ಕನ್ನಡಪ್ರಭ ವಾರ್ತೆ ಶಿರಾ ರಾಜ್ಯದ ವಿಶ್ವಕರ್ಮರ ಕುಲ ಶಾಸ್ತ್ರೀಯ ಅಧ್ಯಯನ ವಿಶ್ವಕರ್ಮರ ಮುಂದಿನ ತಲೆಮಾರಿಗೆ ವಿಶ್ವಕರ್ಮರ ಶ್ರೇಯೋಭೀವೃದ್ದಿಗೆ ಮತ್ತು ಏಳಿಗೆಗಾಗಿ ಅಗತ್ಯವಾಗಿದೆ ಎಂದು ವಿಶ್ವಕರ್ಮ ಸಮುದಾಯದ ಮುಖಂಡ ಶಾಮಣ್ಣ ಆಚಾರ್ಯ ಹೇಳಿದರು.
ಶ್ರೀ ಕ್ಷೇತ್ರದ ಕೈದಾಳ ಶ್ರೀ ಚನ್ನಕೇಶವ ದೇವಸ್ಥಾನದ ಪುರೋಹಿತರು ಜಯಸಿಂಹ ಮಾತನಾಡಿ ಶ್ರೀ ಚನ್ನಕೇಶವ ದೇಗುಲ 900 ವರ್ಷಗಳ ಇತಿಹಾಸ ಹೊಂದಿದೆ. ವಾಸ್ತ ಶಿಲ್ಪಿ ಅಮರ ಶಿಲ್ಪಿ ಜಕಣಾಚಾರಿ ರವರು ಕೈ ಇಲ್ಲದೆ ಡಂಕಣ ಚಾರಿ ಸೇರಿ ದೇಗುಲ ಶ್ರೀ ಚನ್ನಕೇಶವ ದೇವಸ್ಥಾನವನ್ನು ಕಲ್ಲಿನ ಕುಸುರಿ ಶಿಲ್ಪ ಕೆಲಸ ವನ್ನು ಪ್ರಾಚೀನ ಕಾಲದಲ್ಲಿ ಮಾಡಿದದಾರೆ. ದೇವ ಶಿಲ್ಪಿ ಜಕಣಾಚಾರಿ ಐತಿಹಾಸಿಕ ವ್ಯಕ್ತಿ ಕಾಲ್ಪನಿಕ ಅಲ್ಲ ಕಾಲ್ಪನಿಕ ವ್ಯಕ್ತಿ ಅನುವುದು ಸುಳ್ಳು ಅವರು ಮಾಡಿರುವ ಕೈದಾಳ ಕ್ಷೇತ್ರ ಶ್ರೀ ಚನ್ನಕೇಶವ ಶಿಲ್ಪ ಕಲೆಯೇ ಇದಕ್ಕೆ ಸಾಕ್ಷಿ ಎಂದರು. ವಿಶ್ವಕರ್ಮ ಮುಖಂಡ ಎಸ್.ಜಿ.ರುದ್ರಾಚಾರ್ ಮಾತನಾಡಿ ಅವರು ವಿಶ್ವಕರ್ಮರ 41ಉಪಜಾತಿಯಲ್ಲಿ ಬರುವ ಅಕ್ಕಸಾಲಿಗ ಎಂಬುವುದು ತಪ್ಪು ವ್ಯಾಖ್ಯಾನವಾಗಿದೆ. ಈ ಅಕ್ಕಸಾಲಿಗ ಪದ ಬಳಕೆ ನಿಷೇದಿಸಿ. ವಿಶ್ವಕರ್ಮರ ಪಂಡಿತರು ಹೇಳುವ ಪ್ರಕಾರ ಅರ್ಕಶಾಲೆ ಎಂದು ಸೇರ್ಪಡೆಗೊಳಿಸಿ. ಸರಕಾರದಮಟ್ಟದಲ್ಲಿ ಅರ್ಕ ಶಾಲೆ ಎಂದು ಪ್ರಚಾರ ಮಾಡಬೇಕು. ವಿಶ್ವಕರ್ಮ ಉಪಜಾತಿಗೆ ಮುಜುಗರ ತಪ್ಪಿಸಿ ಎಂದರು. ಈ ಸಂದರ್ಭದಲ್ಲಿ ಡಿ.ದೇವರಾಜ ಅರಸು ಸಂಶೋಧನ ತಂಡದ ಪ್ರೋ. ಡಿ.ಸಿ.ನಂಜುಂಡ, ಡಾ.ಎಂ.ಮಹಾದೇವ್, ಡಾ.ಕೃಷ್ಣಮೂರ್ತಿ, ವಿಶ್ವಕರ್ಮ ಮುಖಂಡರಾದ ಕೃಷ್ಣಮೂರ್ತಿ.ಕೆ.ವಿ, ಶಾಮಣ್ಣ ಆಚಾರ್ಯ, ಅಶ್ವಥ ನಾರಾಯಣ ಚಾರ್ಯ, ಸೋಮಶೇಖರಾಚಾರ್ಯ, ಉಮ ಮಹೇಶ ಚಾರ್ಯ, ಚಿಕ್ಕಸ್ವಾಮಿ ಆಚಾರ್ಯ, ಭದ್ರಚಾರ್ಯ, ವೀರಬ್ರಹ್ಮಚಾರ್, ವಿಶ್ವಮೂರ್ತಿ.ಎನ್ ಸೇರಿದಂತೆ ಹಲವರು ಹಾಜರಿದ್ದರು.