ಶಾಸಕ ಜೆ.ಟಿ.ಪಾಟೀಲಗೆ ಸಚಿವ ಸ್ಥಾನ ನೀಡುವಂತೆ ಆಗ್ರಹ

KannadaprabhaNewsNetwork |  
Published : Aug 03, 2026, 03:00 AM IST
02ಸದಬಕಸಬ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಿಳಗಿಮತಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಿರುವ ಜನಪ್ರಿಯ ಶಾಸಕ ಜೆ.ಟಿ.ಪಾಟೀಲ ಸಿಎಂ ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಡಿಎಸ್‌ಎಸ್‌ ಸಂಯೋಜಕ ರಾಜ್ಯ ಸಂಚಾಲಕ ಶ್ರೀಶೈಲ ಚಲವಾದಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಿಳಗಿ

ಮತಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಿರುವ ಜನಪ್ರಿಯ ಶಾಸಕ ಜೆ.ಟಿ.ಪಾಟೀಲ ಸಿಎಂ ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಡಿಎಸ್‌ಎಸ್‌ ಸಂಯೋಜಕ ರಾಜ್ಯ ಸಂಚಾಲಕ ಶ್ರೀಶೈಲ ಚಲವಾದಿ ಆಗ್ರಹಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಘಟಪ್ರಭಾ ಸೇತುವೆ ಹಾಗೂ ಪ್ರಸ್ತುತ ಸೋನ್ನ ಗ್ರಾಮದಿಂದ ಏತನೀರಾವರಿ ಯೋಜನೆ ಮಂಜೂರಾತಿ ಮಾಡುವಲ್ಲಿ ಶ್ರಮಿಸಿದ್ದಾರೆ. ಮತಕ್ಷೇತ್ರದಲ್ಲಿ ಸಾಕಷ್ಟು ಕಾಮಗಾರಿಗಳನ್ನು ಎಸ್ಸಿ, ಎಸ್ಟಿ ಸಮುದಾಯಕ್ಕೆ ಡಾ.ಬಿ.ಆರ್‌.ಅಂಬೇಡ್ಕರ್‌ ನಿಗಮ, ತಾಂಡಾ ನಿಗಮ, ಆದಿಜಾಂಬವ ನಿಗಮ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ, ಡಾ.ದೇವರಾಜು ಅರಸು ಹಿಂದುಳಿದ ಅಭಿವೃದ್ಧಿ ನಿಗಮದಿಂದ ಕೈಗೊಂಡಿದ್ದಾರೆ.

ಈ ಬಾರಿ ಸಂಪುಟದಲ್ಲಿ ಶಾಸಕ ಜೆ.ಟಿ.ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಡಿಎಸ್‌ಎಸ್‌ ರಾಜ್ಯ ಸಂಘಟನಾ ಸಂಚಾಲಕ ಹೆಜ್‌, ಮಹಾಂತೇಶ, ಎನ್.ಶಂಕರ್, ಬಿ.ಎಚ್.ಸುರೇಶ್, ಭುವನೇಶ, ಎಚ್.ಎನ್.ನೀಲನಾಯಕ, ಬಿ.ಎಲ್‌.ಭಜಂತ್ರಿ, ಯಂಕಣ್ಣ ನಡುವಿನಮನಿ, ಆನಂದ ದೊಡಮನಿ, ದ್ಯಾಮಣ್ಣ ದೊಡಮನಿ, ನಾಗೇಶ ಚಲವಾದಿ, ಜಿತೇಂದ್ರ ಚಲವಾದಿ, ಚಂದ್ರು ಚಲವಾದಿ, ರಾಮಣ್ಣ ಹಿರೇಮನಿ ಮುಂತಾದವರು ರಾಜ್ಯ ಹಾಗೂ ಹೈ ಕಮಾಂಡ್‌ ನಾಯಕರಿಗೆ ರಾಜ್ಯ ಸಮಿತಿಯಿಂದ ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವ ಕಳ್ಳಸಾಗಾಣಿಕೆಯ ಜಾಗೃತಿ ಮೂಡಿಸುವುದು ಮುಖ್ಯ: ಅರವಿಂದ ಹಾಗರಗಿ
ಸಂಗ್ರಹಿಸಿಟ್ಟಿದ್ದ ಅಕ್ರಮ ಪಡಿತರ ಅಕ್ಕಿ ವಶಕ್ಕೆ