ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮುಖಂಡ ಶಿವಾನಂದ ಉದಪುಡಿ ಮಾತನಾಡಿ, ಲೋಕಾಪುರ ಹೋಬಳಿಯ ಅನೇಕ ಗ್ರಾಮಗಳು ತಾಲೂಕು ಕೇಂದ್ರದಿಂದ ಸರಾಸರಿ 25 ಕಿಮೀ ದೂರದಲ್ಲಿವೆ. ದಿನನಿತ್ಯದ ಸರ್ಕಾರಿ ವ್ಯವಹಾರಗಳಿಗಾಗಿ ಗ್ರಾಮಸ್ಥರು 50 ಕಿಮೀ ಗಳಷ್ಟು ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇದರಿಂದ ಸಮಯ ಹಾಗೂ ಹಣದ ನಷ್ಟವಾಗುವುದರೊಂದಿಗೆ ಸಾರ್ವಜನಿಕರಿಗೆ ಆಡಳಿತಾತ್ಮಕ ತೊಂದರೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.
ಮುಖಂಡರಾದ ಎಂ.ಎಂ. ವಿರಕ್ತಮಠ, ಎಸ್.ಎನ್. ಹಿರೇಮಠ, ಶಿವಾನಂದ ಉದಪುಡಿ, ಲೋಕಣ್ಣ ಕತ್ತಿ, ವಿ.ಬಿ. ಮಾಳಿ, ಲೋಕಣ್ಣ ಕೊಪ್ಪದ, ಬಸನಗೌಡ ಪಾಟೀಲ, ಬಿ.ಎಲ್. ಬಬಲಾದಿ, ಸದಾಶಿವ ಹಗ್ಗದ, ಯಮನಪ್ಪ ಹೊರಟ್ಟಿ, ಪ್ರಮೋದ ತೆಗ್ಗಿ, ಬಸವರಾಜ ಉದಪುಡಿ, ಪ್ರಕಾಶ್ ಚಳುಕಿ, ಅರುಣ ನರಗುಂದ, ತುಳಜಾಪ್ಪ ಮುದ್ದಾಪುರ, ಮಾಜಿ ಸೈನಿಕ ಸಿ.ಎಂ. ಪಾಟೀಲ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಿ.ವಿ. ಹಲಕಿ, ಹೊಳ ಬಸು ದಂಡಿನ, ಚಂದ್ರಕಾಂತ ರಂಗಣ್ಣವರ, ಮಲ್ಲಪ್ಪ ಅಂಗಡಿ, ದೇವಣ್ಣ ದಾಸರಡ್ಡಿ, ನಾರಾಯಣ ಗೌಡ ಪಾಟೀಲ, ಹನುಮಂತಗೌಡ ಪಾಟೀಲ, ಲೋಕಣ್ಣ ಉಳ್ಳಾಗಡ್ಡಿ ಸೇರಿ ಅನೇಕರು ಉಪಸ್ಥಿತರಿದ್ದರು.ಕಾರಣಗಳಿಂದ ಮುಧೋಳ ತಾಲೂಕಿನ ಲೋಕಾಪುರ ಹೋಬಳಿಯ ಸಮಗ್ರ ಅಭಿವೃದ್ಧಿ ಕುಂಠಿತವಾಗಿದ್ದು, ಜನರು ವಿವಿಧ ಆಡಳಿತಾತ್ಮಕ ಹಾಗೂ ವ್ಯವಹಾರ ಸಂಬಂಧಿತ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಲೋಕಾಪುರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಿದರೆ ಆಡಳಿತ ವ್ಯವಸ್ಥೆ ಜನರಿಗೆ ಸಮೀಪವಾಗುವುದರೊಂದಿಗೆ ಅಭಿವೃದ್ಧಿಗೆ ವೇಗ ಸಿಗಲಿದೆ.ಜಿಲ್ಲಾಧಿಕಾರಿಗಳು ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು ಶೀಘ್ರ ಕ್ರಮ ಕೈಗೊಳ್ಳಬೇಕು.
- ಎಂ.ಎಂ. ವಿರಕ್ತಮಠ ಹಿರಿಯ ನಾಗರಿಕರ ಸೇವಾ ಸಂಘ ಲೋಕಾಪುರ