ಕನ್ನಡಪ್ರಭ ವಾರ್ತೆ ಸಿರಿಗೆರೆ
ತರಳಬಾಳು ಬೃಹನ್ಮಠದ ದಾಸೋಹಕ್ಕೆ ಶನಿವಾರ ಜಗಳೂರು, ಹರಪನಹಳ್ಳಿ, ಕೊಟ್ಟೂರು, ದಾವಣಗೆರೆ ಮತ್ತು ಹೊಳಲ್ಕೆರೆ ತಾಲ್ಲೂಕಿನ ಭಕ್ತರು ಸ್ವಯಂಪ್ರೇರಿತವಾಗಿ ೬೮೮ ಕ್ವಿಂಟಾಲ್ ರಾಗಿ, ೧೩ ಕ್ವಿಂಟಾಲ್ ಜೋಳ, ೫೮ ಕ್ವಿಂಟಾಲ್ ಅಕ್ಕಿ, ೯೨೨ ಪೆಂಡಿ ರಾಗಿ ಮೇವು ಮುಂತಾದ ಸಾಮಗ್ರಿಗಳನ್ನು ಸಂಗ್ರಹಿಸಿ ತಂದು ಶ್ರೀಗಳಿಗೆ ಸಮರ್ಪಿಸಿದ ಸಂದರ್ಭದಲ್ಲಿ ಏರ್ಪಸಿದ್ದ ಸಮಾರಂಭದಲ್ಲಿ ಶ್ರೀಗಳವರು ಆಶೀರ್ವಚನ ನೀಡಿದರು.
ಜಗಳೂರು, ಹರಪನಹಳ್ಳಿ, ಕೊಟ್ಟೂರು ತಾಲ್ಲೂಕು ಬರಪೀಡಿತ ತಾಲ್ಲೂಕುಗಳು. ಆದರೂ ಅಲ್ಲಿನ ಭಕ್ತರು ಮಠದ ಸೇವಾ ಕಾರ್ಯಕ್ಕೆ ಸಂಗ್ರಹಿಸಿ ತಂದಿರುವ ಧಾನ್ಯದ ಔದಾರ್ಯದಿಂದ ನಮ್ಮ ಮನಸ್ಸು ತುಂಬಿ ಬಂದಿದೆ ಎಂದರು.ಭಕ್ತಿಯನ್ನು ತೂಕ ಮಾಡಬಾರದು. ಭಕ್ತರ ಕೊಡುಗೆ ಭಕ್ತಿಯೇ ಹೊರತು ಅದು ತೂಕಕ್ಕೆ ಸಿಗಬಾರದು. ಭಕ್ತಿಯನ್ನು ತೂಕ ಮಾಡಬಾರದು. ಅದಕ್ಕಾಗಿಯೇ ನಾವು ಈ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಾರದೇ ಏರ್ಪಸಿದ್ದ ತುಲಾಭಾರ ಬೇಡವೆಂದು ತಿಳಿಹೇಳಿದೆವು. ನಾವು ತಕ್ಕಡಿಯಲ್ಲಿ ಕುಳಿತುಕೊಂಡಿದ್ದರೆ ನಿಮ್ಮ ಭಕ್ತಿಯನ್ನು ಅಳತೆ ಮಾಡಿದಂತಾಗುತ್ತಿತ್ತು ಎಂದರು.
ರೈತರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲಿ ಭದ್ರಾ ಮೇಲ್ದಂಡೆ ಯೋಜನೆಯೂ ಒಂದು. ೧೬೦೦೦ ಕೋಟಿ ಯೋಜನೆ ೨೧೮೦೦ ಕೋಟಿ ಪರಿಷ್ಕೃತ ಯೋಜನೆ. ಕೇಂದ್ರ ಸರ್ಕಾರ ಈ ಯೋಜನೆಗೆ ಹಣ ಕೊಡಲಿಲ್ಲವೆಂದು ದೂರುತ್ತಾರೆ. ಇದು ರಾಜ್ಯ ಸರ್ಕಾರದ ಯೋಜನೆ. ರಾಜ್ಯ ಸರ್ಕಾರ ಈ ಯೋಜನೆಗೆ ಕೇಂದ್ರದ ನೆರವು ಕೇಳಿದೆ. ಆಗ ಇದ್ದ ರಾಷ್ಟ್ರೀಯ ಯೋಜನೆ ರದ್ದಾದ ಕಾರಣದಿಂದ ಕೇಂದ್ರದಿಂದ ನೆರವು ಬಂದಿಲ್ಲ. ಯೋಜನೆಗೆ ಮತ್ತೆ ಕೆಳಹಂತದಿಂದ ಪ್ರಸ್ತಾವನೆ ಸಲ್ಲಿಸುವ ಕೆಲಸ ಆಗಬೇಕಿತ್ತು. ಅದಕ್ಕೆ ಈಗ ಚಾಲನೆ ದೊರೆತಿದೆ ಎಂದು ಶ್ರೀಗಳು ತಿಳಿಸಿದರು.
ಸಿರಿಗೆರೆ: ಮಧ್ಯ ಪ್ರಾಚ್ಯ ದೇಶಗಳಲ್ಲಿ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮ ಜಗತ್ತಿನಲ್ಲಿ ಅಸ್ಥಿರತೆ ಮೂಡಿದೆ. ನಿತ್ಯ ಬಳಕೆಯ ಪೆಟ್ರೋಲ್, ಡೀಸೆಲ್, ಅಡಿಗೆ ಅನಿಲಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಭದ್ರಾ ಮೇಲ್ಡಂಡೆ ಮಧ್ಯ ಕರ್ನಾಟಕದ 12 ತಾಲೂಕುಗಳ ರೈತ ಸಮುದಾಯಕ್ಕೆ ನೆರವಾಗುವ ಬೃಹತ್ ಯೋಜನೆ. ಇದರ ಕಾಮಗಾರಿ ಪೂರ್ಣಗೊಂಡು ಯೋಜನೆ ಸುಲಲಿತವಾಗಿ ನಡೆದರೆ 75 ಲಕ್ಷ ರೈತ ಕುಟುಂಬಗಳು ನಿಟ್ಟುಸಿರು ಬಿಡಲಿವೆ. ೨.೭೫ ಲಕ್ಷ ಹೆಕ್ಟೇರ್ ಭೂಮಿಗೆ ಅನುಕೂಲವಾಗಲಿದೆ. ಈ ಯೋಜನೆ ಸಾಕಾರವಾಗಲು ೧೨ ತಾಲ್ಲೂಕುಗಳ ಗ್ಯಾರಂಟಿ ಫಲಾನುಭವಿಗಳು ತ್ಯಾಗ ಮಾಡಬೇಕಾಗಿದೆ. ಅಂತಹ ಔದಾರ್ಯವನ್ನು ಜನರು ತೋರಿಸಲಿದ್ದಾರೆಯೇ ಎಂಬುದು ಪ್ರಶ್ನೆಯಾಗಿದೆ ಎಂದರು.