ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಮಂಗಳವಾರ ದೇವರಹಿಪ್ಪರಗಿ ಪಟ್ಟಣ ಪಂಚಾಯತಿಯ ಸದಸ್ಯರು ತಹಸೀಲ್ದಾರ್ ಗೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಪಪಂ ಎಲ್ಲ ಸದಸ್ಯರ ಒಮ್ಮತದ ತೀರ್ಮಾನದಂತೆ ಇಂಡಿ ತಾಲೂಕು ಜಿಲ್ಲೆ ಮಾಡುವುದಾದರೆ ದೇವರಹಿಪ್ಪರಗಿ ತಾಲೂಕನ್ನು ವಿಜಯಪುರ ಜಿಲ್ಲೆಯಲ್ಲಿ ಮುಂದುವರಿಸಿ. ನೂತನ ತಾಲೂಕಿನಿಂದ ರೈತರು ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಮತ್ತೆ ನೂತನ ಜೆಲ್ಲೆಯಲ್ಲಿ ಸೇರಿಸುವುದರಿಂದ ಮತ್ತಷ್ಟು ತೊಂದರೆ ಆಗಲಿದೆ. ವಿಜಯಪುರ ಸಮೀಪವಾಗುವ ಕಾರಣ ಜನ ಸಾಮಾನ್ಯರಿಗೆ ಆಡಳಿತ ಮತ್ತು ಅಭಿವೃದ್ಧಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು.
ಪಪಂ ಸದಸ್ಯ ಪ್ರಕಾಶ ಮಲ್ಹಾರಿ ಮಾತನಾಡಿ ಮನವಿ ಪತ್ರ ಓದಿದರು. ಬಳಿಕ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಪಟ್ಟಣ ಪಂಚಾಯಿತಿ ಸದಸ್ಯರಾದ ಕಾಸುಗೌಡ ಬಿರಾದಾರ ಜಲಕತ್ತಿ, ಉಮೇಶ ರೂಗಿ, ಕಾಸಪ್ಪ ಜಮಾದಾರ, ಶಾಂತಯ್ಯ ಜಡಿಮಠ, ಕಾಶಿನಾಥ ಭಜಂತ್ರಿ, ಸುಮಂಗಲಾ ಸೇಬೆನ್ನವರ್, ಸಿಂಧೂರ ಡಾಲೇರ, ಪ್ರತಿನಿಧಿಗಳಾದ ಸೋಮು ದೇವೂರ, ಬಸವರಾಜ ದೇವಣಗಾಂವ, ಕಾಸು ಕಡ್ಲೇವಾಡ, ಅಬ್ದುಲ್ ಬಾಗವಾನ, ನಬಿರಸೂಲ್ ಮಣೂರ, ನಾಮ ನಿರ್ದೇಶಿತ ಸದಸ್ಯ ಹುಸೇನ್ ಕೊಕಟನೂರ, ಸೇರಿದಂತೆ ಪಪಂ ಸದಸ್ಯರು. ಪಟ್ಟಣದ ಪ್ರಮುಖರು ಗಣ್ಯರು ಹಾಗೂ ಸುತ್ತಮುತ್ತಲಿನ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.