ಕನ್ನಡಪ್ರಭ ವಾರ್ತೆ ಸಿಂದಗಿ
ಇದೇ ಸಂದರ್ಭದಲ್ಲಿ ಶಿವಾನಂದ ಕೊಂಡಗೂಳಿ ಮಾತನಾಡಿ, ಈಗಾಗಲೇ ಕೊಳವೆಬಾವಿ ತೆರೆದ ಬಾವಿಗಳಲ್ಲಿ ನೀರಿಲ್ಲದೇ ಸಮಸ್ಯೆಗಳು ಸೃಷ್ಠಿಯಾಗಿದೆ. ಅದರಲ್ಲಿ ಹೆಸ್ಕಾಂ ವತಿಯಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದನ್ನು ಸರಿಪಡಿಸುವಂತೆ ಮನವಿ ಮಾಡಿಕೊಂಡರು. ಒಂದು ವೇಳೆ ಈ ಸಮಸ್ಯೆ ಪರಿಹರಿಸದಿದ್ದಲ್ಲಿ ಮತ್ತೆ ಇಲಾಖೆಯ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಹೆಸ್ಕಾಂ ಅಧಿಕಾರಿ ಮನವಿ ಸ್ವೀಕರಿಸಿ ಮಾತನಾಡಿ, ಗುಬ್ಬೇವಾಡ ಗ್ರಾಪಂ ವ್ಯಾಪ್ತಿಯಲ್ಲಿ ಕಡಿಮೆ ಇರುವ ವೋಲ್ಟೆಜ್ ಅನ್ನು ಹೆಚ್ಚಿಗೆ ಮಾಡಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದರು.ಈ ವೇಳೆ ಸಿದ್ದು ಗಬಸಾವಳಗಿ, ಗೌರಿಶಂಕರ ಹುಬ್ಬಳ್ಳಿ, ಸಿದ್ದಲಿಂಗಪ್ಪ ಗಬಸಾವಳಗಿ, ಪಟೇಲ ಚಟ್ಟರಕಿ, ಗಂಗಾಧರ ಗಬಸಾವಳಗಿ, ಭೀಮಣ್ಣ ಜಾಯವಾಡಗಿ, ಮುತ್ತಣಗೌಡ ಪಾಟೀಲ, ಸಂತೋಷ ಗಬಸಾವಳಗಿ, ಶ್ರೀಶೈಲ ಕರಬಂಟನಾಳ, ಶಿವಾನಂದ ಲಾಳಸಂಗಿ, ಶರಣಪ್ಪ ನಾಯ್ಕೋಡಿ, ಹಣಮಂತ್ರಾಯ ಗಬಸಾವಳಗಿ, ಶರಣಬಸು ಜಾಯವಾಡಗಿ ಸೇರಿದಂತೆ ಅನೇಕರಿದ್ದರು.
--ಕೋಟ್
ತಕ್ಷಣದಲ್ಲಿ ಎರಡು ಗ್ರಾಮದ ರೈತರ ಸಮಸ್ಯೆಗೆ ಪರಿಹಾರ ನೀಡುತ್ತೇನೆ ಮತ್ತು ರೈತರಿಂದ ಹಣ ವಸೂಲಿ ಮಾಡುವವರನ್ನು ಕುಲಂಕುಶವಾಗಿ ಪರಿಶೀಲನೆ ಮಾಡಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇನೆ.-ಚಂದ್ರಕಾಂತ ನಾಯಕ ಹೆಸ್ಕಾಂ ಎಇಇ