಡಿಸಿ ಟ್ರಸ್ಟ್ ಹೆಸರು ನಮೋದಿಸಬೇಕು. ಅಧಿಕಾರ ದುರ್ಬಳಕೆ ಮಾಡಿ ಬಿಲ್ಡರ್ಗಳಿಗೆ ವರ್ಗಾವಣೆ ಮಾಡಿದ ಅಂದಿನ ಜಿಲ್ಲಾಧಿಕಾರಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮುಜರಾಯಿ ಇಲಾಖೆಯ ಸೇರಿದ ಜಾಗವನ್ನು ಅನ್ಯಧರ್ಮಿಯರ ಹೆಸರಿಗೆ ಮಾಡದಂತೆ ನಿಯಮ ಇದ್ದರೂ ಪರಬಾರೆ ಮಾಡರುವುದನ್ನು ರದ್ದುಪಡಿಸಬೇಕು. 92 ಎಕರೆ 39 ಗುಂಟೆ ಜಮೀನು ರಸ್ತೆ ಹಾಗೂ ವಿಮಾನ ನಿಲ್ದಾನ ಪಕ್ಕದಲ್ಲಿರುವುದರಿಂದ ಭೂ ಕಬಳಿಕೆದಾರರು ವ್ಯವಸ್ಥಿತ ಸಂಚು ರೂಪಿಸುತ್ತಿದ್ದಾರೆ. ಆದ್ದರಿಂದ ಜಮೀನಿಗೆ ಸಂಪೂರ್ಣ ತಂತಿ ಬೇಲಿ ಹಾಕಿ ಫಲಕ ಅಳವಡಿಸುವುದರ ಜತೆಗೆ ಮೋದಗಾ ಗ್ರಾಮಸ್ಥರಿಗೆ ಮುಜರಾಯಿ ಸಚಿವರ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.ಮೋದಗಾ ಗ್ರಾಮಸ್ಥರು ಟ್ರಸ್ಟ್ನ ಜಮೀನು ಉಳಿವಿಹಾಗಿ ಕಳೆದ 60 ವರ್ಷಗಳ ದಾಖಲೆ ಕೂಡ ಗ್ರಾಮಸ್ಥರ ಬಳಿ ಇವೆ. ಮುಜರಾಯಿ ಇಲಾಖೆ ಕೂಡ ತನ್ನ ಸುಪರ್ದಿಗೆ ಸೇರಿದ ಆಸ್ತಿ ಇದಾಗಿದೆಂದು ಹೇಳಿದೆ. ಆದರೂ ಕೂಡ ರಿಯಲ್ ಎಸ್ಟೇಟ್ ಉದ್ಯಮಿಗೆ ಅನುಕೂಲ ಮಾಡಿಕೊಡಲು ಅಧಿಕಾರದ ದುರುಪಯೋಗ ಪಡಿಸಿಕೊಳ್ಳಲಾಗಿದೆ. ಅನೇಕ ಅಧೀನ ಅಧಿಕಾರಿಗಳನ್ನು ವರ್ಗಾವಣೆ ಕೂಡ ಮಾಡಲಾಗಿದೆ. ಇಂತಹ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳದಿದ್ದರೇ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಮುಂದೆ ನಡೆಯುವ ಘಟನೆಗಳಿಗೆ ಸರ್ಕಾರ ಮತ್ತು ಅಧಿಕಾರಿಗಳೆ ಜವಾಬ್ದಾರಿಯಾಗಲಿದೆ ಎಂದರು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಕ್ಯಾರಗುಡ ಅಜೀವಕರ ದ್ಯಾನ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ, ರವಿ ಕೋಕಿತಕರ, ಓಮಣ್ಣ ಅಷ್ಟೇಕರ, ಬಸವಣ್ಣ ಮುಗಳಿ, ಕಲ್ಲಪ್ಪ ಕಮ್ಮಾರ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ಧರು.