ಮುತ್ತತ್ತಿಯಲ್ಲಿ ಮುಳುಗಿ ಮೃತಪಟ್ಟ ಕುಟುಂಬಕ್ಕೆ 8 ಲಕ್ಷ ರು. ಪರಿಹಾರ

KannadaprabhaNewsNetwork |  
Published : May 30, 2025, 12:41 AM IST
4 | Kannada Prabha

ಸಾರಾಂಶ

ಗುರುವಾರ ತಮ್ಮ ಜನನಿ ಗೃಹ ಕಚೇರಿಯಲ್ಲಿ ಮೃತ ಕುಟುಂಬಗಳಿಗೆ ಹಣ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು. ಮುತ್ತತ್ತಿ ಬಳಿ ನದಿಯಲ್ಲಿ ನಿಧನರಾದ ಗೌತಮ್ (ಮಹದೇವ) ತಾಯಿ ರತ್ನಮ್ಮ, ಮೃತ ಗುರು ಪತ್ನಿ ಕೆ. ಪೂಜಾ, ಮೃತ ನಾಗೇಶ್, ಭರತ್ ಗೌಡ ಅವರು ಪರವಾಗಿ ಮಂಜುಳಾ ಅವರಿಗೆ ಆದೇಶ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಮುತ್ತತ್ತಿಯಲ್ಲಿ ಮುಳುಗಿ ಮೃತಪಟ್ಟ ನಾಲ್ವರ ಕುಟುಂಬಕ್ಕೆ ತಲಾ 2 ಲಕ್ಷದಂತೆ ಒಟ್ಟು 8 ಲಕ್ಷ ರೂ. ಪರಿಹಾರವು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾಗಿದ್ದು, ಹಣ ಮಂಜೂರಾತಿ ಆದೇಶ ಪತ್ರಗಳನ್ನು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಕುಟುಂಬದವರಿಗೆ ವಿತರಿಸಿದರು.

ಇತ್ತೀಚಿಗೆ ಮೈಸೂರಿನ ಕನಕಗಿರಿ ಮೂಲದ 4 ಜನ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಮುತ್ತತ್ತಿ ಬಳಿ ನದಿಯಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತರಾಗಿದ್ದರು. ಈ ವೇಳೆ ಎಂ.ಕೆ. ಸೋಮಶೇಖರ್ ಅವರು ಶವಾಗಾರಕ್ಕೆ ತೆರಳಿ ನಂತರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದರು.

ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೃತ ಕುಟುಂಬಗಳ ಆರ್ಥಿಕ ಸ್ಥಿತಿಗತಿಗಳನ್ನು ಮನವರಿಕೆ ಮಾಡಿ, ನಾಲ್ಕು ಜನರ ಕುಟುಂಬಕ್ಕೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಮಂಜೂರು ಮಾಡಿಸಲು ಮುತುವರ್ಜಿ ವಹಿಸಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷದಂತೆ ಒಟ್ಟು 8 ಲಕ್ಷ ರೂ. ಪರಿಹಾರ ದೊರಕುವಂತೆ ಮಾಡಿದರು.

ಗುರುವಾರ ತಮ್ಮ ಜನನಿ ಗೃಹ ಕಚೇರಿಯಲ್ಲಿ ಮೃತ ಕುಟುಂಬಗಳಿಗೆ ಹಣ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಿದರು. ಮುತ್ತತ್ತಿ ಬಳಿ ನದಿಯಲ್ಲಿ ನಿಧನರಾದ ಗೌತಮ್ (ಮಹದೇವ) ತಾಯಿ ರತ್ನಮ್ಮ, ಮೃತ ಗುರು ಪತ್ನಿ ಕೆ. ಪೂಜಾ, ಮೃತ ನಾಗೇಶ್, ಭರತ್ ಗೌಡ ಅವರು ಪರವಾಗಿ ಮಂಜುಳಾ ಅವರಿಗೆ ಆದೇಶ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಸೋಮಶೇಖರ್, ವಾರ್ಡ್ ಅಧ್ಯಕ್ಷ ಕೇಬಲ್ ಮಹದೇವು, ಆಶ್ರಯ ಸಮಿತಿ ಸದಸ್ಯರಾದ ಗುಣಶೇಖರ್, ಮಹ್ಮದ್ ಫಾರೂಖ್, ಕಾಂಗ್ರೆಸ್ ಮುಖಂಡರಾದ ಸಿದ್ದು, ಹರೀಶ್ ಗಂಧನಹಳ್ಳಿ, ಮಂಜುನಾಥ್, ಮಧುರಾಜ್, ನಾಗ ಮಹದೇವ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ವಕೀಲರಿಗೆ ಮಾಹಿತಿ ನೀಡದಿದ್ರೆ ಕ್ರಮ : ಹೈ!
ಉತ್ತರ ಕರ್ನಾಟಕಕ್ಕೆ ₹15,000 ಕೋಟಿ : ಅಜಯ್‌