ಬಂಕಾಪುರ ತಾಲೂಕು ರಚನೆಗೆ ಆಗ್ರಹಿಸಿ ಕಪ್ಪು ಬಟ್ಟೆ ಪ್ರದರ್ಶನ

KannadaprabhaNewsNetwork |  
Published : Oct 30, 2024, 12:30 AM IST
ಪೊಟೋ ಪೈಲ್ ನೇಮ್ ೨೭ಎಸ್‌ಜಿವಿ೨ ತಾಲೂಕಾ ಪುನರುತ್ಥಾನ ಹೋರಾಟ ಸಮಿತಿ ಆಶ್ರಯದಲ್ಲಿ, ಬಂಕಾಪುರ ತಾಲೂಕನ್ನಾಗಿ ಘೋಸಿಸುವಂತೆ ಕಪ್ಪು ಬಟ್ಟೆ ಪ್ರದರ್ಶಿಸಲಾಯಿತು.  | Kannada Prabha

ಸಾರಾಂಶ

ಹಿರೇಕೆರೂರು ಪಟ್ಟಣದ ಚಿಕ್ಕೇರೂರ ರಸ್ತೆಯಲ್ಲಿನ ತಾಪಂ ಇಲಾಖೆಯ ವಾಣಿಜ್ಯ ಮಳಿಗೆಗಳ ಪಕ್ಕದಲ್ಲಿ ಖಾಸಗಿ ವ್ಯಕ್ತಿಗಳು ನಿರ್ಮಿಸಲಾಗುತ್ತಿರುವ ಅನಧಿಕೃತ ಕಟ್ಟಡವನ್ನು ತೆರವುಗೊಳಿಸುವಂತೆ ಆಗ್ರಹಿಸಿ ತಾಲೂಕು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ವತಿಯಿಂದ ಪಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಶಿಗ್ಗಾಂವಿ: ತಾಲೂಕಿನ ಬಂಕಾಪುರಕ್ಕೆ ಈ ಹಿಂದೆ ಇದ್ದ ತಾಲೂಕು ಸ್ಥಾನಮಾನವನ್ನು ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ಬಂಕಾಪುರ ತಾಲೂಕು ಪುನರುತ್ಥಾನ ಹೋರಾಟ ಸಮಿತಿ ಸದಸ್ಯರು ಕಪ್ಪು ಬಟ್ಟೆ ಪ್ರದರ್ಶಿಸಿದರು. ತಾಲೂಕು ಪುನರುತ್ಥಾನ ಹೋರಾಟ ಸಮಿತಿ ಸಂಚಾಲಕ ಅಬ್ದುಲ್ ರಜಾಕ ತಹಶೀಲ್ದಾರ ಮಾತನಾಡಿ, ನಾವು ಜಾತ್ಯತೀತ ಪಕ್ಷಾತೀತವಾಗಿ ಹೋರಾಟವನ್ನು ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಇದುವರೆಗೂ ಯಾವುದೇ ಜನಪ್ರತಿನಿಧಿಗಳಾಗಲಿ ಈ ಕ್ಷೇತ್ರವನ್ನು ಆಳಿದ ಶಾಸಕ, ಸಚಿವ, ಮುಖ್ಯಮಂತ್ರಿ, ಸಂಸದರಾಗಲಿ ನಮ್ಮ ಬೇಡಿಕೆ ಬಗ್ಗೆ ಗಮನ ಹರಿಸದೇ ಇರುವುದರಿಂದ ಸಮಸ್ತ ಪಟ್ಟಣದ ಜನಾಭಿಪ್ರಾಯ ಸಂಗ್ರಹಿಸಿ ಬರುವ ಉಪಚುನಾವಣೆ ಮತದಾನವನ್ನು ಕಪ್ಪು ಬಟ್ಟೆ ಕಟ್ಟಿಕೊಂಡು ಬಹಿಷ್ಕರಿಸಲು ತಿರ್ಮಾನಿಸಲಾಗಿದೆ ಎಂದರು.

ಹಿರಿಯ ಸಾಹಿತಿ ಎ.ಕೆ. ಆದವಾನಿಮಠ ಮಾತನಾಡಿ, ಬಸವರಾಜ ಬೊಮ್ಮಾಯಿಯವರು ಬಂಕಾಪುರ ತಾಲೂಕನ್ನಾಗಿ ಮಾಡಲು ಶಿಫಾರಸು ಮಾಡಲಾದ ಪತ್ರವನ್ನು ಪ್ರದರ್ಶಿಸಿ ಮಾತನಾಡಿದ ಅವರು, ಕಡತ ಸಂಖ್ಯೆ ಆರ್.ಡಿ. ೫ ಎಲ್.ಆರ್.ಡಿ. ೨೦೨೦ ಇದರಲ್ಲಿ ಕೂಡಲೇ ಬಂಕಾಪುರ ತಾಲೂಕನ್ನಾಗಿ ಘೋಷಿಸಿ ಆದೇಶ ಹೊರಡಿಸುವಂತೆ ಕಂದಾಯ ಸಚಿವರಿಗೆ ಸೂಚಿಸಿದ್ದಾರೆ. ಕಂದಾಯ ಸಚಿವಾಲಯವನ್ನು ಸಂಪರ್ಕಿಸಿದಾಗ ಮುಖ್ಯಮಂತ್ರಿಗಳ ಆದೇಶ ಪತ್ರವನ್ನು ವಿಲೇಖಕ್ಕೆ ಹಾಕಲಾಗಿದೆ ಎಂಬ ಉತ್ತರ ಕೇಳಿ ಬಂದಿದ್ದರಿಂದ ಬೇಸತ್ತ ಬಂಕಾಪುರ ಜನತೆ ನವಂಬರ್ ೧ರಂದು ಪ್ರತಿ ಮನೆಯ ಮೇಲೆ ಕಪ್ಪು ಧ್ವಜ ಹಾರಿಸುವ ಮೂಲಕ ಬರುವ ಮತದಾನವನ್ನು ತಿರಸ್ಕರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ನಿಂಗನಗೌಡ್ರ ಪಾಟೀಲ, ಬಾಪುಗೌಡ್ರ ಪಾಟೀಲ, ಮಲ್ಲಿಕಾರ್ಜುನ ನರೇಗಲ್, ದೇವರಾಜ ಅರಳಿಕಟ್ಟಿ, ನಾಗರಾಜ ಮೇಳ್ಳಳ್ಳಿ, ಶರಣಬಸವ ಬಿ.ಕೆ., ರವಿ ಕುರಗೋಡಿ, ಕೃಷ್ಣಾ ಆಲದಕಟ್ಟಿ, ಮಂಜುನಾಥ ವಳಗೇರಿ, ನೀಲಪ್ಪ ಕುರಿ, ಮಹದೇವಪ್ಪ ಸುಂಕದ, ಗಂಗಾಧರ ಪೂಜಾರ, ಅಶೋಕ ನರೇಗಲ್, ಆನಂದ ವಳಗೇರಿ, ಸತೀಶ ವಳಗೇರಿ, ನನ್ನೆಸಾಬ ದೇವಗಿರಿ, ನಾಗಪ್ಪ ಬಳಿಗಾರ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ