ರಾಣಿಬೆನ್ನೂರು: ನಗರದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಬೇರೆ ಜಿಲ್ಲೆ ಮತ್ತು ತಾಲೂಕುಗಳ ಬರುವ ವಿವಾಹ ನೋಂದಣಿಯನ್ನು ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು ಎಂದು ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕದ ನೇತೃತ್ವದಲ್ಲಿ ಸಾರ್ವಜನಿಕರು ಉಪ ನೋಂದಣಾಧಿಕಾರಿ ವಿಶ್ವನಾಥ ಸುಭೇದಾರ ಅವರಿಗೆ ಮನವಿ ಸಲ್ಲಿಸಿದರು. ಪ್ರೀತಿ, ಪ್ರೇಮದ ಹೆಸರಲ್ಲಿ ಹೆಣ್ಣುಮಕ್ಕಳು ಮೋಸ ಹೋಗುತ್ತಿದ್ದಾರೆ. ಇದರಿಂದ 18 ವರ್ಷ ಹೊತ್ತು ಹೆತ್ತು ಬೆಳೆಸಿದ ಕುಟುಂಬಗಳಿಗೆ ಮೋಸ ಮಾಡಿ ಪ್ರೀತಿ ವ್ಯಾಮೋಹದ ಬಲೆ ಹಾಕಿ ಒಂದು ವರ್ಷ ಕೂಡ ಬಾಳುವೆ ಮಾಡದೆ ಎಷ್ಟೋ ಪ್ರಕರಣಗಳು ಬಿಡುಗಡೆಯಾಗುತ್ತಿವೆ. ಇದರಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ಇದನ್ನು ತಡೆಗಟ್ಟಬೇಕಾದರೆ ನಾವು ಒಳ್ಳೆಯದು ಕೆಟ್ಟದ್ದು ವಿಚಾರ ಮಾಡಬೇಕು. ಕಾನೂನು ಇದೆ ಎಂದು ದುರುಪಯೋಗ ಮಾಡಿಕೊಳ್ಳಬಾರದು.
ರಾಣಿಬೆನ್ನೂರು: ಕೃಷಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ನಗರದ ಬಳ್ಳಾರಿ ಕಲ್ಯಾಣ ಮಂಟಪದಲ್ಲಿ ಜು. 17ರಿಂದ 21ರ ವರೆಗೆ ಹಲಸು ಮತ್ತು ಮಾವು ಮೇಳ ಆಯೋಜಿಸಲಾಗಿದೆ ಎಂದು ಆಯೋಜಕ ನವೀನ ತಿಳಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐದು ದಿನಗಳ ಕಾಲ ನಡೆಯುವ ಮೇಳದಲ್ಲಿ ರೈತರು ತಾವು ಬೆಳೆದ ಉತ್ಪನ್ನಗಳನ್ನು ಹಾಗೂ ಮಾವು ಮತ್ತು ಹಲಸಿನ ಸಸಿಗಳ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಹಲಸಿನ ಹಣ್ಣಿನಿಂದ ತಯಾರಿಸಿದ ಜಿಲೇಬಿ ಗ್ರಾಹಕರ ಮನ ಸೆಳೆಯಲಿದೆ.ಇದಲ್ಲದೆ ಸಿರಿ ಧಾನ್ಯಗಳು, ರಾಗಿ ಉತ್ಪನ್ನಗಳು, ಆಯುರ್ವೇದ ಔಷಧಿಗಳು, ಚನ್ನಪಟ್ಟಣದ ಗೊಂಬೆಗಳು ಸೇರಿದಂತೆ ಹಲವಾರು ಉತ್ಪನ್ನಗಳು ಮೇಳದಲ್ಲಿ ದೊರೆಯಲಿವೆ ಎಂದರು. ವೆಂಕಟೇಶ ಕನಕೇರಿ, ಹರೀಶ ಸುದ್ದಿಗೋಷ್ಠಿಯಲ್ಲಿದ್ದರು.