ರೋಣ: ಎಸ್.ಸಿ, ಎಸ್.ಟಿ. ಜನಾಂಗ ಹಾಗೂ ಭೂಹೀನ ತಳ ಸಮುದಾಯಗಳು ಉಳುಮೆ ಮಾಡುತ್ತಿರುವ ಬಗರ್ ಹುಕುಂ ಸಾಗುವಳಿ (ದರಖಾಸ್ತು ಮಂಜೂರಾತಿ ಸಕ್ರಮೀಕರಣ) ಕಾಲಮಿತಿಯೊಳಗಾಗಿ ಇತ್ಯರ್ಥಗೊಳಿಸಬೇಕು. ವಿನಾಕಾರಣ ವಜಾಗೊಳಿಸಿರುವ ಬಗರ್ ಹುಕುಂ ಸಾಗುವಳಿಯ ಅರ್ಜಿಗಳನ್ನು ಮರುಪರಿಶೀಲಿಸಬೇಕು ಹಾಗೂ ದಲಿತ ಜನಾಂಗಕ್ಕೆ ಕೃಷಿ ಭೂಮಿ, ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರೋಣ ತಾಲೂಕು ವತಿಯಿಂದ ಶುಕ್ರವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಎಸ್.ಸಿ.ಎಸ್,.ಪಿಟಿಎಸ್ಪಿ ನಿರ್ವಹಣೆಗೆ ಪ್ರತ್ಯೇಕ ನಿರ್ದೇಶನಾಲಯ ಅಥವಾ ಏಕಗವಾಕ್ಷಿ ಯೋಜನೆ ವ್ಯವಸ್ಥೆ ಜಾರಿಗೊಳಿಸಬೇಕು. ಸಮಾಜ ಕಲ್ಯಾಣ ಇಲಾಖೆ ಅಡಿಯ ವಿದ್ಯಾರ್ಥಿ ನಿಲಯಗಳನ್ನು ಉನ್ನತೀಕರಣಗೊಳಿಸಿ, ಪರಿಶಿಷ್ಟ ವಿದ್ಯಾರ್ಥಿಗಳಿಗೆ ನಿಗದಿತ ಅವಧಿಯೊಳಗೆ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು. ಗದಗ ನಗರದಲ್ಲಿ ದ.ಸಂ.ಸ. ಸಂಸ್ಥಾಪಕ ಬಿ. ಕೃಷ್ಣಪ್ಪ ಅವರ ನೆನಪಿಗಾಗಿ ಗದಗ ನಗರದಲ್ಲಿ ಬಿ. ಕೃಷ್ಣಪ್ಪ ಸ್ಮಾರಕ ಭವನವನ್ನು ನಿರ್ಮಿಸಬೇಕು.
ದಲಿಯ ಸಮೂದಾಯಕ್ಕೆ ಮಂಜೂರದಾದ ಕೃಷಿ ಭೂಮಿ, ವಸತಿ ಸೌಲಭ್ಯವನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಕ್ರಮಕೈಗೊಳ್ಳಬೇಕು ಮನವಿ ಮೂಲಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದರು.ಮನವಿ ಸ್ವೀಕರಿಸಿದ ತಹಸೀಲ್ದಾರ್ ನಾಗರಾಜ ಕೆ. ಮಾತನಾಡಿ, ಈ ಮನವಿ ಪತ್ರವನ್ನು ಈ ಕೂಡಲೇ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳುಹಿಸಲಾಗುವುದು ಎಂದರು.
ಈ ವೇಳೆ ನಿಂಗಪ್ಪ ಮಾದರ, ಶರಣು ಚಲವಾದಿ, ಸಂತೋಷ ಪೂಜಾರ, ಅಂದಪ್ಪ ಮಾದರ, ಅಶೋಕ ತಾಳದವರ, ಚಂದ್ರು ಮಾದರ, ಬಸವರಾಜ ಹಲಗಿ, ಬಸವರಾಜ ಜೋಗಣ್ಣರ, ಸಿದ್ದು ಅಮರಾವತಿ,ನಾಗರಾಜ ದೊಡ್ಡಮನಿ, ಬಸವರಾಜ ಚಲವಾದಿ, ಪ್ರದೀಪ ಕಾಳೆ,ಆದಿತ್ಯ ದೊಡ್ಡಮನಿ, ಮಂಜುನಾಥ ಹಾದಿಮನಿ ಸೇರಿದಂತೆ ಮುಂತಾದವರಿದ್ದರು.