ಕನ್ನಡಪ್ರಭ ವಾರ್ತೆ ತರೀಕೆರೆ
ಪಟ್ಟಣದ ಶ್ರೀ ರೇವಣ್ಣಸಿದ್ದೇಶ್ವರ ಮಾಂಗಲ್ಯ ಮಂದಿರದಲ್ಲಿ ಭಾನುವಾರ ದಿ.ಆರ್. ದೇವಾನಂದ ಅವರ ವೈಕುಂಠ ಸಮಾರಾಧನೆ ಸಂದರ್ಭದಲ್ಲಿ ಏರ್ಪಾಡಾಗಿದ್ದ ದಿ.ಆರ್.ದೇವಾನಂದ ಅವರ ಪುಣ್ಯಸ್ಮರಣೆ, ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರ್.ದೇವಾನಂದ ಅವರ ಜತೆ ಕಳೆದ ಮೂವತ್ತು ವರ್ಷಗಳಿಂದ ಒಡನಾಟ ಹೊಂದಿದ್ದೇವೆ, ಆರ್.ದೇವಾನಂದ ಅವರು ಆಡುಮುಟ್ಟದ ಸೊಪ್ಪಿಲ್ಲದಂತೆ ಎಲ್ಲ ಕ್ಷೇತ್ರಗಳಲ್ಲೂ ಅಧ್ಯಯನ ಮಾಡಿದವರು, ಅಡಕೆ ಕೃಷಿ ಬಗ್ಗೆ ಅವರು ಅಳವಾದ ಅಧ್ಯಯನ ಮಾಡಿದ್ದರು, ಆರ್. ದೇವಾನಂದ, ನಾವು ಮತ್ತು ಮುಖಂಡರಾದ ಭೀಮರಾವ್ ಮೂರು ಜನರು ಒಟ್ಟಿಗೆ ಮ್ಯಾಮ್ಕೋಸ್ ಸಂಸ್ಥೆಗೆ ಪದಾರ್ಪಣೆ ಮಾಡಿದವರು, ಮ್ಯಾಮ್ಕೋಸ್ ಸಂಸ್ಥೆಗೆ ಆರ್.ದೇವಾನಂದ ಅವರ ಕೊಡುಗೆ ಅಪಾರವಾಗಿದೆ, ದೇವಾನಂದ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಹೇಳಿದರು.ಮಾಜಿ ಶಾಸಕ ಎಸ್.ಎಂ. ನಾಗರಾಜ್ ಮಾತನಾಡಿ, ಬಿಜೆಪಿಯನ್ನು ಸದೃಢವಾಗಿ ಕಟ್ಟಿ ಬೆಳೆಸುವಲ್ಲಿ ಆರ್. ದೇವಾನಂದ ಅವರು ಬಹಳವಾಗಿ ಹೋರಾಟ ಮಾಡಿದ್ದಾರೆ, ಸಹಕಾರ ಕ್ಷೇತ್ರದಲ್ಲಿ ಅವರು ಆಪಾರವಾದ ಕೊಡುಗೆಯನ್ನು ನೀಡಿದ್ದಾರೆ, ಅವರ ಕುಟುಂಬಕ್ಕೆ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಹೇಳಿದರು.
ಪುರಸಭೆ ಸದಸ್ಯ, ಬಿಜೆಪಿ ಮುಖಂಡ ಟಿ.ಎಂ.ಬೋಜರಾಜ್ ಮಾತನಾಡಿ, ಆರ್.ದೇವಾನಂದ ಅವರು ಹೆಚ್ಚು ಜ್ಞಾನಾರ್ಜನೆ ಸಂಪಾದಿಸಿದ್ದರು, ನಮ್ಮೆಲ್ಲರ ಹಿರಿಯರು, ಅವರು ನಮಗೆ ಸೈದ್ದಾಂತಿಕ ವಾಗಿ ಹಿರಿಯ ಮಿತ್ರರಾಗಿದ್ದರು, ಸದಾ ಪ್ರೇರಣೆ ನೀಡುತ್ತಿದ್ದರು, ಎಲ್ಲ ರಾಜಕೀಯ ಪಕ್ಷಗಳು ಆರ್.ದೇವಾನಂದ ಅವರನ್ನು ಇಷ್ಟಪಡುತ್ತಿದ್ದರು, ಆರ್.ದೇವಾನಂದ ಅವರು ರೈತರ ಹಿತಾಸಕ್ತಿಗೆ ಹೋರಾಡುತ್ತಿದ್ದರು, ಶುದ್ದ ರಾಜಕೀಯ ಚಿಕಿತ್ಸಕರಾಗಿದ್ದರು ಎಂದು ಹೇಳಿದರು.
ಕಸಾಪ ಅಧ್ಯಕ್ಷ ರವಿ ದಳವಾಯಿ, ಶಿವಮೊಗ್ಗ ಬಿ.ಜೆ.ಪಿ.ಮುಖಂಡರು ಹರಿಕೃಷ್ಣ, ಮುಖಂಡರಾದ ಮಾಕನಹಳ್ಳಿ ಭೈರಲಿಂಗಪ್ಪ, ಭೀಮರಾವ್, ಬಾಣೂರು ಚೆನ್ನಪ್ಪ ಮತ್ತಿತರರು ಮಾತನಾಡಿದರು.