ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ರಾಮರೂಢ ಮಠದ ಆವರಣದಲ್ಲಿ ಸೇರಿದ ನೂರಾರು ಮಂದಿ ನಂತರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಹೊರಟು ಅನಂತ್ರಾಂ ವೃತ್ತದಲ್ಲಿ ಕತ್ತಿ ವಿರುದ್ಧ ಘೋಷಣೆ ಕೂಗುವ ಜೊತೆಗೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಟಿಎಪಿಸಿಎಂಎಸ್ ನಿರ್ದೇಶಕ ಕೆ.ಜೆ.ದೇವರಾಜು ಮಾತನಾಡಿ, ಮಾಜಿ ಸಂಸದ ರಮೇಶ್ ಕತ್ತಿ ಜಾತಿ ಹೆಸರಿನಲ್ಲಿ ಬೆಸ್ತಾರ್ ಹಾಗೂ ನಾಯಕ ಸಮುದಾಯವನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದು ಖಂಡನೀಯ. ಕೂಡಲೇ ಪೊಲೀಸ್ ಇಲಾಖೆ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕೆಂದು ಆಗ್ರಹಿಸಿದರು.ರಮೇಶ್ ಕತ್ತಿ ಅವರು ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ಸೋಲಿನ ಹತಾಶೆಯಿಂದ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಕುಟುಂಬವನ್ನು ಅವಾಚ್ಯ ಶದ್ಧಗಳಿಂದ ನಿಂದಿಸಿರುವುದನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಪ್ರಭು, ಎಂ.ಎಸ್.ರವಿ, ಶಿವಕುಮಾರ್, ಗುರುಸಿದ್ದ, ಶಿವಕುಮಾರ್, ಮೊಗಣ್ಣ, ಆನಂದ್, ಅಂಕನಾಥ್, ಮಂಜುನಾಥ್, ಕಂಬರಾಜು, ಮಾರೇಹಳ್ಳಿ ಕಿಟ್ಟಿ, ರಾಮಸ್ವಾಮಿ, ವೆಂಕಟೇಶ್, ಗಂಗರಾಜು, ಮತ್ತಿತರರು ಪಾಲ್ಗೊಂಡಿದ್ದರು.
ಕಿಕ್ಕೇರಿ: ಕಳೆದ ವಾರದಿಂದ ಬಿಡದೆ ಸುರಿಯುತ್ತಿರುವ ಮಳೆಯಿಂದ ಮಣ್ಣಿನಗೋಡೆಯ ಮನೆಗಳು ಶೀತವಾಗಿ ಒಂದೊಂದಾಗಿ ಕುಸಿಯಲು ಆರಂಭಿಸಿದ್ದು, ತಹಸೀಲ್ದಾರ್ ಭೇಟಿ ಪರಿಶೀಲನೆ ನಡೆಸಿದರು.
ಕಾರಿಗನಹಳ್ಳಿಯ ಲೀಲಾವತಿ ಕಾಂತರಾಜು, ಪುಟ್ಟಮ್ಮ ಲೇಟ್ ರಾಜೇಗೌಡ, ಸುನಂದ ಸುರೇಶ್, ಹೆಗ್ಗಡಹಳ್ಳಿ ಶಿವಕುಮಾರ್ ಅವರ ಮನೆಗಳು ಮಳೆಗೆ ಸಂಪೂರ್ಣ ಹಾನಿಯಾಗಿವೆ.
ತಾಲೂಕು ರೈತ ಸಂಘ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಕೇವಲ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ನೀಡುವ ಭರವಸೆ ನೀಡಬಾರದು. ಸರ್ಕಾರದಿಂದ ನೀಡುವ ಪರಿಹಾರದಿಂದ ಬಡವರಿಗೆ, ನಿರಾಶ್ರಿತರಿಗೆ ಯಾವುದೇ ಲಾಭವಾಗದು. ಕಣ್ಣು ಒರೆಸುವ ನೆಪ ನೀಡಬಾರದು. ಹೆಚ್ಚು ಪರಿಹಾರವನ್ನು ತ್ವರಿತವಾಗಿ ನೀಡಬೇಕು ಎಂದು ಅಧಿಕಾರಿಗಳಲ್ಲಿ ಒತ್ತಾಯಿಸಿದರು.