ಕನ್ನಡಪ್ರಭ ವಾರ್ತೆ ಶಿಕಾರಿಪುರ
ಈ ವೇಳೆ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್.ಯುವರಾಜ ಮಾತನಾಡಿ, ಹುಲ್ಲಿನಕಟ್ಟೆ, ಬಾಳೆಕೊಪ್ಪ ಹಾಗೂ ಈಸೂರು ಗ್ರಾಮದ ಅನೇಕ ಕೆರೆಗಳಲ್ಲಿ ಅಕ್ರಮವಾಗಿ ಮಣ್ಣು ಕಲ್ಲುಗಳನ್ನು ನಿರಂತರವಾಗಿ ಅಕ್ರಮ ಸಾಗಾಣಿಕೆ ಮಾಡಿ ಗುತ್ತಿಗೆದಾರರಿಗೆ, ಖಾಸಗಿ ಲೇಔಟ್ಗಳ ಕಾಮಗಾರಿಗಳಿಗೆ ಮಾರಾಟ ಮಾಡುತ್ತಿದ್ದರೂ ಇದುವರೆಗೆ ಯಾವುದೇ ಅಧಿಕಾರಿಗಳು ಕೂಡ ಕಡಿವಾಣ ಹಾಕುವ ಕೆಲಸ ಮಾಡಿಲ್ಲ ಎಂದು ದೂರಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿಗಳು, ಅರಣ್ಯ ಇಲಾಖೆ, ಪೊಲೀಸ್ ಇಲಾಖೆಗಳ ಕೆಲ ಭ್ರಷ್ಟ ಅಧಿಕಾರಿಗಳ ಸಹಕಾರದಿಂದ ಮಣ್ಣುಕಲ್ಲು ಮತ್ತು ಮರಳು ಅಕ್ರಮ ಸಾಗಾಟವಾಗುತ್ತಿದ್ದು, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.ಸಾಗರ ಹಾಗೂ ಹೊಸನಗರ ತಾಲೂಕುಗಳಿಂದ ಅಕ್ರಮವಾಗಿ ಮರಳು ಸಾಗಾಟವಾಗುತ್ತಿದ್ದು, ಇಲ್ಲಿಯೂ ಯಾರು ಹೇಳುವರು ಇಲ್ಲ, ಕೇಳುವರು ಇಲ್ಲ ಅನ್ನುವಂತಾಗಿದೆ. ಇದುವರೆಗೆ ಅನಧಿಕೃತವಾಗಿ ಮಣ್ಣು ಕಲ್ಲು ಸಾಗಾಣಿಕೆ ಮಾಡಿ ಗುಡ್ಡದಲ್ಲಿ ಲಕ್ಷಾಂತರ ಮೆಟ್ರಿಕ್ ಟನ್ ಮಣ್ಣು ಕಾಣೆಯಾಗಿದೆ. ಇದಕ್ಕೆ ಕೆಲವು ಇಲಾಖೆಯ ಭ್ರಷ್ಟ ಅಧಿಕಾರಿಗಳೇ ನೇರವಾಗಿ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ವಿಜಯಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ರಾಜಕುಮಾರ್, ರಾಜ್ಯ ಕಾರ್ಯಧ್ಯಕ್ಷ ವಿ.ಜೆ.ಅಮೀರ್, ತಾಲೂಕು ಅಧ್ಯಕ್ಷ ಡಿ.ಡಿ.ಶಿವಕುಮಾರ್, ಮುಖಂಡರಾದ ಇಮಾಮ್ ಸಾಬ್, ಅಹಮದ್ ಅಲಿ, ತೀರ್ಥಪ್ಪ, ಮಲ್ಲೇಶಪ್ಪ, ಗದಿಗೆಪ್ಪ, ಸುರೇಶ್ ಮತ್ತಿತರರಿದ್ದರು.