)
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ೧೦೦ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಿಎಂ, ಡಿಸಿಎಂ ಆಶೀರ್ವಾದದ ಫಲವಾಗಿ ೧೧೦ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ₹೪೭೫ ಕೋಟಿ ಅನುದಾನ ನೀಡಿದ್ದಾರೆ. ನಾನು ಪ್ರಥಮ ಬಾರಿಗೆ ಶಾಸಕನಾದರೂ ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಶಂಕುಸ್ಥಾಪನೆಗೂ ಆಗಮಿಸಿದ್ದಾರೆ, ಕ್ಷೇತ್ರದ ಜನರ ಪರವಾಗಿ ಸಿಎಂ, ಡಿಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.೧೧೦ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾದರೆ ಗುಂಡ್ಲುಪೇಟೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಇರುವುದಿಲ್ಲ, ನನ್ನ ಶಾಸಕತ್ವ ಅವಧಿಯೊಳಗೆ ಶೇ.೮೦ ಅಥವಾ ೯೦ರಷ್ಟು ಕೆಲಸ ಪೂರ್ಣಗೊಳಿಸಿ ಚಾಲನೆ ನೀಡುವ ಉದ್ದೇಶವಿದೆ ಎಂದು ಭರವಸೆ ನೀಡಿದರು.
ಕಳೆದ ಬಜೆಟ್ ನಲ್ಲಿ ಗುಂಡ್ಲುಪೇಟೆ ಯುಜಿಡಿ ಹಾಗೂ ಸಂಚಾರ ಠಾಣೆ ಹಾಗೂ ನ್ಯಾಷನಲ್ ಹೈವೇ ಗುಂಡ್ಲುಪೇಟೆಯಲ್ಲಿ ಹಾದು ಹೋಗಿರುವ ಕಾರಣ ಟ್ರಾಮ್ ಸೆಂಟರ್ ಮಂಜೂರಾಗಿದೆ. ಕನಕ ಭವನಕ್ಕೂ ಅನುದಾನ ಬೇಕು ಎಂದು ಸಿಎಂಗೆ ಮನವಿ ಮಾಡಿದ್ದೇನೆ ಎಂದರು.
ನಾನು ಸುಳ್ಳು ಹೇಳಿ ರಾಜಕಾರಣ ಮಾಡಲ್ಲ:
ನಾನು ವಿಪಕ್ಷಗಳ ಟೀಕೆಗೆ ತಲೆ ಕೆಡಸಿಕೊಳ್ಳದೇ ಕ್ಷೇತ್ರದ ಜನತೆಗೆ ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡುತ್ತೇನೆ, ಮಹದೇವ ಪ್ರಸಾದ್ ಅವರ ಹಾದಿಯಲ್ಲಿಯೇ ಸಾಗುತ್ತೇನೆ ಎಂದರು.
ಸ್ಮರಣೆ ಅಗತ್ಯ:
ಡಿಕೆ... ಡಿಕೆ... ಕೂಗು, ಕೇಳಿ ಸಿಟ್ಟಾದ ಸಿಎಂ!
ಚಾಮರಸಿ ಸ್ವಾಗತ:
ಗುಂಡ್ಲುಪೇಟೆ ಪಟ್ಟಣದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಆಗಮಿಸಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದಿಂದ ಚಾಮರಸಿ ಸ್ವಾಗತ ದೊರೆಯಿತು.ಗಣೇಶ್ ಪ್ರಸಾದ್ ಬೇರೆ ರಾಜಕಾರಣಿಗಳಂತೆ ಭರವಸೆ ಕೊಡಲ್ಲ: ಸುನಿಲ್ ಬೋಸ್ಕನ್ನಡಪ್ರಭ ವಾರ್ತೆ,ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಬೇರೆ ರಾಜಕಾರಣಿಗಳಂತೆ ಸುಳ್ಳು ಭರವಸೆ ಕೊಡಲ್ಲ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
ಸಮಾರಂಭದಲ್ಲಿ ಮಾತನಾಡಿ, ಶಾಸಕ ಗಣೇಶ್ ಪ್ರಸಾದ್ರ ಬಗ್ಗೆ ವಿಪಕ್ಷಗಳು ಬಹಳ ಮಾತು ಆಡಿದ್ದಾರೆ. ಮೂರು ವರ್ಷದಲ್ಲಿ ₹1 ಸಾವಿರ ಕೋಟಿ ಅನುದಾನ ತಂದಿದ್ದಾರೆ ಎಂದು ಕೊಂಡಾಡಿದರು.ಮಾಜಿ ಸಚಿವ ದಿವಂಗತ ಎಚ್.ಎಸ್.ಮಹದೇವ ಪ್ರಸಾದ್ ರ ದೂರದೃಷ್ಟಿಯ ಫಲವಾಗಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಕ್ಷೇತ್ರ ಅಭಿವೃದ್ಧಿಯಾಗಿವೆ. ಸಿಎಂ ಕೂಡ ಜಿಲ್ಲೆ ಹಾಗೂ ಗುಂಡ್ಲುಪೇಟೆಗೆ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದರು.ಗಣೇಶ್ ಪ್ರಸಾದ್ ಉತ್ತಮ ಶಾಸಕ: ಸಚಿವ ಸತೀಶ್ ಜಾರಕಿಹೊಳಿ ಬಣ್ಣನೆ
ಗುಂಡ್ಲುಪೇಟೆ: ತಾಲೂಕಿಗೆ ೧೧೦ ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸುವಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಯಶಸ್ಸು ಕಂಡಿದ್ದಾರೆ. ಹಾಗಾಗಿ ಅವರು ಆದರ್ಶ, ಉತ್ತಮ ಶಾಸಕ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.ಸಮಾರಂಭದಲ್ಲಿ ಮಾತನಾಡಿ, ಶಾಸಕ ಗಣೇಶ್ ಪ್ರಸಾದ್ ಮುತುವರ್ಜಿ ವಹಿಸಿ ಸಿಎಂ ಮೇಲೆ ಒತ್ತಡ ತಂದು ₹೫೩೫ ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ಕೊಡಿಸಿದ್ದಾರೆ ಎಂದರು.