ಕೊಪ್ಪಳ: ಪದವಿಪೂರ್ವ ಶಿಕ್ಷಣ ಇಲಾಖೆಯ ಅಸ್ಮಿತೆ ಉಳಿಸುವಂತೆ ಆಗ್ರಹಿಸಿ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಸಂಘದಿಂದ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಲಾಯಿತು.
ಇಲಾಖೆ ಮೇಲ್ವಿಚಾರಣೆ ಮತ್ತು ನೂತನ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ವಿರೋಧಿಸಿ ಕೇಂದ್ರ ಸಂಘಗಳ ನಿರ್ದೇಶನದಂತೆ ಕೊಪ್ಪಳದಲ್ಲಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಮತ್ತು ಉಪನ್ಯಾಸಕರ ಸಂಘಗಳು ಜಂಟಿಯಾಗಿ ಮನವಿ ಸಲ್ಲಿಸಲಾಯಿತು.
ಸಾಂಕೇತಿಕ ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸಪ್ಪ ನಾಗೋಲಿ, ಕೋಶ್ಯಾಧ್ಯಕ್ಷ ಶಾಂತಪ್ಪ ಟಿ.ಸಿ, ಪ್ರಧಾನ ಕಾರ್ಯದರ್ಶಿ ಬಸವರಾಜ್, ಉಪಾಧ್ಯಕ್ಷ ಶಿವಾನಂದ ಮೇಟಿ ಮತ್ತು ಲಲಿತಮ್ಮ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣನವರ್, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್ ಗೌಡ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಳಗುಂದಿ, ಕಾರ್ಯಧ್ಯಕ್ಷ ಮಾರುತಿ ಲಕ್ಮಾಪುರ, ಸಂಜಯ್ ಬಡಿಗೇರ್, ಎ.ಆರ್. ಶಿವಾನಂದ, ಮಂಜುನಾಥ್ ಸ್ವಾಮಿ, ಅನ್ಸರ್ ಬಾಷು, ಭೀಮಪ್ಪ, ಡಾ. ನಾಗಪುಷ್ಪಲತಾ, ಡಾ. ಲಿಂಗಣ್ಣ ಜಂಗಮರಳ್ಳಿ, ಪತ್ರೆಪ ಛತ್ತರಕಿ, ಅಜಗರ್ ಪಾಷಾ, ಮಹಿಬೂಬಅಲಿ, ಡಾ. ಸೋಮಕ್ಕ, ಪ್ರಿಯದರ್ಶಿನಿ, ಮಾಲಾ ಪಿ, ಅಮರೇಶ ದೇವರಾಳ, ನಾಗರಾಜ್, ಈರಯ್ಯ, ಎನ್.ಪಾಂಡುರಂಗ, ಸರ್ಕಾರಿ ನೌಕರ ಸಂಘದ ನಿರ್ದೇಶಕ ಎಸ್.ವಿ. ಮೇಳಿ, ರಾಜಪ್ಪ ಕೇಸರಬಾವಿ, ಶೇಖಬಾಬು, ಲಕ್ಷ್ಮಣ ಸಿಂಗ್ ವಗರನಾಳ, ಹಿರಿಯ ಪ್ರಾಚಾರ್ಯ ರಾಜಶೇಖರ ಪಾಟೀಲ್ ಸೇರಿದಂತೆ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ವಿವಿಧ ಕಾಲೇಜುಗಳಿಂದ ಸುಮಾರು ೨೫೦ಕ್ಕೂ ಹೆಚ್ಚು ಪ್ರಾಚಾರ್ಯರು, ಉಪನ್ಯಾಸಕರು, ಉಪನ್ಯಾಸಕಿಯರು ಸೇರಿ ಮೆರವಣಿಗೆ ಮೂಲಕ ಸಾಂಕೇತಿಕ ಪ್ರತಿಭಟನೆಯಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.