ಬೆಳಗೊಳ ಗ್ರಾಮದ ಬನ್ನಾರಮ್ಮ ದೇವಿಗೆ ಹರಕೆ ತೀರಿಸಿದ ಭಕ್ತರು

KannadaprabhaNewsNetwork |  
Published : Apr 22, 2026, 02:00 AM IST
21ಕೆಎಂಎನ್ ಡಿ23 | Kannada Prabha

ಸಾರಾಂಶ

ವಿವಿಧೆಡೆಯ ಭಕ್ತರು ದೇವಿಯಲ್ಲಿ ಹರಿಕೆ ಮಾಡಿಕೊಂಡು ಬೇವಿನ ಸೊಪ್ಪು ಹಿಡಿದು ಬಾಯಿ ಬೀಗ ಚುಚ್ಚಿಸಿ ಹರಿಕೆ ತೀರಿಸಲು ಬಣ್ಣಾರಿ ಮಾರಿಯಮ್ಮನ ಕರಗ ಮಹೋತ್ಸವದ ಅಂಗವಾಗಿ 18 ಅಡಿ ಉದ್ದದ ಸರಳಿನ ಬಾಯಿಬೀಗ ಹಾಕಿಸಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಬೆಳಗೊಳ ಗ್ರಾಮದ ಕೋಟೆ ಮಾಳ ಬೀದಿಯಲ್ಲಿನ ಬನ್ನಾರಮ್ಮ ದೇವಿಗೆ ಹರಿಕೆ ಹೊತ್ತ ಭಕ್ತರು 18 ಅಡಿ ಉದ್ದದ ಸರಳಿನಿಂದ ಬಾಯಿ ಬೀಗ ಹಾಕಿಸಿಕೊಂಡು ಹರಕೆ ತೀರಿಸಿದರು.

ಕಳೆದ 27 ವರ್ಷದಿಂದ ವಾಣಿಯಾರ್ ಶ್ರೀಬನ್ನಾರಿ ಮಾರಮ್ಮ ನವರ ಭಕ್ತ ಮಂಡಳಿಯಿಂದ ಶ್ರೀ ಬನ್ನಾರಿ ಮಾರಮ್ಮನ ಕರಗ ಮಹೋತ್ಸವ ನಡೆಸಲಾಗುತ್ತಿದೆ. ವಿವಿಧೆಡೆಯ ಭಕ್ತರು ದೇವಿಯಲ್ಲಿ ಹರಿಕೆ ಮಾಡಿಕೊಂಡು ಬೇವಿನ ಸೊಪ್ಪು ಹಿಡಿದು ಬಾಯಿ ಬೀಗ ಚುಚ್ಚಿಸಿ ಹರಿಕೆ ತೀರಿಸಲು ಬಣ್ಣಾರಿ ಮಾರಿಯಮ್ಮನ ಕರಗ ಮಹೋತ್ಸವದ ಅಂಗವಾಗಿ 18 ಅಡಿ ಉದ್ದದ ಸರಳಿನ ಬಾಯಿಬೀಗ ಹಾಕಿಸಿಕೊಂಡಿದ್ದರು.

ಸೋಮವಾರ ರಾತ್ರಿ ಬಲಮುರಿ ಕಾವೇರಿ ನದಿಯಲ್ಲಿ ದೇವರ ಮಡಿ ಮಾಡಿ ಕರಗ ಮಹೋತ್ಸವ ಮೆರವಣಿಗೆ ನಡೆಸಲಾಯಿತು. ಮಂಗಳವಾರ ಬೆಳಗ್ಗೆ ಗ್ರಾಮದ ಮುಂಭಾಗದ ಆಂಜನೇಯ ಹಾಗೂ ಮಾರಮ್ಮನ ದೇವಾಲಯದಲ್ಲಿ ವಿವಿಧ ಪೂಜೆ ಸಲ್ಲಿಸಿ, ಹರಿಕೆ ಹೊತ್ತ ಭಕ್ತರಿಗೆ ಬಾಯಿ ಬೀಗ ಹಾಕಿಸಿಕೊಂಡರು.

ರಣ ಬಿಸಿಲಿನ್ನು ಲೆಕ್ಕಿಸದ ಭಕ್ತರು 18 ಅಡಿ ಉದ್ದದ ದೊಡ್ಡ ಸರಳಿನ ಬಾಯಿ ಬೀಗ ಹಾಕಿಸಿಕೊಂಡು ಸರತಿ ಸಾಲಿನಲ್ಲಿ ದೇವಿ ಬಣ್ಣಾರಿ ಮಾರಿಯಮ್ಮನ ದೇಗುಲದ ವರೆಗೂ ಟಮಟೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದರು.ಶ್ರೀಶಂಕರಾಚಾರ್ಯರ ಜಯಂತಿ ಆಚರಣೆ

ಶ್ರೀರಂಗಪಟ್ಟಣ:ಪಟ್ಟಣದ ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಶ್ರೀಶಂಕರಾಚಾರ್ಯರ ಜಯಂತಿಯನ್ನು ತಹಸೀಲ್ದಾರ್ ಚೇತನ ಯಾದವ್ ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಿದರು.

ನಂತರ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಅಧ್ಯಕ್ಷ ವೇದ ಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ ಮಾತನಾಡಿ, ಹಿಂದು ಧರ್ಮದ ಅದ್ವೈತ ಸಿದ್ಧಾಂತವನ್ನು ಪ್ರಪಂಚದಲ್ಲಿ ಶಂಕರಾಚಾರ್ಯರು ಪ್ರತಿಪಾದಿಸಿ ಅದರ ಮೌಲ್ಯಗಳನ್ನು ಜಗತ್ತಿಗೆ ಕಾಣುವಂತೆ ಎತ್ತಿ ಹಿಡಿದ ಮಹನೀಯರ ತತ್ವ ಆದರ್ಶಗಳನ್ನು ನಾವು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.ಈ ವೇಳೆ ಶ್ರೀರಂಗಪಟ್ಟಣ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಿ.ಎಚ್ ಕೃಷ್ಣ, ನಿರ್ದೇಶಕರಾದ ನರಸಿಂಹ ಮೂರ್ತಿ, ಗಂಗಾಧರ್ ಶರ್ಮ, ರಮೇಶ್ ಶರ್ಮ ಸೇರಿದಂತೆ ತಾಲೂಕು ಕಚೇರಿಯ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಕನ್ನಡ ಪರ ಸಂಘಟನೆಗಳ ಮುಖಂಡರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವದ ಮೊದಲ ಸಂವಿಧಾನ ಶಿಲ್ಪಿ ಬಸವಣ್ಣ: ರಂಗನಾಥ್
ಮುಂಗಾರು ಹಂಗಾಮಿಗೆ ಸಿದ್ಧತೆ ಮಾಡಿಕೊಳ್ಳಿ