ಬಸವೇಶ್ವರ ಜಯಂತಿ ನಿಮಿತ್ತ ಗೋವುಗಳಿಗೆ ಪೂಜೆ ಸಲ್ಲಿಸಿ ಮೆರವಣಿಗೆ

KannadaprabhaNewsNetwork |  
Published : Apr 22, 2026, 02:00 AM IST
21ಕೆಎಂಎನ್ ಡಿ27 | Kannada Prabha

ಸಾರಾಂಶ

ರೈತರು ತಮ್ಮ ರಾಸುಗಳನ್ನು ಅಲಂಕರಿಸಿ ಕರೆ ತಂದು ತಿಲಕ, ಹೂವಿನ ಅಲಂಕಾರ ಮಾಡಿ ಆರತಿ ಬೆಳಗಿದರು. ಗೋವುಗಳಿಗೆ ದೇವರ ಪ್ರಸಾದವಾಗಿ ಹಣ್ಣು, ರಸಾಯನ ತಿನಿಸಲಾಯಿತು. ಅರ್ಚಕರುತೀರ್ಥ ಪ್ರೋಕ್ಷಣೆ ಮಾಡಿ ಗೋವುಗಳ ಮೆರವಣಿಗೆಗೆ ಚಾಲನೆ ನೀಡಿದರು.

ಕಿಕ್ಕೇರಿ:

ಭೈರವರಾಜರ ತಪೋಭೂಮಿ ಶರಣರ ಗ್ರಾಮ ಸಾಸಲು ಗ್ರಾಮದಲ್ಲಿ ಸಂಭ್ರಮ ಸಡಗರದಿಂದ ಬಸವೇಶ್ವರ ಜಯಂತಿ ಅಂಗವಾಗಿ ಬಸವಣ್ಣ (ಗೋವು)ನನ್ನು ಪೂಜಿಸಿದರು.

ಜಯಂತಿ ಅಂಗವಾಗಿ ಗ್ರಾಮಸ್ಥರು ಬಸವೇಶ್ವರ ದೇಗುಲಕ್ಕೆ ಆಗಮಿಸಿದ್ದರು. ರೈತರು ತಮ್ಮ ರಾಸುಗಳನ್ನು ಅಲಂಕರಿಸಿ ಕರೆ ತಂದು ತಿಲಕ, ಹೂವಿನ ಅಲಂಕಾರ ಮಾಡಿ ಆರತಿ ಬೆಳಗಿದರು. ಗೋವುಗಳಿಗೆ ದೇವರ ಪ್ರಸಾದವಾಗಿ ಹಣ್ಣು, ರಸಾಯನ ತಿನಿಸಲಾಯಿತು. ಅರ್ಚಕರುತೀರ್ಥ ಪ್ರೋಕ್ಷಣೆ ಮಾಡಿ ಗೋವುಗಳ ಮೆರವಣಿಗೆಗೆ ಚಾಲನೆ ನೀಡಿದರು.

ಸಾಮೂಹಿಕವಾಗಿ ಬಸವೇಶ್ವರ ಭಾವಚಿತ್ರವನ್ನು ಪೂಜಿಸಿದರು. ತಮಟೆ, ನಾದಸ್ವರದೊಂದಿಗೆ ಗ್ರಾಮದ ರೈತಾಪಿ ಜನತೆ ತಮ್ಮ ಗೋವುಗಳನ್ನು ಊರಿನಲ್ಲೆಲ್ಲ ಮೆರವಣಿಗೆ ಸಾಗಿದರು. ಅಂತಿಮವಾಗಿ ಸೋಮೇಶ್ವರ ದೇವಾಲಯದ ಬಾಲಾಲಯ ಬಳಿ ಮೆರವಣಿಗೆ ಸಾಗಿತು. ಸೋಮೇಶ್ವರದೇಗುಲದ ಎದುರು ಗೋವು ಹಾಗೂ ದೇವರಿಗೆ ಪೂಜೆ ಸಲ್ಲಿಸಲಾಯಿತು.

ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ರೈತಾಪಿ ಜನತೆ, ವೀರಶೈವ ಸಮುದಾಯದವರು ಬಸವಣ್ಣನ ಕುರಿತು ವಚನ ವಾಚಿಸಿದರು. ಬಸವೇಶ್ವರ ಆದರ್ಶ ತತ್ವ ಕುರಿತು ವಿವಿಧ ಮುಖಂಡರು ಮಾತನಾಡಿದರು.ಶನೇಶ್ವರಸ್ವಾಮಿಗೆ ಭಕ್ತರಿಂದ ಕವಚಧಾರಣೆ

ಹಲಗೂರು: ಸಮೀಪದ ಪುರುದೊಡ್ಡಿ ಗ್ರಾಮದ ಶನೇಶ್ವರಸ್ವಾಮಿ ದೇವರ ಮೂರ್ತಿಗೆ ಲಾವಣ್ಯ ದೇವರಾಜ್ ನೂತನವಾಗಿ ಕವಚ ಮಾಡಿಸಿ ದೇವರಿಗೆ ಧರಿಸಲು ನೀಡಿದರು.ಅರ್ಚಕ ಶೈಲೇಶ ದೇವರಿಗೆ ಕವಚವನ್ನು ಧರಿಸಿ ವಿವಿಧ ಪುಷ್ಪಗಳಿಂದ ಅಲಂಕರಿಸಿ ಮೂರ್ತಿಗೆ ವಿಶೇಷವಾಗಿ ಪೂಜೆ ಪುನಸ್ಕಾರಗಳನ್ನು ನಡೆಸಿದ ನಂತರ ಭಕ್ತರಿಗೆ ಪ್ರಸಾದ ವಿನಿಯೋಗಿಸಿದರು.

ದೇವಸ್ಥಾನದ ಖಜಾಂಜಿ ಜಯರಾಮ ಮಾತನಾಡಿ, ದೇವರಾಜು ದಂಪತಿ ಶನೇಶ್ವರ ಸ್ವಾಮಿಗೆ ಕವಚ ಮಾಡಿಸಿಕೊಟ್ಟಿದ್ದಾರೆ. ದೇವರು ಅವರಿಗೆ ಆರೋಗ್ಯ ಐಶ್ವರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇವೆ. ವಿಶೇಷ ದಿನಗಳಲ್ಲಿ ಈ ಕವಚವನ್ನು ಧರಿಸಿ ಪೂಜೆ ಪುನಸ್ಕಾರವನ್ನು ನಡೆಸುವುದಾಗಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವದ ಮೊದಲ ಸಂವಿಧಾನ ಶಿಲ್ಪಿ ಬಸವಣ್ಣ: ರಂಗನಾಥ್
ಮುಂಗಾರು ಹಂಗಾಮಿಗೆ ಸಿದ್ಧತೆ ಮಾಡಿಕೊಳ್ಳಿ