ರಾಯಚೂರು: ನಗರಕ್ಕೆ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಮಾಡುವ ಆದೇಶವನ್ನು ನಗರಸಭೆ ಪೌರಾಯುಕ್ತರು ತಕ್ಷಣ ವಾಪಸ್ಸು ಪಡೆಯಬೇಕು, ಇಲ್ಲವಾದಲ್ಲಿ ನಗರಸಭೆ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ಎಚ್ಚರಿಸಿದರು.
ನಗರಸಭೆ ಸದಸ್ಯರು ಕೇವಲ ಇ-ಖಾತಾ, ಮುಟೇಷನ್ ಗಾಗಿ ಜನರಿಂದ ಆಯ್ಕೆಯಾಗಿಲ್ಲ. ನಗರದ ನೈರ್ಮಲ್ಯ, ಕುಡಿಯುವ ನೀರು ಸರಬರಾಜು ಬಗ್ಗೆ ಅವರು ಧ್ವನಿ ಎತ್ತಬೇಕು. ನಗರಸಭೆ ಹಿರಿಯ ಸದಸ್ಯ ಜಯಣ್ಣ ಅವರು ಈ ಬಗ್ಗೆ ಹೇಳಿಕೆ ನೀಡಿ ಪೌರಾಯುಕ್ತರ ನಡೆಯನ್ನು ಖಂಡಿಸಿದ್ದು ಸ್ವಾಗತಾರ್ಹ ಎಂದರು.
ನೀರಿನ ವಿಷಯದಲ್ಲಿ ಯಾರು ರಾಜಕೀಯ ಮಾಡಬಾರದು. ನಗರಸಭೆ ಕಸ ವಿಲೇವಾರಿಯಲ್ಲಿಯೂ ಎಡವಿದೆ ಅದನ್ನು ಸರಿಪಡಿಸಿಕೊಳ್ಳಬೇಕು. ನಗರಸಭೆ ಆಡಳಿತ ಹಳಿಗೆ ಬಾರದಿದ್ದರೆ ಹೋರಾಟ ಮಾಡುತ್ತೇನೆ ಎಂದು ಹೇಳಿದರು.ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಬಿ.ಗೋವಿಂದ, ನಾಗರಾಜ, ಶಶಿರಾಜ, ನರಸರೆಡ್ಡಿ, ಎ.ಚಂದ್ರಶೇಖರ, ಜಿ.ನರಸರೆಡ್ಡಿ ಇದ್ದರು.
-----------------04ಕೆಪಿಆರ್ಸಿಆರ್01:ಎ.ಪಾಪಾರೆಡ್ಡಿ