ಜನರಿಗೆ ಅಭಿವೃದ್ಧಿ ಜೊತೆಗೆ ಮನರಂಜನೆ ಕಾರ್ಯ

KannadaprabhaNewsNetwork |  
Published : Jan 30, 2024, 02:04 AM IST
ನಿಪ್ಪಾಣಿ ತಾಲೂಕಿನ ಬೆನಾಡಿ ಗ್ರಾಮದಲ್ಲಿ ಜೊಲ್ಲೆ ಗ್ರುಪ್‌ವು ಆಯೋಜಿಸಿದ ಜನರಲ್ ಜೋಡೆತ್ತಿನ ಶರ್ಯತ್ತಿನ ಅ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಬಾಳು ಹಜಾರೆ ಅವರಿಗೆ 5 ಲಕ್ಷ ರೂ. ಹಾಗೂ ಟ್ರಾಫಿ ನೀಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸನ್ಮಾನಿಸಿದರು.  | Kannada Prabha

ಸಾರಾಂಶ

ಅಭಿವೃಧ್ಧಿಯೊಂದಿಗೆ ಸಾರ್ವಜನಿಕರಿಗೆ ಮನರಂಜನೆ ಮಾಡುವ ಹಾಗೂ ಅವರಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಕ್ಷೇತ್ರದ ಅಭಿವೃದ್ಧಿ ಜೊತೆಗೆ ಜೊಲ್ಲೆ ಗ್ರುಪ್ ಅಡಿಯಲ್ಲಿ ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ, ಮೊದಲಾದ ವಿವಿಧ ಕ್ಷೇತ್ರಗಳ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದೇವೆ. ಈ ಕಾರ್ಯಕ್ಕೆ ನಾಗರಿಕರಿಂದ ನಮಗೆ ಅಪಾರ ಬೆಂಬಲ ಸಿಗುತ್ತಿದ್ದು, ಭವಿಷ್ಯದಲ್ಲಿ ಅದನ್ನು ಮುಂದುವರೆಸುತ್ತೇವೆ. ಅಭಿವೃಧ್ಧಿಯೊಂದಿಗೆ ಸಾರ್ವಜನಿಕರಿಗೆ ಮನರಂಜನೆ ಮಾಡುವ ಹಾಗೂ ಅವರಲ್ಲಿ ಅಡಗಿರುವ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.ನಿಪ್ಪಾಣಿ ತಾಲೂಕಿನ ಬೆನಾಡಿ ಗ್ರಾಮದಲ್ಲಿ ಜೊಲ್ಲೆ ಗ್ರುಪ್ ಆಯೋಜಿಸಿದ ಜೋಡೆತ್ತು ಗಾಡಿ ಷರತ್ತು ವೇಳೆ ಮೈದಾನಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಜನರಲ್ ಜೋಡೆತ್ತಿನ ಷರತ್ತು ಅ ವಿಭಾಗದಲ್ಲಿ ಶಿರೂರ್‌ನ ಬಾಳು ಹಜಾರೆ ಅವರ ಜೋಡೆತ್ತು ಪ್ರಥಮ ಸ್ಥಾನ ಪಡೆದವು. ಬಾಳು ಹಜಾರೆ ಅವರಿಗೆ ₹5 ಲಕ್ಷ ಹಾಗೂ ಟ್ರೋಫಿ ನೀಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸನ್ಮಾನಿಸಿದರು. ಕೊಲ್ಹಾಪೂರದ ಸಂದೀಪ ಪಾಟೀಲರ ಜೋಡೆತ್ತುಗಳು ದ್ವಿತೀಯ ಸ್ಥಾನ ಪಡೆದು ₹3 ಲಕ್ಷ, ಹಾಗೂ ಉಮೇಶ ಜಾಧವರ ಜೋಡೆತ್ತುಗಳು ತೃತೀಯ ಸ್ಥಾನ ಪಡೆದು ₹2 ಲಕ್ಷ ಬಹುಮಾನ ಪಡೆದವು. ಜನರಲ್ ಜೋಡೆತ್ತು ಸ್ಪರ್ಧೆಯ ಬ ವಿಭಾಗದಲ್ಲಿ ದಾನೋಳಿಯ ಬಂಡಾ ಖಿಲಾರೆ ಇವರ ಜೋಡೆತ್ತುಗಳು ಪ್ರಥಮ ಸ್ಥಾನ ಪಡೆದವು. ಸಾಂಗಲಿಯ ಸಂತೋಷ ಗಿರಾಂಡೆ ಮತ್ತು ರಾವಸಾಹೇಬ ಮೇಟಕರಿ ತೃತೀಯ ಸ್ಥಾನ ಪಡೆದವು. ಮೂವರಿಗೂ ಅನುಕ್ರಮವಾಗಿ ₹2 ಲಕ್ಷ , ₹1 ಲಕ್ಷ . ಮತ್ತು ₹50 ಸಾವಿರ ಬಹುಮಾನ ವಿತರಿಸಲಾಯಿತು.ಒಂದು ಕುದುರೆ, ಒಂದು ಎತ್ತಿನ ಗಾಡಿ ಷರತ್ತಿನ ಮೊದಲ ಗುಂಪಿನಲ್ಲಿ ಕವಲಾಪುರದ ಅತುಲ ಪಾಟೀಲ ಪ್ರಥಮ, ಫಳಶಿಯ ಉಮೇಶ ಫಳಶಿ ದ್ವಿತೀಯ, ವಡಣಗೆಯ ರಾಜವೀರ ಕನಸೆ ತೃತಿಯ, ಎರಡನೇಯ ಗುಂಪಿನಲ್ಲಿ ದಾನೋಳೀಯ ಬಂಡಾ ಖಿಲಾರೆ ಪ್ರಥಮ, ಉಮರಾಣಿಯ ರಾಜು ಉಮರಾಣಿ ದ್ವಿತೀಯ, ಚಿಂಚಣಿಯ ರಾಹುಲ ಜಾಧವ ತೃತೀಯ ಸ್ಥಾನ ಪಡೆದರು. ಇದರೊಂದಿಗೆ ಒಂದು ನೌತರ ಮತ್ತು ಒಂದು ಜನರಲ್ ಕುದುರೆ ಗಾಡಿ, ನೌತರ ಹಲ್ಲಿಲ್ಲದ ಹೋರಿ ಗಾಡಿ ಷರತ್ತುಗಳೂ ಸಹ ಜರುಗಿದವು. ವಿಜೇತರಿಗೆ ನಗದು ಬಹುಮಾನ ಗಣ್ಯರು ವಿತರಿಸಿದರು. ಈ ವೇಳೆ ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ಕಾರ್ಖಾನೆಯ ಸಂಚಾಲಕ ಮಹಾಲಿಂಗ ಕೋಠಿವಾಲೆ, ರಾಜು ಗುಂದೇಶಾ, ಮಲಗೊಂಡಾ ಪಾಟೀಲ, ಪ್ರಕಾಶ ಶಿಂಧೆ, ವಿನಾಯಕ ಪಾಟೀಲ, ರಮೇಶ ಪಾಟೀಲ(ಖೇಮಣ್ಣಾ), ಬಾಳಾಸಾಹೇಬ ಕದಮ, ಸುಹಾಸ ಗೂಗೆ, ರಾವಸಾಹೇಬ ಫರಾಳೆ, ಸಿದ್ದು ನರಾಟೆ, ಕಲ್ಲಪ್ಪಾ ಜನವಾಡೆ ಸೇರಿದಂತೆ ಅನೇಕರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...