ಬೆಮೆಲ್‌ ಅಭಿವೃದ್ಧಿಗೆ 100 ಎಕರೆ ಜಮೀನಿಗೆ ಬೇಡಿಕೆ

KannadaprabhaNewsNetwork | Updated : May 30 2025, 12:43 AM IST
ಸಾರಿಗೆ ವಲಯಕ್ಕಾಗಿ ಬೆಮೆಲ್‌ ಹೆವಿ-ಡ್ಯೂಟಿ ಟ್ರಕ್‌ಗಳು ಮತ್ತು ಟ್ರೇಲರ್‌ಗಳು ಮತ್ತು ಹೈಡ್ರಾಲಿಕ್ ಸಮುಚ್ಚಯಗಳನ್ನು ತಯಾರಿಸುತ್ತಿದೆ. ಪ್ರತಿ ವರ್ಷ ಲಾಭದಾಯಕವಾಗಿ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಬೆಮಲ್ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಅಥವಾ ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡುವುದಿಲ್ಲ.

ಕನ್ನಡಪ್ರಭ ವಾರ್ತೆ ಕೆಜಿಎಫ್

ಇಲ್ಲಿಯ ಬೆಮೆಲ್‌ನ ಯಾವುದೇ ಘಟಕವನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡುವುದಿಲ್ಲ, ಬೆಮೆಲ್ ಕಾರ್ಖಾನೆಯ ಹೆಚ್ಚಿನ ಅಭಿವೃದ್ಧಿಗೆ ೧೦೦ ಎಕರೆ ಭೂಮಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಬೆಮೆಲ್ ಅಧಿಕಾರಿಗಳು ೨೦೨೪ ರ ಆಗಸ್ಟ್‌ನಲ್ಲೇ ಪತ್ರವನ್ನು ಬರೆದಿದ್ದಾರೆ ಎಂದು ಸಂಸದ ಮಲ್ಲೇಶ್ ಬಾಬು ತಿಳಿಸಿದರು.

ಲೋಕೋಪಯೋಗಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬೆಮೆಲ್ ಉಪಕರಣಗಳ ತಯಾರಿಕೆಗೆ ಸಂಬಂಧಿಸಿದಂತೆ ಗಣಿಗಾರಿಕೆ ಮತ್ತು ನಿರ್ಮಾಣ, ರಕ್ಷಣಾ ಇಲಾಖೆ ಮತ್ತು ಬಾಹ್ಯಾಕಾಶ, ರೈಲು ಮತ್ತು ಮೆಟ್ರೋ ರೈಲಿಗೆ ಸಂಬಂಧಿಸಿದಂತೆ ಉಪಕರಣಗಳನ್ನು ಉತ್ಪಾದಿಸುತ್ತಿದೆ ಎಂದರು.

ಕಾರ್ಖಾನೆ ಮುಚ್ಚುವುದಿಲ್ಲ

ಸಾರಿಗೆ ವಲಯಕ್ಕಾಗಿ ಬೆಮೆಲ್‌ ಹೆವಿ-ಡ್ಯೂಟಿ ಟ್ರಕ್‌ಗಳು ಮತ್ತು ಟ್ರೇಲರ್‌ಗಳು ಮತ್ತು ಹೈಡ್ರಾಲಿಕ್ ಸಮುಚ್ಚಯಗಳನ್ನು ತಯಾರಿಸುತ್ತಿದೆ. ಪ್ರತಿ ವರ್ಷ ಲಾಭದಾಯಕವಾಗಿ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಬೆಮಲ್ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಅಥವಾ ಬೇರೆ ರಾಜ್ಯಕ್ಕೆ ಸ್ಥಳಾಂತರ ಮಾಡುವುದಿಲ್ಲ ಎಂದು ಸಂಸದರು ಸ್ವಷ್ಟಪಡಿಸಿದರು.

ಬುಲೆಟ್ ಟ್ರೈನ್‌ನ ಕೋಚ್‌ಗಳು ಮತ್ತು ಬಿಡಿಬಾಗಗಳನ್ನು ಸಿದ್ಧಪಡಿಸಲು ಮಧ್ಯಪ್ರದೇಶದಲ್ಲಿ ಹೊಸ ಘಟಕವನ್ನು ಪ್ರಾರಂಬಿಸಲಾಗುತ್ತಿದೆ, ಕೆಜಿಎಫ್‌ನಲ್ಲಿ ಬುಲೆಟ್ ಟ್ರೈನ್‌ನ ಬಿಡಿಭಾಗಗಳ ತಯಾರಿಕೆಗೆ ೧೦೦ ಎಕರೆ ಭೂಮಿಯನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ಪತ್ರವನ್ನು ಬರೆಯಲಾಗಿದ್ದು, ಭೂಮಿ ನೀಡಿದರೆ ಕೆಜಿಎಫ್‌ನಲ್ಲಿ ಕೂಡ ಒಂದು ಘಟಕವನ್ನು ಪ್ರಾರಂಭಿಸಲಾಗುತ್ತದೆ ಎಂದರು.ನೌಕರರ ಬೇಡಿಕೆ ಈಡೇರಿಕೆ

ಬೆಮೆಲ್‌ನ ಗುತ್ತಿಗೆ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ಕಾಮಿಕರ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದರು, ಈ ಸಂಬAದ ರಕ್ಷಣಾ ಸಚಿವರರಾದ ರಾಜನಾಥ್ ಸಿಂಗ್ ಅವರನ್ನು ಬೇಟಿ ಮಾಡಿ ಕಾರ್ಮಿಕರ ಬಹುತೇಕ ಸಮಸ್ಯೆಗಳನ್ನು ಬಗೆಹರಿಸಿರುವುದಾಗಿ ತಿಳಿಸಿದರು.ಚಿನ್ನದ ಗಣಿಗಳ ಕಾರ್ಮಿಕ ಮುಖಂಡರು ನ್ಯಾಯಾಲಯಗಳಲ್ಲಿ ಹೊಡಿರುವ ವ್ಯಾಜ್ಯಗಳನ್ನು ಹಿಂಪಡೆದು ಬಂದರೆ, ಕಾರ್ಮಿಕರಿಗೆ ನೀಡಬೇಕಾಗಿರುವ ೫೨ ಕೋಟಿ ರು. ಗ್ರಾಚ್ಯುಟಿ ಹಣ ಹಾಗು ಮನೆಗಳ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಸ್ಥಳೀಯ ಶಾಸಕರು ಅಥವಾ ಸಂಸದರು ಯಾರೇ ಆಗಲಿ ನ್ಯಾಯಾಲಯದಲ್ಲಿ ಹೊಡಿರುವ ಪ್ರಕರಣಗಳನ್ನು ಹಿಂಪಡೆದಾಗ ಮಾತ್ರ ನಿವೃತ್ತ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಲಿದೆ ಎಂದರು.

ಒಬ್ಬರಿಗೆ ಒಂದು ಮನೆ:೨೦೦೧ ರಲ್ಲಿ ಚಿನ್ನದ ಗಣಿಗಳನ್ನು ಮುಚ್ಚಿದ ಸಂದರ್ಭದಲ್ಲಿ ಕಾರ್ಮಿಕರು ಸಹಿ ಮಾಡಿದ್ದು ಒಬ್ಬ ಕಾರ್ಮಿಕರಿಗೆ ಒಂದು ಮನೆ ನೀಡಲು ತೀರ್ಮಾನಿಸಲಾಗಿತ್ತು. ಈಗ ಒಬ್ಬ ಕಾರ್ಮಿಕ ಎರಡು -ಮೂರು ಮನೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತವರಿ ಮಾಡಿಕೊಂಡಿರುವ ಮನೆಗಳನ್ನು ಬಿಟ್ಟುಕೊಟ್ಟರೆ ಮಾತ್ರ ಮನೆಗಳ ಹಕ್ಕು ಪತ್ರವನ್ನು ನೀಡಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ, ಒಪ್ಪಂದಂತೆ ಕಾರ್ಮಿಕರೂ ಸಹ ಮನೆಗಳನ್ನು ಬಿಟ್ಟುಕೊಡಬೇಕೆಂದು ಮನವಿ ಮಾಡಿದರು.ಬೆಮೆಲ್ ಅಥವಾ ಚಿನ್ನದ ಗಣಿಗಳ ಕಾರ್ಮಿಕರ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಸಂಸದ ಮಲ್ಲೇಶ್ ಬಾಬು ಕಾರ್ಮಿಕರಲ್ಲಿ ಮನವಿ ಮಾಡಿದರು, ಕಾರ್ಮಿಕರು ನಿಮ್ಮ ಸಮಸ್ಯೆಗಳು ಏನೆಂಬುದು ತಮಗೆ ಗೊತ್ತಿಲ್ಲ, ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಸಂಸದ ಮಲ್ಲೇಶ್ ಬಾಬು ತಿಳಿಸಿದರು.